<p><strong>ಬೆಂಗಳೂರು:</strong> ನಗರ ವಿವಿಧ ಭಾಗಗಳಲ್ಲಿ ಬುಧವಾರ ರಾತ್ರಿ ಮೊಬೈಲ್ ಬಳಕೆದಾರರು ನೆಟ್ವರ್ಕ್ ಸಮಸ್ಯೆ ಅನುಭವಿಸಿದರು.</p><p>ಹಲವು ಮಂದಿ ಕರೆ, ಎಸ್ಎಂಎಸ್ ಮಾಡಲಾಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಕರೆ ಮಾಡುವಾಗ ಅನಗತ್ಯ ಕಾಲರ್ಟೋನ್ ಕೇಳಿಸುತ್ತಿದೆ, ಕರೆ ಕನೆಕ್ಟ್ ಆಗುತ್ತಿಲ್ಲ, ಸರ್ವರ್ ಸಮಸ್ಯೆ ಎಂದು ತೋರಿಸುತ್ತಿರುವುದಾಗಿ ಕೆಲವರು ಹೇಳಿದ್ದಾರೆ.</p>.ಹಾಸನ: ಬಿಎಸ್ಎನ್ಎಲ್ ನೆಟ್ವರ್ಕ್ ‘ನಾಟ್ ರೀಚೆಬಲ್’.<p>ಏರ್ಟೆಲ್ ಸಿಮ್ ಬಳಕೆದಾರರಿಗೆ ಈ ಸಮಸ್ಯೆ ಕಾಣಿಸಿಕೊಂಡಿದ್ದು, ಬೇರೆ ನೆಟ್ವರ್ಕ್ ಬಳಸುವವರು ಯಾವುದೇ ತೊಂದರೆ ಅನುಭವಿಸಿದ್ದರ ಬಗ್ಗೆ ವರದಿಯಾಗಿಲ್ಲ.</p><p>‘ನಮ್ಮ ಸೈಟ್ ಒಂದರಲ್ಲಿ ಮೂಲಸೌಕರ್ಯ ಸಂಬಂಧ ಸಮಸ್ಯೆ ಉದ್ಭವವಾಗಿತ್ತು. ಅದನ್ನು ಸರಿಪಡಿಸಲಾಗಿದೆ. ವ್ಯವಸ್ಥೆ ಹಳಿಗೆ ಮರಳಿದ್ದು, ಕರೆ ಮಾಡಲು ಸಾಧ್ಯವಾಗುತ್ತಿದೆ’ ಎಂದು ಏರ್ಟೆಲ್ನ ವಕ್ತಾರರೊಬ್ಬರು ತಿಳಿಸಿದರು.</p>.ಕೋಣಂದೂರು: ಬಿಎಸ್ಎನ್ಎಲ್ ಟವರ್ ಅಳವಡಿಸಿದರೂ ಇಲ್ಲ ನೆಟ್ವರ್ಕ್.<p>‘ಕೆಲವು ಪ್ರದೇಶಗಳಲ್ಲಿ ಹೆಚ್ಚು ಮರಗಳು ಇದ್ದರೆ ಅಥವಾ ಗಾಳಿ ಹೆಚ್ಚು ಇದ್ದಾಗ ಈ ಸಮಸ್ಯೆಗಳು ಉಂಟಾಗಬಹುದು’ ಎಂದು ಏರ್ಟೆಲ್ನ ಮತ್ತೊಬ್ಬ ಪ್ರತಿನಿಧಿ ಹೇಳಿದರು.</p><p>‘ಕೆಲವೊಮ್ಮೆ ಅಂತಹ ಸಂದರ್ಭಗಳಲ್ಲಿ ಸಿಗ್ನಲ್ ಬೂಸ್ಟರ್ಗಳು ಕಾರ್ಯನಿರ್ವಹಿಸದಿರಬಹುದು’ ಎಂದು ಅವರು ತಿಳಿಸಿದರು.</p> .ಪಡಿತರ ಚೀಟಿಗೆ ನೆಟ್ವರ್ಕ್ ಸಮಸ್ಯೆ: ಕರ್ನಾಟಕ ಒನ್ ಸೆಂಟರ್ ಮುಂದೆ ಜನರ ಸಾಲು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಗರ ವಿವಿಧ ಭಾಗಗಳಲ್ಲಿ ಬುಧವಾರ ರಾತ್ರಿ ಮೊಬೈಲ್ ಬಳಕೆದಾರರು ನೆಟ್ವರ್ಕ್ ಸಮಸ್ಯೆ ಅನುಭವಿಸಿದರು.</p><p>ಹಲವು ಮಂದಿ ಕರೆ, ಎಸ್ಎಂಎಸ್ ಮಾಡಲಾಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಕರೆ ಮಾಡುವಾಗ ಅನಗತ್ಯ ಕಾಲರ್ಟೋನ್ ಕೇಳಿಸುತ್ತಿದೆ, ಕರೆ ಕನೆಕ್ಟ್ ಆಗುತ್ತಿಲ್ಲ, ಸರ್ವರ್ ಸಮಸ್ಯೆ ಎಂದು ತೋರಿಸುತ್ತಿರುವುದಾಗಿ ಕೆಲವರು ಹೇಳಿದ್ದಾರೆ.</p>.ಹಾಸನ: ಬಿಎಸ್ಎನ್ಎಲ್ ನೆಟ್ವರ್ಕ್ ‘ನಾಟ್ ರೀಚೆಬಲ್’.<p>ಏರ್ಟೆಲ್ ಸಿಮ್ ಬಳಕೆದಾರರಿಗೆ ಈ ಸಮಸ್ಯೆ ಕಾಣಿಸಿಕೊಂಡಿದ್ದು, ಬೇರೆ ನೆಟ್ವರ್ಕ್ ಬಳಸುವವರು ಯಾವುದೇ ತೊಂದರೆ ಅನುಭವಿಸಿದ್ದರ ಬಗ್ಗೆ ವರದಿಯಾಗಿಲ್ಲ.</p><p>‘ನಮ್ಮ ಸೈಟ್ ಒಂದರಲ್ಲಿ ಮೂಲಸೌಕರ್ಯ ಸಂಬಂಧ ಸಮಸ್ಯೆ ಉದ್ಭವವಾಗಿತ್ತು. ಅದನ್ನು ಸರಿಪಡಿಸಲಾಗಿದೆ. ವ್ಯವಸ್ಥೆ ಹಳಿಗೆ ಮರಳಿದ್ದು, ಕರೆ ಮಾಡಲು ಸಾಧ್ಯವಾಗುತ್ತಿದೆ’ ಎಂದು ಏರ್ಟೆಲ್ನ ವಕ್ತಾರರೊಬ್ಬರು ತಿಳಿಸಿದರು.</p>.ಕೋಣಂದೂರು: ಬಿಎಸ್ಎನ್ಎಲ್ ಟವರ್ ಅಳವಡಿಸಿದರೂ ಇಲ್ಲ ನೆಟ್ವರ್ಕ್.<p>‘ಕೆಲವು ಪ್ರದೇಶಗಳಲ್ಲಿ ಹೆಚ್ಚು ಮರಗಳು ಇದ್ದರೆ ಅಥವಾ ಗಾಳಿ ಹೆಚ್ಚು ಇದ್ದಾಗ ಈ ಸಮಸ್ಯೆಗಳು ಉಂಟಾಗಬಹುದು’ ಎಂದು ಏರ್ಟೆಲ್ನ ಮತ್ತೊಬ್ಬ ಪ್ರತಿನಿಧಿ ಹೇಳಿದರು.</p><p>‘ಕೆಲವೊಮ್ಮೆ ಅಂತಹ ಸಂದರ್ಭಗಳಲ್ಲಿ ಸಿಗ್ನಲ್ ಬೂಸ್ಟರ್ಗಳು ಕಾರ್ಯನಿರ್ವಹಿಸದಿರಬಹುದು’ ಎಂದು ಅವರು ತಿಳಿಸಿದರು.</p> .ಪಡಿತರ ಚೀಟಿಗೆ ನೆಟ್ವರ್ಕ್ ಸಮಸ್ಯೆ: ಕರ್ನಾಟಕ ಒನ್ ಸೆಂಟರ್ ಮುಂದೆ ಜನರ ಸಾಲು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>