ಈ ಸಂಬಂಧ ಮನೆ ಮಾಲೀಕ ಆರ್.ಗೋಪಿ ಎಂಬುವರು ಆಡುಗೋಡಿ ಠಾಣೆಗೆ ದೂರು ಕೊಟ್ಟಿದ್ದಾರೆ. ‘ಬನಶಂಕರಿಯ ಬಾರ್ ಒಂದರಲ್ಲಿ ವ್ಯವಸ್ಥಾಪಕನಾಗಿರುವ ನಾನು, ಶುಕ್ರವಾರ ರಾತ್ರಿ ಮನೆಗೆ ಮರಳಿ ನಿದ್ರೆಗೆ ಜಾರಿದ್ದೆ. 2.30ರ ಸುಮಾರಿಗೆ ಮನೆಯ ಕಿಟಕಿ ಗಾಜು ಒಡೆದು ನನ್ನ ಮೇಲೆ ಬಿತ್ತು. ಎಚ್ಚರಗೊಂಡು ಹೊರಗೆ ನೋಡಿದಾಗ ಪುಂಡರು ಮಾರಕಾಸ್ತ್ರ ಹಿಡಿದು ಕೂಗಾಡುತ್ತಿದ್ದರು’ ಎಂದು ದೂರಿನಲ್ಲಿ ಹೇಳಿದ್ದಾರೆ.