<p><strong>ಬೆಂಗಳೂರು:</strong> ‘ಭಾಷೆ, ಸಿನಿಮಾ, ರಾಜಕೀಯ, ಆರ್ಥಿಕತೆ ಸೇರಿದಂತೆ ವಿವಿಧ ವಿಷಯಗಳ ಮೇಲೆ ಸಾಹಿತ್ಯ ಸೃಷ್ಟಿಸುವ ಬರಗೂರು ರಾಮಚಂದ್ರಪ್ಪ ಅವರು, ಸಂಕಷ್ಟಕ್ಕೆ ಸಿಲುಕಿದ ವಿವಿಧ ದುರ್ಬಲ ವರ್ಗಗಳ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ’ ಎಂದು ವಿವಿಧ ಕ್ಷೇತ್ರದ ಗಣ್ಯರು ಶ್ಲಾಘಿಸಿದರು.</p>.<p>ಬರಗೂರು ಮೇಷ್ಟ್ರು ಶಿಷ್ಯರ ಬಳಗವು ಗುರುವಾರ ಆಯೋಜಿಸಿದ್ದ ‘ನಮ್ಮ ಮೇಷ್ಟ್ರು ನಮ್ಮ ಹೆಮ್ಮೆ’ ವೆಬಿನಾರ್ನಲ್ಲಿ ಬರಗೂರು ರಾಮಚಂದ್ರಪ್ಪ ಅವರು ಚಳವಳಿ, ಸಾಹಿತ್ಯ, ಸಿನಿಮಾ, ಭಾಷೆ ಹಾಗೂ ಶಿಕ್ಷಣಕ್ಕೆ ನೀಡಿದ ಕೊಡುಗೆಗಳನ್ನು ಅವರ ಆಪ್ತರು ಸ್ಮರಿಸಿದರು.</p>.<p>ಚಿಕ್ಕಮಗಳೂರಿನ ಡಾ.ಆರ್.ಎ. ಪುಷ್ಪ ಭಾರತಿ ಅವರು, ‘ಬರಗೂರು ರಾಮಚಂದ್ರಪ್ಪ ಅವರ ಕೃತಿಯ ಮೂಲವಸ್ತು ಯಾವಾ<br />ಗಲೂ ಸಾಮಾಜಿಕ ಕಳಕಳಿಯೇ ಆಗಿರುತ್ತದೆ. ಜ್ವಲಂತ ವಿಷಯಗಳನ್ನು ಅಂಕಿ–ಅಂಶಗಳ ಸಹಿತ ಓದುಗರಿಗೆ ಕಟ್ಟಿಕೊಡುತ್ತಾ ಬಂದಿದ್ದಾರೆ’ ಎಂದರು.</p>.<p class="Subhead">ಸಂಘಟನೆಗೆ ಒತ್ತು: ಬೆಳಗಾವಿಯ ಡಾ.ವೈ.ಬಿ. ಹಿಮ್ಮಡಿ, ‘1960–70ರ ಅವಧಿಯಲ್ಲಿ ರಾಜ್ಯದಲ್ಲಿ ಅತ್ಯಾಚಾರ, ದೌರ್ಜನ್ಯಗಳ ವಿರುದ್ಧ ಹೋರಾಡಲು ಜನಪರ ಚಳವಳಿಗಳು ನಡೆದವು. 1979ರಲ್ಲಿ ಧರ್ಮಸ್ಥಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ<br />ದಲ್ಲಿ ದಲಿತ ಸಾಹಿತ್ಯ ಗೋಷ್ಠಿ ನಡೆಸುವಂತೆ ಸಾಹಿತ್ಯ ಪರಿಷತ್ತಿಗೆ ಒತ್ತಾಯಿಸಲಾಯಿತು. ಆದರೆ, ಅಂದಿನ ಅಧ್ಯಕ್ಷರು ಅದಕ್ಕೆ ಒಪ್ಪದ ಕಾರಣ ಸಮ್ಮೇಳನದ ದಿನವೇ ಬೆಂಗಳೂರಿನಲ್ಲಿ ಬಂಡಾಯ ಸಾಹಿತ್ಯ ಸಮ್ಮೇಳನ ನಡೆಸಲಾಯಿತು’ ಎಂದರು.</p>.<p>‘ಇಡೀ ಕರ್ನಾಟಕವನ್ನು ಸುತ್ತಾಡಿದ ಬರಗೂರು ರಾಮಚಂದ್ರ ಅವರು, ತಮಗಿರುವ ವೈಚಾರಿಕ ಹಾಗೂ ಬೌದ್ಧಿಕ ಚಿಂತನೆಗಳ ಮೂಲಕ ಬಂಡಾಯ ಸಾಹಿತ್ಯ ಚಳವಳಿಯನ್ನು ಕಟ್ಟಿದರು. ನವ್ಯದ ವಿಮರ್ಶಕರು ಬಂಡಾಯ ಸಾಹಿತ್ಯವು ಇದು ಸಾಹಿತ್ಯದ ಪ್ರಕಾರವಲ್ಲ ಎಂದು<br />ವಿಮರ್ಶೆ ಮಾಡಿದಾಗ ಅದಕ್ಕೆ ತಕ್ಕ ಉತ್ತರ ನೀಡಿ, ಬೆಳೆಸಿದರು’ ಎಂದರು.</p>.<p>ಹಿರಿಯ ಪತ್ರಕರ್ತ ಗಂಗಾಧರ ಮೊದಲಿಯಾರ್, ‘ಸಾಹಿತ್ಯ ಮತ್ತು ಸಿನಿಮಾ ಅಂತರ್ಗತವಾಗಿರುತ್ತದೆ. ಮೊದಲು ಪ್ರಭಾವಗಳಿಂದ ಪ್ರೇರಿತವಾಗಿ ಸಿನಿಮಾಗಳನ್ನು ನಿರ್ಮಿಸಲಾಗುತ್ತಿತ್ತು. ಮನುಷ್ಯ ಪ್ರೀತಿಯ ಅನ್ವೇಷಣೆಗೆ ಬರಗೂರು ಅವರು ಒತ್ತು ನೀಡುತ್ತಾ ಬಂದರು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಭಾಷೆ, ಸಿನಿಮಾ, ರಾಜಕೀಯ, ಆರ್ಥಿಕತೆ ಸೇರಿದಂತೆ ವಿವಿಧ ವಿಷಯಗಳ ಮೇಲೆ ಸಾಹಿತ್ಯ ಸೃಷ್ಟಿಸುವ ಬರಗೂರು ರಾಮಚಂದ್ರಪ್ಪ ಅವರು, ಸಂಕಷ್ಟಕ್ಕೆ ಸಿಲುಕಿದ ವಿವಿಧ ದುರ್ಬಲ ವರ್ಗಗಳ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ’ ಎಂದು ವಿವಿಧ ಕ್ಷೇತ್ರದ ಗಣ್ಯರು ಶ್ಲಾಘಿಸಿದರು.</p>.<p>ಬರಗೂರು ಮೇಷ್ಟ್ರು ಶಿಷ್ಯರ ಬಳಗವು ಗುರುವಾರ ಆಯೋಜಿಸಿದ್ದ ‘ನಮ್ಮ ಮೇಷ್ಟ್ರು ನಮ್ಮ ಹೆಮ್ಮೆ’ ವೆಬಿನಾರ್ನಲ್ಲಿ ಬರಗೂರು ರಾಮಚಂದ್ರಪ್ಪ ಅವರು ಚಳವಳಿ, ಸಾಹಿತ್ಯ, ಸಿನಿಮಾ, ಭಾಷೆ ಹಾಗೂ ಶಿಕ್ಷಣಕ್ಕೆ ನೀಡಿದ ಕೊಡುಗೆಗಳನ್ನು ಅವರ ಆಪ್ತರು ಸ್ಮರಿಸಿದರು.</p>.<p>ಚಿಕ್ಕಮಗಳೂರಿನ ಡಾ.ಆರ್.ಎ. ಪುಷ್ಪ ಭಾರತಿ ಅವರು, ‘ಬರಗೂರು ರಾಮಚಂದ್ರಪ್ಪ ಅವರ ಕೃತಿಯ ಮೂಲವಸ್ತು ಯಾವಾ<br />ಗಲೂ ಸಾಮಾಜಿಕ ಕಳಕಳಿಯೇ ಆಗಿರುತ್ತದೆ. ಜ್ವಲಂತ ವಿಷಯಗಳನ್ನು ಅಂಕಿ–ಅಂಶಗಳ ಸಹಿತ ಓದುಗರಿಗೆ ಕಟ್ಟಿಕೊಡುತ್ತಾ ಬಂದಿದ್ದಾರೆ’ ಎಂದರು.</p>.<p class="Subhead">ಸಂಘಟನೆಗೆ ಒತ್ತು: ಬೆಳಗಾವಿಯ ಡಾ.ವೈ.ಬಿ. ಹಿಮ್ಮಡಿ, ‘1960–70ರ ಅವಧಿಯಲ್ಲಿ ರಾಜ್ಯದಲ್ಲಿ ಅತ್ಯಾಚಾರ, ದೌರ್ಜನ್ಯಗಳ ವಿರುದ್ಧ ಹೋರಾಡಲು ಜನಪರ ಚಳವಳಿಗಳು ನಡೆದವು. 1979ರಲ್ಲಿ ಧರ್ಮಸ್ಥಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ<br />ದಲ್ಲಿ ದಲಿತ ಸಾಹಿತ್ಯ ಗೋಷ್ಠಿ ನಡೆಸುವಂತೆ ಸಾಹಿತ್ಯ ಪರಿಷತ್ತಿಗೆ ಒತ್ತಾಯಿಸಲಾಯಿತು. ಆದರೆ, ಅಂದಿನ ಅಧ್ಯಕ್ಷರು ಅದಕ್ಕೆ ಒಪ್ಪದ ಕಾರಣ ಸಮ್ಮೇಳನದ ದಿನವೇ ಬೆಂಗಳೂರಿನಲ್ಲಿ ಬಂಡಾಯ ಸಾಹಿತ್ಯ ಸಮ್ಮೇಳನ ನಡೆಸಲಾಯಿತು’ ಎಂದರು.</p>.<p>‘ಇಡೀ ಕರ್ನಾಟಕವನ್ನು ಸುತ್ತಾಡಿದ ಬರಗೂರು ರಾಮಚಂದ್ರ ಅವರು, ತಮಗಿರುವ ವೈಚಾರಿಕ ಹಾಗೂ ಬೌದ್ಧಿಕ ಚಿಂತನೆಗಳ ಮೂಲಕ ಬಂಡಾಯ ಸಾಹಿತ್ಯ ಚಳವಳಿಯನ್ನು ಕಟ್ಟಿದರು. ನವ್ಯದ ವಿಮರ್ಶಕರು ಬಂಡಾಯ ಸಾಹಿತ್ಯವು ಇದು ಸಾಹಿತ್ಯದ ಪ್ರಕಾರವಲ್ಲ ಎಂದು<br />ವಿಮರ್ಶೆ ಮಾಡಿದಾಗ ಅದಕ್ಕೆ ತಕ್ಕ ಉತ್ತರ ನೀಡಿ, ಬೆಳೆಸಿದರು’ ಎಂದರು.</p>.<p>ಹಿರಿಯ ಪತ್ರಕರ್ತ ಗಂಗಾಧರ ಮೊದಲಿಯಾರ್, ‘ಸಾಹಿತ್ಯ ಮತ್ತು ಸಿನಿಮಾ ಅಂತರ್ಗತವಾಗಿರುತ್ತದೆ. ಮೊದಲು ಪ್ರಭಾವಗಳಿಂದ ಪ್ರೇರಿತವಾಗಿ ಸಿನಿಮಾಗಳನ್ನು ನಿರ್ಮಿಸಲಾಗುತ್ತಿತ್ತು. ಮನುಷ್ಯ ಪ್ರೀತಿಯ ಅನ್ವೇಷಣೆಗೆ ಬರಗೂರು ಅವರು ಒತ್ತು ನೀಡುತ್ತಾ ಬಂದರು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>