<p><strong>ಬೆಂಗಳೂರು:</strong>ಅಪಾಯದ ಸೂಚನೆ ಸಿಗುತ್ತಿದ್ದಂತೆ ಎಚ್ಚರಗೊಳ್ಳುವ ಮಿದುಳು. ಚುರುಕುಗೊಳ್ಳುವ ಕಾಲುಗಳು. ಕಮಾಂಡರ್ ಕಡೆಯಿಂದ ಆದೇಶ ಹೊರಡುತ್ತಿದ್ದಂತೆ ಕಾರ್ಯಾಚರಣೆಗೆ ಧುಮುಕುವ ಯುವತಿಯರು. ಮುಗಿಲೆತ್ತರಕ್ಕೆ ಹೊತ್ತಿದ್ದ ಬೆಂಕಿ ಕ್ಷಣಾರ್ಧದಲ್ಲಿಯೇ ಶಾಂತ!</p>.<p>ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಮಹಿಳಾ ಅಗ್ನಿಶಾಮಕ ಸಿಬ್ಬಂದಿಯಿಂದ ನಡೆದ ಅಣಕು ಪ್ರದರ್ಶನದ ನೋಟವಿದು. ಏಷ್ಯಾದಲ್ಲಿಯೇ ಮೊದಲ ಬಾರಿಗೆ ಮಹಿಳಾ ತಂಡವೊಂದು ಇಂತಹ ಕಾರ್ಯಾಚರಣೆ ನಡೆಸಿತು.</p>.<p>ಅಗ್ನಿ ಅವಘಡ ಸಂಭವಿಸಿದಾಗ ಬೆಂಕಿಯನ್ನು ನಿಯಂತ್ರಣಕ್ಕೆ ತರುವ ಬಗೆ, ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು, ಪ್ರಯಾಣಿಕರನ್ನು ರಕ್ಷಿಸಲು ಯಾವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂಬುದನ್ನು ಯುವತಿಯರು ತೋರಿಸಿಕೊಟ್ಟರು.</p>.<p>ಕೋಲ್ಕತ್ತದಲ್ಲಿನ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಗ್ನಿಶಾಮಕ ತರಬೇತಿ ಕೇಂದ್ರದಲ್ಲಿ ಈ ತಂಡದ 14 ಯುವತಿಯರು ನಾಲ್ಕು ತಿಂಗಳ ತರಬೇತಿ ಪಡೆದಿದ್ದಾರೆ. ದೈಹಿಕ ಸಾಮರ್ಥ್ಯ ಮತ್ತು ಲಿಖಿತ ಪರೀಕ್ಷೆಯಲ್ಲಿ ಇವರು ಉತ್ತೀರ್ಣರಾಗಿದ್ದಾರೆ. ಎಂಜಿನಿಯರಿಂಗ್, ವಿಮಾನದ ಸಂರಚನೆ, ಅಗ್ನಿ ಸುರಕ್ಷತೆ ಕುರಿತು ತರಬೇತಿ ಪಡೆದಿದ್ದಾರೆ.</p>.<p>ಸದ್ಯ, ಈ ತಂಡ ವಿಮಾನ ರಕ್ಷಣೆ ಮತ್ತು ಅಗ್ನಿ ಅವಘಡ ವಿರುದ್ಧದ ಕಾರ್ಯಾಚರಣೆ (ಎಆರ್ಎಫ್ಎಫ್) ತಂಡದ ಭಾಗವಾಗಿದೆ. ಈ ತಂಡ ಉತ್ತರ ಮತ್ತು ದಕ್ಷಿಣದ ರನ್ವೇಗಳೆರಡನ್ನೂ ನಿಭಾಯಿಸುತ್ತದೆ.</p>.<p>ತರಬೇತಿ ಮತ್ತು ಎಆರ್ಎಫ್ಎಫ್ ಪಡೆಗೆ ಸೇರ್ಪಡೆಗೊಂಡ ಒಂದು ವರ್ಷದ ನಂತರ, ತುರ್ತು ರಕ್ಷಣೆಗೆ ತಾವು ಸಿದ್ಧರಿರುವುದಾಗಿ ಯುವತಿಯರು ಈ ಅಣಕು ಪ್ರದರ್ಶನದಲ್ಲಿ ತೋರಿಸಿಕೊಟ್ಟರು.ಕಲಬುರ್ಗಿ, ಬೀದರ್, ಹಾಸನ ಅಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳ ಯುವತಿಯರು ಈ ತಂಡದಲ್ಲಿದ್ದಾರೆ.</p>.<p><strong>‘ಹುಡುಗಿಯರು ಬೆಂಕಿ ಹಚ್ಚುತ್ತಾರೆಆರಿಸಲ್ಲಎಂದವರಿಗೆ ಉತ್ತರ’</strong><br />‘ಹುಡುಗಿಯರಿಗೆ ಬೆಂಕಿ ಹಚ್ಚಿ ಮಾತ್ರ ಗೊತ್ತು. ಆರಿಸಿ ಗೊತ್ತಿಲ್ಲ. ಹಾಗಾಗಿ, ಅವರು ಅಗ್ನಿಶಾಮಕ ದಳದಲ್ಲಿ ಇರುವುದಿಲ್ಲ ಎಂದು ಹಲವರು ರೇಗಿಸುತ್ತಿದ್ದರು. ಅದನ್ನು ಸವಾಲಾಗಿ ಸ್ವೀಕರಿಸಿ, ಇಂದು ಈ ತಂಡದಲ್ಲಿದ್ದೇನೆ. ರೇಗಿಸಿದವರಿಗೆ ಇದೇ ನನ್ನ ಉತ್ತರ’ ಎಂದರು ಹಾಸನದ ವನಿತಾ.</p>.<p>‘ನಾಲ್ಕು ತಿಂಗಳ ತರಬೇತಿ ಕಠಿಣವಾಗಿತ್ತು. ಬೇರೆಯವರ ಪ್ರಾಣರಕ್ಷಣೆ ಮಾಡಬೇಕು ಎಂದಾಗ ನಾವು ಚುರುಕಾಗಿರಬೇಕು ಮತ್ತು ದೈಹಿಕವಾಗಿಯೂ ಸಮರ್ಥರಾಗಿರಬೇಕು. ತರಬೇತಿಯಲ್ಲಿ ಇದನ್ನು ಹೇಳಿಕೊಟ್ಟರು. ನಾನು ಈ ತಂಡದಲ್ಲಿರುವುದರಿಂದ ಪೋಷಕರಿಗೆ ನನ್ನ ಬಗ್ಗೆ ಹೆಮ್ಮೆ ಇದೆ’ ಎಂದು ಅವರು ಹೇಳಿದರು.</p>.<p>‘ವೈಮಾನಿಕ ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ ಪಡೆದಿದ್ದೇನೆ. ಇದು ಒಳ್ಳೆಯ ಕ್ಷೇತ್ರ ಎಂದು ಎಲ್ಲರೂ ಹೇಳುತ್ತಾರೆ. ಮತ್ತೊಬ್ಬರಿಗೆ ಸ್ಫೂರ್ತಿಯಾಗಿರುವುದು ಸಣ್ಣ ವಿಷಯವಲ್ಲ. ನಮ್ಮ ಮೇಲೆ ನಂಬಿಕೆ ಇಟ್ಟು ಆಯ್ಕೆ ಮಾಡಿರುವ ಬಿಐಎಎಲ್ಗೆ ಧನ್ಯವಾದ ಹೇಳುತ್ತಾರೆ’ ಎನ್ನುತ್ತಾರೆ ಕಲಬುರ್ಗಿಯ ಪ್ರಿಯದರ್ಶಿನಿ ಬಿರಾದಾರ.</p>.<p>‘ಈ ಕ್ಷೇತ್ರ ಹೆಣ್ಣುಮಕ್ಕಳಿಗಲ್ಲ ಎಂದು ಎಲ್ಲರೂ ಹೇಳುತ್ತಿದ್ದರು. ಅದನ್ನು ಮೀರಬೇಕಿತ್ತು. ಯಾವುದೇ ದೊಡ್ಡ ನಿರೀಕ್ಷೆ ಇರಲಿಲ್ಲ. ಆದರೂ ಪ್ರಯತ್ನ ಬಿಟ್ಟಿರಲಿಲ್ಲ. ಈಗ ಈ ತಂಡದಲ್ಲಿರುವುದಕ್ಕೆ ಹೆಮ್ಮೆ ಎನಿಸುತ್ತದೆ’ ಎಂದು ಕಣ್ಣರಳಿಸಿದರು ದೇವನಹಳ್ಳಿಯ ಸುಮಾ.</p>.<p><strong>ಕಾರ್ಯಾಚರಣೆ ಸಂದರ್ಭಗಳು</strong><br />* ಪೂರ್ಣ ತುರ್ತು ಸಂದರ್ಭ<br />* ಸ್ಥಳೀಯ ತುರ್ತು ಸಂದರ್ಭ<br />* ಅಪಘಾತ ಸಂದರ್ಭ<br />* ಭದ್ರತಾ ಲೋಪ<br />* ಹವಾಮಾನ ವೈಪರೀತ್ಯ</p>.<p><strong>ಸುರಕ್ಷತೆ ಸೌಲಭ್ಯಗಳು</strong><br />* ಎರಡು ಅಗ್ನಿಶಾಮಕ ಠಾಣೆ<br />* ಮೂರು ಆಂಬುಲೆನ್ಸ್<br />* 25 ಅಗ್ನಿಶಾಮಕ ವಾಹನಗಳು<br />* 265 ಒಟ್ಟು ಸುರಕ್ಷತಾ ಸಿಬ್ಬಂದಿ<br />* 14 ಯುವತಿಯರು</p>.<p>**</p>.<p>ಪುರುಷ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ಮಹಿಳೆಯರು ತಮ್ಮ ಸಾಮರ್ಥ್ಯ ಪ್ರದರ್ಶಿಸಬಹುದು ಎಂಬುದಕ್ಕೆ ಈ ಯುವತಿಯರೇ ನಿದರ್ಶನ. ಈ ಮೂಲಕ ಬಿಐಇಎಲ್ ಹೊಸ ಇತಿಹಾಸ ಸೃಷ್ಟಿಸಿದೆ.<br /><em><strong>-ವೆಂಕಟರಮಣ,ಬಿಐಎಎಲ್ ಕಂಪನಿ ವ್ಯವಹಾರ ಉಪಾಧ್ಯಕ್ಷ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong>ಅಪಾಯದ ಸೂಚನೆ ಸಿಗುತ್ತಿದ್ದಂತೆ ಎಚ್ಚರಗೊಳ್ಳುವ ಮಿದುಳು. ಚುರುಕುಗೊಳ್ಳುವ ಕಾಲುಗಳು. ಕಮಾಂಡರ್ ಕಡೆಯಿಂದ ಆದೇಶ ಹೊರಡುತ್ತಿದ್ದಂತೆ ಕಾರ್ಯಾಚರಣೆಗೆ ಧುಮುಕುವ ಯುವತಿಯರು. ಮುಗಿಲೆತ್ತರಕ್ಕೆ ಹೊತ್ತಿದ್ದ ಬೆಂಕಿ ಕ್ಷಣಾರ್ಧದಲ್ಲಿಯೇ ಶಾಂತ!</p>.<p>ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಮಹಿಳಾ ಅಗ್ನಿಶಾಮಕ ಸಿಬ್ಬಂದಿಯಿಂದ ನಡೆದ ಅಣಕು ಪ್ರದರ್ಶನದ ನೋಟವಿದು. ಏಷ್ಯಾದಲ್ಲಿಯೇ ಮೊದಲ ಬಾರಿಗೆ ಮಹಿಳಾ ತಂಡವೊಂದು ಇಂತಹ ಕಾರ್ಯಾಚರಣೆ ನಡೆಸಿತು.</p>.<p>ಅಗ್ನಿ ಅವಘಡ ಸಂಭವಿಸಿದಾಗ ಬೆಂಕಿಯನ್ನು ನಿಯಂತ್ರಣಕ್ಕೆ ತರುವ ಬಗೆ, ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು, ಪ್ರಯಾಣಿಕರನ್ನು ರಕ್ಷಿಸಲು ಯಾವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂಬುದನ್ನು ಯುವತಿಯರು ತೋರಿಸಿಕೊಟ್ಟರು.</p>.<p>ಕೋಲ್ಕತ್ತದಲ್ಲಿನ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಗ್ನಿಶಾಮಕ ತರಬೇತಿ ಕೇಂದ್ರದಲ್ಲಿ ಈ ತಂಡದ 14 ಯುವತಿಯರು ನಾಲ್ಕು ತಿಂಗಳ ತರಬೇತಿ ಪಡೆದಿದ್ದಾರೆ. ದೈಹಿಕ ಸಾಮರ್ಥ್ಯ ಮತ್ತು ಲಿಖಿತ ಪರೀಕ್ಷೆಯಲ್ಲಿ ಇವರು ಉತ್ತೀರ್ಣರಾಗಿದ್ದಾರೆ. ಎಂಜಿನಿಯರಿಂಗ್, ವಿಮಾನದ ಸಂರಚನೆ, ಅಗ್ನಿ ಸುರಕ್ಷತೆ ಕುರಿತು ತರಬೇತಿ ಪಡೆದಿದ್ದಾರೆ.</p>.<p>ಸದ್ಯ, ಈ ತಂಡ ವಿಮಾನ ರಕ್ಷಣೆ ಮತ್ತು ಅಗ್ನಿ ಅವಘಡ ವಿರುದ್ಧದ ಕಾರ್ಯಾಚರಣೆ (ಎಆರ್ಎಫ್ಎಫ್) ತಂಡದ ಭಾಗವಾಗಿದೆ. ಈ ತಂಡ ಉತ್ತರ ಮತ್ತು ದಕ್ಷಿಣದ ರನ್ವೇಗಳೆರಡನ್ನೂ ನಿಭಾಯಿಸುತ್ತದೆ.</p>.<p>ತರಬೇತಿ ಮತ್ತು ಎಆರ್ಎಫ್ಎಫ್ ಪಡೆಗೆ ಸೇರ್ಪಡೆಗೊಂಡ ಒಂದು ವರ್ಷದ ನಂತರ, ತುರ್ತು ರಕ್ಷಣೆಗೆ ತಾವು ಸಿದ್ಧರಿರುವುದಾಗಿ ಯುವತಿಯರು ಈ ಅಣಕು ಪ್ರದರ್ಶನದಲ್ಲಿ ತೋರಿಸಿಕೊಟ್ಟರು.ಕಲಬುರ್ಗಿ, ಬೀದರ್, ಹಾಸನ ಅಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳ ಯುವತಿಯರು ಈ ತಂಡದಲ್ಲಿದ್ದಾರೆ.</p>.<p><strong>‘ಹುಡುಗಿಯರು ಬೆಂಕಿ ಹಚ್ಚುತ್ತಾರೆಆರಿಸಲ್ಲಎಂದವರಿಗೆ ಉತ್ತರ’</strong><br />‘ಹುಡುಗಿಯರಿಗೆ ಬೆಂಕಿ ಹಚ್ಚಿ ಮಾತ್ರ ಗೊತ್ತು. ಆರಿಸಿ ಗೊತ್ತಿಲ್ಲ. ಹಾಗಾಗಿ, ಅವರು ಅಗ್ನಿಶಾಮಕ ದಳದಲ್ಲಿ ಇರುವುದಿಲ್ಲ ಎಂದು ಹಲವರು ರೇಗಿಸುತ್ತಿದ್ದರು. ಅದನ್ನು ಸವಾಲಾಗಿ ಸ್ವೀಕರಿಸಿ, ಇಂದು ಈ ತಂಡದಲ್ಲಿದ್ದೇನೆ. ರೇಗಿಸಿದವರಿಗೆ ಇದೇ ನನ್ನ ಉತ್ತರ’ ಎಂದರು ಹಾಸನದ ವನಿತಾ.</p>.<p>‘ನಾಲ್ಕು ತಿಂಗಳ ತರಬೇತಿ ಕಠಿಣವಾಗಿತ್ತು. ಬೇರೆಯವರ ಪ್ರಾಣರಕ್ಷಣೆ ಮಾಡಬೇಕು ಎಂದಾಗ ನಾವು ಚುರುಕಾಗಿರಬೇಕು ಮತ್ತು ದೈಹಿಕವಾಗಿಯೂ ಸಮರ್ಥರಾಗಿರಬೇಕು. ತರಬೇತಿಯಲ್ಲಿ ಇದನ್ನು ಹೇಳಿಕೊಟ್ಟರು. ನಾನು ಈ ತಂಡದಲ್ಲಿರುವುದರಿಂದ ಪೋಷಕರಿಗೆ ನನ್ನ ಬಗ್ಗೆ ಹೆಮ್ಮೆ ಇದೆ’ ಎಂದು ಅವರು ಹೇಳಿದರು.</p>.<p>‘ವೈಮಾನಿಕ ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ ಪಡೆದಿದ್ದೇನೆ. ಇದು ಒಳ್ಳೆಯ ಕ್ಷೇತ್ರ ಎಂದು ಎಲ್ಲರೂ ಹೇಳುತ್ತಾರೆ. ಮತ್ತೊಬ್ಬರಿಗೆ ಸ್ಫೂರ್ತಿಯಾಗಿರುವುದು ಸಣ್ಣ ವಿಷಯವಲ್ಲ. ನಮ್ಮ ಮೇಲೆ ನಂಬಿಕೆ ಇಟ್ಟು ಆಯ್ಕೆ ಮಾಡಿರುವ ಬಿಐಎಎಲ್ಗೆ ಧನ್ಯವಾದ ಹೇಳುತ್ತಾರೆ’ ಎನ್ನುತ್ತಾರೆ ಕಲಬುರ್ಗಿಯ ಪ್ರಿಯದರ್ಶಿನಿ ಬಿರಾದಾರ.</p>.<p>‘ಈ ಕ್ಷೇತ್ರ ಹೆಣ್ಣುಮಕ್ಕಳಿಗಲ್ಲ ಎಂದು ಎಲ್ಲರೂ ಹೇಳುತ್ತಿದ್ದರು. ಅದನ್ನು ಮೀರಬೇಕಿತ್ತು. ಯಾವುದೇ ದೊಡ್ಡ ನಿರೀಕ್ಷೆ ಇರಲಿಲ್ಲ. ಆದರೂ ಪ್ರಯತ್ನ ಬಿಟ್ಟಿರಲಿಲ್ಲ. ಈಗ ಈ ತಂಡದಲ್ಲಿರುವುದಕ್ಕೆ ಹೆಮ್ಮೆ ಎನಿಸುತ್ತದೆ’ ಎಂದು ಕಣ್ಣರಳಿಸಿದರು ದೇವನಹಳ್ಳಿಯ ಸುಮಾ.</p>.<p><strong>ಕಾರ್ಯಾಚರಣೆ ಸಂದರ್ಭಗಳು</strong><br />* ಪೂರ್ಣ ತುರ್ತು ಸಂದರ್ಭ<br />* ಸ್ಥಳೀಯ ತುರ್ತು ಸಂದರ್ಭ<br />* ಅಪಘಾತ ಸಂದರ್ಭ<br />* ಭದ್ರತಾ ಲೋಪ<br />* ಹವಾಮಾನ ವೈಪರೀತ್ಯ</p>.<p><strong>ಸುರಕ್ಷತೆ ಸೌಲಭ್ಯಗಳು</strong><br />* ಎರಡು ಅಗ್ನಿಶಾಮಕ ಠಾಣೆ<br />* ಮೂರು ಆಂಬುಲೆನ್ಸ್<br />* 25 ಅಗ್ನಿಶಾಮಕ ವಾಹನಗಳು<br />* 265 ಒಟ್ಟು ಸುರಕ್ಷತಾ ಸಿಬ್ಬಂದಿ<br />* 14 ಯುವತಿಯರು</p>.<p>**</p>.<p>ಪುರುಷ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ಮಹಿಳೆಯರು ತಮ್ಮ ಸಾಮರ್ಥ್ಯ ಪ್ರದರ್ಶಿಸಬಹುದು ಎಂಬುದಕ್ಕೆ ಈ ಯುವತಿಯರೇ ನಿದರ್ಶನ. ಈ ಮೂಲಕ ಬಿಐಇಎಲ್ ಹೊಸ ಇತಿಹಾಸ ಸೃಷ್ಟಿಸಿದೆ.<br /><em><strong>-ವೆಂಕಟರಮಣ,ಬಿಐಎಎಲ್ ಕಂಪನಿ ವ್ಯವಹಾರ ಉಪಾಧ್ಯಕ್ಷ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>