ಬೆಂಗಳೂರು: ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇದೀಗ ಆಯುಕ್ತರಿಗೆ ಕನ್ನಡದಲ್ಲಿ ಗೌರವ ವಂದನೆ ನೀಡಲಾಗುತ್ತಿದೆ.
ಈ ವಿಡಿಯೊವನ್ನು ಹಂಚಿಕೊಂಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ‘ಕನ್ನಡದ ಮಾತು ಚಂದ ; ಕನ್ನಡದ ಕಮಾಂಡ್ಗಳು ಇನ್ನೂ ಚಂದ. ಏನಂತಿರಾ...’ ಎಂದಿದ್ದಾರೆ.
ಆಯುಕ್ತರು ತಮ್ಮ ಕಚೇರಿಗೆ ಬಂದ ತಕ್ಷಣ ಸಿಬ್ಬಂದಿ ಅವರಿಗೆ ಕನ್ನಡದಲ್ಲಿ ಗೌರವ ವಂದನೆ ನೀಡುತ್ತಾರೆ. ಮೊದಲಿಗೆ ‘ವಾಹನ ಪಡೆ ವಂದನಾ ಶಸ್ತ್ರ’ ಎಂದು ಶಸ್ತ್ರವನ್ನು ಏರಿಸಿ ಸೆಲ್ಯೂಟ್ ಮಾಡುತ್ತಾರೆ. ನಂತರ ‘ವಾಹನ ಪಡೆ ಕೆಳ ಶಸ್ತ್ರ‘ ಎಂದು ಬಂದೂಕನ್ನು ಕೆಳಕ್ಕೆ ಇಳಿಸುತ್ತಾರೆ.