'ಕುಳ್ಳಪ್ಪ ವೃತ್ತದಲ್ಲಿ ವ್ಯಕ್ತಿ ಹಾಗೂ ಆಫ್ರಿಕಾ ಪ್ರಜೆಗಳು ನಡೆದುಕೊಂಡು ಹೊರಟಿದ್ದರು. ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿತ್ತು. ಅದೇ ಸಂದರ್ಭದಲ್ಲಿ ಆಫ್ರಿಕಾ ಪ್ರಜೆ, ಚಾಕುವಿನಿಂದ ವ್ಯಕ್ತಿಯ ದೇಹದ ಹಲವೆಡೆ ಇರಿದಿದ್ದ. ರಕ್ತಸ್ರಾವದಿಂದ ವ್ಯಕ್ತಿ ಮೃತಪಟ್ಟಿದ್ದಾನೆ' ಎಂದೂ ತಿಳಿಸಿದರು. 'ಕೊಲೆಯಾದ ವ್ಯಕ್ತಿ ಹಾಗೂ ಆರೋಪಿ, ಪರಿಚಯಸ್ಥರೆಂದು ತಿಳಿದುಬಂದಿದೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕವೇ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ' ಎಂದೂ ಹೇಳಿದರು.