‘ಇಬ್ಬರು ಮಕ್ಕಳ ತಂದೆಯಾಗಿರುವ ವ್ಯಕ್ತಿ, ಯೆಮನ್ನಲ್ಲಿ ವ್ಯಾಪಾರ ನಡೆಸುತ್ತಿದ್ದರು. ನಿರಂತರ ಕಿವಿ ಸೋರುವಿಕೆ ಮತ್ತು ದೀರ್ಘಕಾಲದ ತಲೆನೋವಿಗೆ ಶಾಶ್ವತ ಪರಿಹಾರ ಪಡೆಯಲು ಅವರು ನಮ್ಮ ಆಸ್ಪತ್ರೆಗೆ ಬಂದರು. ಮೂಳೆಯಲ್ಲಿ ಗುಂಡು ಆಳವಾಗಿ ತಳವೂರಿತ್ತು. ಇದು ಶಸ್ತ್ರಚಿಕಿತ್ಸೆಯನ್ನು ಸವಾಲಾಗಿಸಿತು. ಗುಂಡು ಮತ್ತು ನಾಳೀಯ ರಚನೆಗಳಿಗೆ ಸಾಮೀಪ್ಯ ಗುರುತಿಸಲು ಸಿ.ಟಿ ಆಂಜಿಯೋಗ್ರಫಿ ಮಾಡಲಾಯಿತು. ಎಕ್ಸ್-ರೇ ಸಹ ನಡೆಸಿ, ಎಚ್ಚರಿಕೆಯಿಂದ ಶಸ್ತ್ರಚಿಕಿತ್ಸೆ ನಡೆಸಿದವು’ ಎಂದು ಡಾ. ರೋಹಿತ್ ಉದಯ ಪ್ರಸಾದ್ ಹೇಳಿದರು.