ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರುನ | ಆಸ್ತಿ ವಿಚಾರಕ್ಕೆ ಗಲಾಟೆ: ಆ್ಯಸಿಡ್‌ ದಾಳಿ ಆರೋಪ

Published 29 ಮಾರ್ಚ್ 2024, 15:49 IST
Last Updated 29 ಮಾರ್ಚ್ 2024, 15:49 IST
ಅಕ್ಷರ ಗಾತ್ರ

ಬೆಂಗಳೂರು: ‘ಆಸ್ತಿ ವಿಚಾರವಾಗಿ ತಂದೆ,  ಸೋದರ ಹಾಗೂ ಸೋದರಿ ಸೇರಿಕೊಂಡು ನನ್ನ ಮೇಲೆ ಹಲ್ಲೆ ನಡೆಸಿ, ಆ್ಯಸಿಡ್ ದಾಳಿ ನಡೆಸಿದ್ಧಾರೆ’ ಎಂದು ಆರೋಪಿಸಿ, ಶೆಟ್ಟಿಹಳ್ಳಿಯ ನಿವಾಸಿ ಕಿರಣ್‌ ಎಂಬುವರು ಬಾಗಲಗುಂಟೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

‘ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಬಾಗಲಗುಂಟೆ ನಿವಾಸಿ, ದೂರುದಾರರ ತಂದೆ ರಾಮಕೃಷ್ಣಯ್ಯ, ಸೋದರಿ ಕಲಾವತಿ, ಸೋದರ ಉಪೇಂದ್ರ ಕುಮಾರ್ ಎಂಬುವವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

‘ಕಿರಣ್‌ ಅವರ ಎಡಭಾಗದ ಕಣ್ಣು ಹಾಗೂ ಎದೆಯ ಭಾಗಕ್ಕೆ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ಧಾರೆ’ ಎಂದು ಮೂಲಗಳು ತಿಳಿಸಿವೆ.

ದೂರಿನಲ್ಲಿ ಏನಿದೆ?: ‘ಬಾಗಲಗುಂಟೆಯ ಅರುಣೋದಯ ಆಸ್ಪತ್ರೆಯ ಎದುರಿನ 5ನೇ ಕ್ರಾಸ್‌ನಲ್ಲಿ ರಾಮಕೃಷ್ಣಯ್ಯ ಅವರಿಗೆ ಸೇರಿ ಮನೆಯಿದೆ. ಅದು ರಾಮಕೃಷ್ಣಯ್ಯ ಅವರ ಸ್ವಯಾರ್ಜಿತ ಆಸ್ತಿ. ಈ ಮನೆಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವ ಉದ್ದೇಶದಿಂದ ನಮ್ಮ ತಂದೆಗೆ ಅಕ್ಕ ಚಾಡಿ ಮಾತು ಹೇಳಿದ್ದರು. ಇತ್ತೀಚೆಗೆ ತಾಯಿಯ ತಿಥಿ ಕಾರ್ಯದ ವಿಚಾರವಾಗಿ ಮಾತನಾಡಲು ಅವರ ಮನೆಯ ಬಳಿಗೆ ಹೋಗಿದ್ದ ವೇಳೆ ನನ್ನ ಮೇಲೆ ಹಲ್ಲೆ ನಡೆಸಿದರು. ಅಲ್ಲದೇ ಆ್ಯಸಿಡ್‌ ದಾಳಿ ನಡೆಸಿದರು’ ಎಂದು ಕಿರಣ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT