ಕೂಡಲಿ ಶೃಂಗೇರಿ ಶಾರದಾಪೀಠದ ಅಭಿನವ ಶಂಕರ ಭಾರತೀ ಸ್ವಾಮೀಜಿ, ‘ಭಾರತೀಯ ಶಿಕ್ಷಣದ ಬಗ್ಗೆ ವೈಚಾರಿಕ ಸ್ಪಷ್ಟತೆ ಬಾರದೆ ಭಾರತೀಯ ಶಿಕ್ಷಣದ ಪುನರುತ್ಥಾನ ಸಾಧ್ಯವಿಲ್ಲ. ಪಠ್ಯ ವಿಷಯವೇ ಬೇರೆ, ಪಠ್ಯಕ್ರಮವೇ ಬೇರೆ. ಔರಂಗಜೇಬ ಸೇರಿದಂತೆ ಹಲವರನ್ನು ಪಠ್ಯದಲ್ಲಿ ತೆಗೆದುಹಾಕಿ, ಅವರ ಜಾಗದಲ್ಲಿ ಶಿವಾಜಿ ಮಹಾರಾಜ ಸೇರಿದಂತೆ ಇನ್ನಿತರರನ್ನು ತಂದು ಹಾಕಿದ ಮಾತ್ರಕ್ಕೆ ಭಾರತೀಯ ಶಿಕ್ಷಣ ಆಗುವುದಿಲ್ಲ. ಆದ್ದರಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ಮಾಡಿ, ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಮತ್ತೆ ಜಾರಿ ಮಾಡಬೇಕು’ ಎಂದು ಹೇಳಿದರು.