<p><strong>ಬೆಂಗಳೂರು:</strong> ‘ರಾಜಕಾರಣಕ್ಕೋಸ್ಕರ ಮಹಾತ್ಮ ಗಾಂಧಿ ಅವರನ್ನು ಅಪ್ಪಿಕೊಳ್ಳುವ, ಅವರ ವ್ಯಕ್ತಿತ್ವ ಭಂಜನೆ ಮಾಡುವ ಪಕ್ಷಗಳ ನಡೆಯನ್ನು ಎಚ್ಚರಿಕೆಯಿಂದ ನೋಡಬೇಕು’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.</p>.<p>ಸೌಹಾರ್ದ ಕರ್ನಾಟಕವು ಸಂಸ ಬಯಲು ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಮಹಾತ್ಮ ಹುತಾತ್ಮ’ ಸೌಹಾರ್ದ ಸಂಕಲ್ಪ ದಿನದಲ್ಲಿ ಅವರು ಆಶಯ ಭಾಷಣ ಮಾಡಿದರು.</p>.<p>‘ಗಾಂಧಿ ಜಯಂತಿ, ಪುಣ್ಯ ಸ್ಮರಣೆ ವೇಳೆ ರಾಜಕೀಯ ನಾಯಕರು, ಪಕ್ಷಗಳು ಅವರನ್ನು ನೆನಪು ಮಾಡಿಕೊಳ್ಳುತ್ತವೆ. ಸಾಂಕೇತಿಕವಾಗಿ ಸ್ಮರಣೆ ಮಾಡುವ ಸ್ಥಿತಿಗೆ ನಾವು ತಲುಪಿದ್ದೇವೆ. ಗಾಂಧಿಯನ್ನು ಈ ರೀತಿ ನೋಡುವುದಕ್ಕಿಂತ ಅವರ ವಿಚಾರಗಳೊಂದಿಗೆ ಮುಖಾಮುಖಿ ಆಗಬೇಕಿದೆ’ ಎಂದು ನುಡಿದರು.</p>.<p>‘ಧರ್ಮ ಹಾಗೂ ರಾಷ್ಟ್ರೀಯತೆ ಎನ್ನುವುದು ಬೇರೆಯೇ. ಅವುಗಳನ್ನು ಒಂದೇ ನೆಲೆಯಲ್ಲಿ ನೋಡುವ ಕ್ರಮ ಸರಿಯಲ್ಲ. ಎರಡರ ವಿಚಾರದಲ್ಲಿ ಗಾಂಧೀಜಿ ಚಿಂತನೆ ಸ್ಪಷ್ಟವಾಗಿತ್ತು. ಸಾಮಾಜಿಕ, ಸಮಾನತೆ, ಸೌಹಾರ್ದತೆ, ಸಾಮರಸ್ಯದ ನೆಲೆಯಲ್ಲಿ ಭಾರತ ನೋಡುವ ಅವರ ವಿಚಾರ ಎಂದಿಗೂ ಪ್ರಸ್ತುತವೇ. ಅವರ ಆ ವಿಚಾರಗಳನ್ನು ಪ್ರಸ್ತುತ ನೆಲೆಯಲ್ಲಿ ನೋಡಬೇಕಿದೆ’ ಎಂದರು.</p>.<p>ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಮಾತನಾಡಿ, ‘ರಾಜಕೀಯ ನೇತಾರರು ರಾಜ್ಘಾಟ್ಗೆ ಹೋಗಿ ಗಾಂಧೀಜಿಗೆ ನಮಿಸುತ್ತಾರೆ. ಆದರೆ ಅವರ ಚಿಂತನೆಗಳನ್ನು ಎಂದಿಗೂ ತಮ್ಮ ಆಡಳಿತದಲ್ಲಿ ಅಳವಡಿಸಿಕೊಳ್ಳುವುದಿಲ್ಲ. ಇದು ಆತ್ಮವಂಚನೆ’ ಎಂದರು.</p>.<p>ಸಾಹಿತಿ ಕೆ.ಮರುಳಸಿದ್ದಪ್ಪ, ಕೆ.ಆರ್.ಸಂಧ್ಯಾರೆಡ್ಡಿ, ದಲಿತ ಸಂಘರ್ಷ ಸಮಿತಿಯ ಮಾವಳ್ಳಿ ಶಂಕರ್ , ಆರ್. ಮೋಹನರಾಜು ಉಪಸ್ಥಿತರಿದ್ದರು. ವಾರ್ತಾ ಇಲಾಖೆ ನಿವೃತ್ತ ನಿರ್ದೇಶಕ ಎನ್.ಆರ್.ವಿಶುಕುಮಾರ್ ಸೌಹಾರ್ದ ಸಂಕಲ್ಪ ಬೋಧಿಸಿದರು. ಗಾಂಧೀಜಿ ಕುರಿತು ಸುಬ್ಬು ಹೊಲೆಯಾರ್, ಆರ್.ಜಿ.ಹಳ್ಳಿ ನಾಗರಾಜ್, ಎಚ್.ಆರ್.ಸುಜಾತ ಕವನ ವಾಚಿಸಿದರು. ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ರಾಜಕಾರಣಕ್ಕೋಸ್ಕರ ಮಹಾತ್ಮ ಗಾಂಧಿ ಅವರನ್ನು ಅಪ್ಪಿಕೊಳ್ಳುವ, ಅವರ ವ್ಯಕ್ತಿತ್ವ ಭಂಜನೆ ಮಾಡುವ ಪಕ್ಷಗಳ ನಡೆಯನ್ನು ಎಚ್ಚರಿಕೆಯಿಂದ ನೋಡಬೇಕು’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.</p>.<p>ಸೌಹಾರ್ದ ಕರ್ನಾಟಕವು ಸಂಸ ಬಯಲು ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಮಹಾತ್ಮ ಹುತಾತ್ಮ’ ಸೌಹಾರ್ದ ಸಂಕಲ್ಪ ದಿನದಲ್ಲಿ ಅವರು ಆಶಯ ಭಾಷಣ ಮಾಡಿದರು.</p>.<p>‘ಗಾಂಧಿ ಜಯಂತಿ, ಪುಣ್ಯ ಸ್ಮರಣೆ ವೇಳೆ ರಾಜಕೀಯ ನಾಯಕರು, ಪಕ್ಷಗಳು ಅವರನ್ನು ನೆನಪು ಮಾಡಿಕೊಳ್ಳುತ್ತವೆ. ಸಾಂಕೇತಿಕವಾಗಿ ಸ್ಮರಣೆ ಮಾಡುವ ಸ್ಥಿತಿಗೆ ನಾವು ತಲುಪಿದ್ದೇವೆ. ಗಾಂಧಿಯನ್ನು ಈ ರೀತಿ ನೋಡುವುದಕ್ಕಿಂತ ಅವರ ವಿಚಾರಗಳೊಂದಿಗೆ ಮುಖಾಮುಖಿ ಆಗಬೇಕಿದೆ’ ಎಂದು ನುಡಿದರು.</p>.<p>‘ಧರ್ಮ ಹಾಗೂ ರಾಷ್ಟ್ರೀಯತೆ ಎನ್ನುವುದು ಬೇರೆಯೇ. ಅವುಗಳನ್ನು ಒಂದೇ ನೆಲೆಯಲ್ಲಿ ನೋಡುವ ಕ್ರಮ ಸರಿಯಲ್ಲ. ಎರಡರ ವಿಚಾರದಲ್ಲಿ ಗಾಂಧೀಜಿ ಚಿಂತನೆ ಸ್ಪಷ್ಟವಾಗಿತ್ತು. ಸಾಮಾಜಿಕ, ಸಮಾನತೆ, ಸೌಹಾರ್ದತೆ, ಸಾಮರಸ್ಯದ ನೆಲೆಯಲ್ಲಿ ಭಾರತ ನೋಡುವ ಅವರ ವಿಚಾರ ಎಂದಿಗೂ ಪ್ರಸ್ತುತವೇ. ಅವರ ಆ ವಿಚಾರಗಳನ್ನು ಪ್ರಸ್ತುತ ನೆಲೆಯಲ್ಲಿ ನೋಡಬೇಕಿದೆ’ ಎಂದರು.</p>.<p>ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಮಾತನಾಡಿ, ‘ರಾಜಕೀಯ ನೇತಾರರು ರಾಜ್ಘಾಟ್ಗೆ ಹೋಗಿ ಗಾಂಧೀಜಿಗೆ ನಮಿಸುತ್ತಾರೆ. ಆದರೆ ಅವರ ಚಿಂತನೆಗಳನ್ನು ಎಂದಿಗೂ ತಮ್ಮ ಆಡಳಿತದಲ್ಲಿ ಅಳವಡಿಸಿಕೊಳ್ಳುವುದಿಲ್ಲ. ಇದು ಆತ್ಮವಂಚನೆ’ ಎಂದರು.</p>.<p>ಸಾಹಿತಿ ಕೆ.ಮರುಳಸಿದ್ದಪ್ಪ, ಕೆ.ಆರ್.ಸಂಧ್ಯಾರೆಡ್ಡಿ, ದಲಿತ ಸಂಘರ್ಷ ಸಮಿತಿಯ ಮಾವಳ್ಳಿ ಶಂಕರ್ , ಆರ್. ಮೋಹನರಾಜು ಉಪಸ್ಥಿತರಿದ್ದರು. ವಾರ್ತಾ ಇಲಾಖೆ ನಿವೃತ್ತ ನಿರ್ದೇಶಕ ಎನ್.ಆರ್.ವಿಶುಕುಮಾರ್ ಸೌಹಾರ್ದ ಸಂಕಲ್ಪ ಬೋಧಿಸಿದರು. ಗಾಂಧೀಜಿ ಕುರಿತು ಸುಬ್ಬು ಹೊಲೆಯಾರ್, ಆರ್.ಜಿ.ಹಳ್ಳಿ ನಾಗರಾಜ್, ಎಚ್.ಆರ್.ಸುಜಾತ ಕವನ ವಾಚಿಸಿದರು. ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>