ಪತ್ರಕರ್ತ ಡಿ. ಉಮಾಪತಿ, ‘ಹಿಟ್ಲರ್ನ ಧೋರಣೆಗಳು ಸತ್ತಿಲ್ಲ. ಪ್ರಚಂಡ ನಾಯಕರ ಒಡಲು, ಮಿದುಳುಗಳನ್ನು ಸೇರಿಕೊಂಡಿವೆ. ಜನತಂತ್ರದ ಆಧಾರ ಸ್ತಂಭಗಳು ಶಿಥಿಲವಾಗಿವೆ. ನ್ಯಾಯಾಂಗ ವ್ಯವಸ್ಥೆ ಕೂಡ ಹಳಿತಪ್ಪಿದೆ. ದೇಶದ ದಶ ದಿಕ್ಕುಗಳಲ್ಲಿ ಸುಳ್ಳು ಸುದ್ದಿಗಳ ಆರ್ಭಟ ಹೆಚ್ಚುತ್ತಿದೆ. ಜನರ ಆಲೋಚನಾ ಶಕ್ತಿಯನ್ನು ಕುಂದಿಸುವುದು, ನಿಯಂತ್ರಿಸುವುದು ಸುಳ್ಳು ಸುದ್ದಿಗಳ ಗುರಿಯಾಗಿವೆ. ರೈತರ ಹೋರಾಟವು ಸಮಾಜದ ಎಲ್ಲರ ಹೋರಾಟವಾಗಬೇಕು. ಗೂಗಲ್ನಿಂದ ಆಹಾರಧಾನ್ಯವನ್ನು ಡೌನ್ಲೋಡ್ ಮಾಡಿಕೊಳ್ಳಲು ಬರುವುದಿಲ್ಲ. ಇದನ್ನು ಮರೆತಿರುವ ವರ್ಗಕ್ಕೆ ಈ ಸತ್ಯವನ್ನು ನೆನಪಿಸಬೇಕಿದೆ’ ಎಂದರು.