‘ಮಾರ್ಚ್ 26ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ದಂಪತಿ ಆನೆಪಾಳ್ಯದ 4ನೇ ಕ್ರಾಸ್ ಬಳಿ ರಸ್ತೆಬದಿ ನಿಂತಿದ್ದರು. ಆಗ ಬೈಕ್ನಲ್ಲಿ ಸ್ಥಳಕ್ಕೆ ಬಂದಿದ್ದ ಆರೋಪಿ, ವೃದ್ಧ ದಂಪತಿಗೆ ಕಿಟ್ ಆಮಿಷವೊಡ್ಡಿದ್ದ. ಅದಕ್ಕೆ ಒಪ್ಪಿದ್ದ ರಶೀದ್ ಅವರನ್ನು ಬೈಕ್ನಲ್ಲಿ ಕೂರಿಸಿಕೊಂಡು ಹೊಸೂರು ಮುಖ್ಯರಸ್ತೆಯ ಆನೇಪಾಳ್ಯ ಮೋರಿಯ ಬಳಿ ಇಳಿಸಿದ್ದ. ಬಳಿಕ ಚಾಕು ತೋರಿಸಿ ₹5 ಸಾವಿರ ನಗದು ಕಸಿದುಕೊಂಡಿದ್ದ. ಆ ನಂತರ ಅಖಿಲಾ ಬಳಿ ಬಂದು ‘ನಿಮ್ಮ ಪತಿಯಿಂದ ಕಿಟ್ ತರಲು ಸಾಧ್ಯವಾಗುತ್ತಿಲ್ಲ. ಅವರನ್ನು ಅಲ್ಲಿಯೇ ಬಿಟ್ಟು ಬಂದಿದ್ದೇನೆ’ ಎಂದು ತನ್ನ ಬೈಕ್ನಲ್ಲಿ ಅವರನ್ನೂ ಕರೆದೊಯ್ದಿದ್ದ. ಬನ್ನೇರುಘಟ್ಟ ರಸ್ತೆಯ ಸುಬ್ಬಣ್ಣ ಗಾರ್ಡನ್ ಬಳಿ ಇಳಿಸಿ, ಅವರಿಗೂ ಮಾರಕಾಸ್ತ್ರ ತೋರಿಸಿ ಬೆದರಿಸಿ 14 ಗ್ರಾಂ ತೂಕದ ಚಿನ್ನದ ಸರ, 7 ಗ್ರಾಂ ತೂಕದ ಕಿವಿಯೋಲೆ, ₹4 ಸಾವಿರ ನಗದು ಕಿತ್ತುಕೊಂಡು ಪರಾರಿಯಾಗಿದ್ದ’ ಎಂದು ಪೊಲೀಸರು ಹೇಳಿದರು.