<p><strong>ಬೆಂಗಳೂರು:</strong> ‘ನಾಡಪ್ರಭು ಕೆಂಪೇಗೌಡರ ಚಿಂತನೆ ಮತ್ತು ಆಶಯಗಳಂತೆ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಸಂಕಲ್ಪ ಮಾಡಿದ್ದೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.</p>.<p>ಭುವನಹಳ್ಳಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ‘ಶತಮಾನಗಳ ಹಿಂದೆಯೇ ಬೆಂಗಳೂರಿಗರಿಗೆ ವಿಜಯನಗರ ಸಾಮ್ರಾಜ್ಯದ ಅಭಿವೃದ್ಧಿಯ ಪರಿಕಲ್ಪನೆ ಯನ್ನು ಅವರು ಪರಿಚಯಿಸಿದ್ದರು. ಸರ್ಕಾರವೂ ಅದೇ ಹಾದಿಯಲ್ಲಿ ಸಾಗುವ ಸಂಕಲ್ಪ ಮಾಡಿದೆ’ ಎಂದರು.</p>.<p>ಪ್ರಧಾನಿ ಮೋದಿಯವರೂ ರಾಜ್ಯದ ಅಭಿವೃದ್ಧಿಗೆ ಬೆಂಗಾವಲಾಗಿ ನಿಂತಿದ್ದಾರೆ. ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ವಂದೇ ಭಾರತ್ ರೈಲು ಮತ್ತು ಎರಡನೆ ಟರ್ಮಿನಲ್ ಈಗ ಅವರು ನೀಡಿರುವ ದೊಡ್ಡ ಕೊಡುಗೆಗಳು ಎಂದು ಹೇಳಿದರು.</p>.<p><strong>ನವೋದ್ಯಮದ ಶಕ್ತಿಯಿಂದ ದೇಶ ಗೆದ್ದಿದೆ –ಪ್ರಧಾನಿ<br />ಬೆಂಗಳೂರು: </strong>‘ಭಾರತದ ನವೋದ್ಯಮಗಳ ಶಕ್ತಿ ಬೆಂಗಳೂರು ನಗರದಲ್ಲಿದೆ. ಈ ಶಕ್ತಿಯೇ ದೇಶವನ್ನು ಇತರ ರಾಷ್ಟ್ರಗಳ ಎದುರು ಗೆಲ್ಲಿಸಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.</p>.<p>ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಭುವನಹಳ್ಳಿಯಲ್ಲಿ ಶುಕ್ರವಾರ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಅವರು, ‘ನವೋದ್ಯಮದಲ್ಲಿ ಹೊಸತನ್ನು ಸೃಷ್ಟಿಸುವ ಅಪರಿಮಿತ ವಿಶ್ವಾಸವಿದೆ. ಬೆಂಗಳೂರಿನ ಯುವಜನರ ಈ ವಿಶ್ವಾಸವೇ ದೇಶಕ್ಕೆ ಹೊಸ ಅವಕಾಶಗಳನ್ನು ತೆರೆದಿದೆ’ ಎಂದರು.</p>.<p>ಜಗತ್ತು ಕೋವಿಡ್ನಿಂದ ಸಂಕಷ್ಟಕ್ಕೆ ಸಿಲುಕಿದ್ದಾಗಲೇ ₹ 4 ಲಕ್ಷ ಕೋಟಿ ಹೂಡಿಕೆ ಕರ್ನಾಟಕಕ್ಕೆ ಹರಿದುಬಂದಿದೆ. ಕಳೆದ ವರ್ಷ ವಿದೇಶ ನೇರ ಬಂಡವಾಳ ಆಕರ್ಷಣೆಯಲ್ಲಿ ಈ ರಾಜ್ಯವು ಇಡೀ ದೇಶಕ್ಕೆ ಮಾದರಿಯಾಗಿತ್ತು. ಎಲ್ಲ ಕ್ಷೇತ್ರಗಳಲ್ಲೂ ಕರ್ನಾಟಕಕ್ಕೆ ಹೂಡಿಕೆ ಹರಿದುಬರುತ್ತಿದೆ. ದೇಶದ ರಕ್ಷಣಾ ಇಲಾಖೆಯು ಬಳಸುತ್ತಿರುವ ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್ಗಳ ಪೈಕಿ ಶೇಕಡ 70ರಷ್ಟು ಇಲ್ಲಿಯೇ ಉತ್ಪಾದನೆಯಾಗುತ್ತಿವೆ ಎಂಬುದು ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು.</p>.<p>ಭೀಮ್ ಯುಪಿಐ, ದೇಶೀಯ 5–ಜಿ ತಂತ್ರಜ್ಞಾನ ಸೇರಿ ಹಲವು ಕನಸುಗಳನ್ನು ಬೆಂಗಳೂರು ಸಾಕಾರಗೊಳಿಸಿದೆ. ಕೆಂಪೇಗೌಡರ ಕಲ್ಪನೆಯಂತೆ ಈ ನಗರದಲ್ಲಿ ವಾಣಿಜ್ಯ, ಸಂಸ್ಕೃತಿ ಮತ್ತು ಸೌಲಭ್ಯ ಎಲ್ಲವೂ ಇದೆ. ನಗರ ನಿರ್ಮಾತೃವಿನ ದೂರದೃಷ್ಟಿ ಈಗಲೂ ಫಲ ನೀಡುತ್ತಿದೆ ಎಂದರು.</p>.<p>ಪ್ರಾಸ್ತಾವಿಕ ಭಾಷಣ ಮಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ‘ಎ.ಬಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ವಿಮಾನ ನಿಲ್ದಾಣದ ಮೊದಲ ಟರ್ಮಿನಲ್ ಅನ್ನು ಬೆಂಗಳೂರಿಗೆ ಕೊಡುಗೆಯಾಗಿ ನೀಡಿದ್ದರು. ಈಗ ಮೋದಿ ಅವರು ಎರಡನೇ ಟರ್ಮಿನಲ್ ನೀಡಿದ್ದಾರೆ’ ಎಂದರು.</p>.<p><strong>ಶಿಷ್ಟಾಚಾರ ಉಲ್ಲಂಘನೆ– ಶಾಸಕ ಟೀಕೆ<br />ದೇವನಹಳ್ಳಿ:</strong> ‘ನಾಡಪ್ರಭು ಕೆಂಪೇಗೌಡರ ಪ್ರಗತಿ ಪ್ರತಿಮೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನನ್ನಿಂದ ಕಸಿದುಕೊಂಡು ಹಕ್ಕುಚ್ಯುತಿ ಮಾಡಿದ್ದಾರೆ’ ಎಂದು ದೇವನಹಳ್ಳಿ ಜೆಡಿಎಸ್ ಶಾಸಕ ನಿಸರ್ಗ ನಾರಾಯಣಸ್ವಾಮಿ ಆರೋಪಿಸಿದ್ದಾರೆ.</p>.<p>ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಾಸಕ ಸ್ಥಾನಕ್ಕೆ ಉಂಟಾಗಿರುವ ಹಕ್ಕುಚ್ಯುತಿಗೆ ಸಂಬಂಧಿಸಿದಂತೆ ಕಾನೂನಾತ್ಮಕವಾಗಿ ಶಾಸಕಾಂಗದಿಂದ ನ್ಯಾಯ ಪಡೆದುಕೊಳ್ಳುತ್ತೇನೆ’ ಎಂದರು.</p>.<p>ಕಾರ್ಯಕ್ರಮ ಮುಗಿಯುವ ವೇಳೆಗೆ ಆಹ್ವಾನ ಪತ್ರಿಕೆಯನ್ನು ಗ್ರಾಮ ಪಂಚಾಯಿತಿಯ ಪೌರ ಕಾರ್ಮಿಕರೊಬ್ಬರ ಕೈಯಲ್ಲಿ ಕಳುಹಿಸಲಾಗಿತ್ತು. ಆತ ರಸ್ತೆಯಲ್ಲಿಯೇ ಆಹ್ವಾನ ಪತ್ರಿಕೆ ನೀಡಲು ಮುಂದಾಗಿದ್ದ. ಇಷ್ಟರ ಮಟ್ಟಿಗೆ ಬಿಜೆಪಿ ಸರ್ಕಾರ ಜನಪ್ರತಿನಿಧಿಯನ್ನು ಗೌರವಿಸುತ್ತಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ನಾಡಪ್ರಭು ಕೆಂಪೇಗೌಡರ ಚಿಂತನೆ ಮತ್ತು ಆಶಯಗಳಂತೆ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಸಂಕಲ್ಪ ಮಾಡಿದ್ದೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.</p>.<p>ಭುವನಹಳ್ಳಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ‘ಶತಮಾನಗಳ ಹಿಂದೆಯೇ ಬೆಂಗಳೂರಿಗರಿಗೆ ವಿಜಯನಗರ ಸಾಮ್ರಾಜ್ಯದ ಅಭಿವೃದ್ಧಿಯ ಪರಿಕಲ್ಪನೆ ಯನ್ನು ಅವರು ಪರಿಚಯಿಸಿದ್ದರು. ಸರ್ಕಾರವೂ ಅದೇ ಹಾದಿಯಲ್ಲಿ ಸಾಗುವ ಸಂಕಲ್ಪ ಮಾಡಿದೆ’ ಎಂದರು.</p>.<p>ಪ್ರಧಾನಿ ಮೋದಿಯವರೂ ರಾಜ್ಯದ ಅಭಿವೃದ್ಧಿಗೆ ಬೆಂಗಾವಲಾಗಿ ನಿಂತಿದ್ದಾರೆ. ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ವಂದೇ ಭಾರತ್ ರೈಲು ಮತ್ತು ಎರಡನೆ ಟರ್ಮಿನಲ್ ಈಗ ಅವರು ನೀಡಿರುವ ದೊಡ್ಡ ಕೊಡುಗೆಗಳು ಎಂದು ಹೇಳಿದರು.</p>.<p><strong>ನವೋದ್ಯಮದ ಶಕ್ತಿಯಿಂದ ದೇಶ ಗೆದ್ದಿದೆ –ಪ್ರಧಾನಿ<br />ಬೆಂಗಳೂರು: </strong>‘ಭಾರತದ ನವೋದ್ಯಮಗಳ ಶಕ್ತಿ ಬೆಂಗಳೂರು ನಗರದಲ್ಲಿದೆ. ಈ ಶಕ್ತಿಯೇ ದೇಶವನ್ನು ಇತರ ರಾಷ್ಟ್ರಗಳ ಎದುರು ಗೆಲ್ಲಿಸಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.</p>.<p>ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಭುವನಹಳ್ಳಿಯಲ್ಲಿ ಶುಕ್ರವಾರ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಅವರು, ‘ನವೋದ್ಯಮದಲ್ಲಿ ಹೊಸತನ್ನು ಸೃಷ್ಟಿಸುವ ಅಪರಿಮಿತ ವಿಶ್ವಾಸವಿದೆ. ಬೆಂಗಳೂರಿನ ಯುವಜನರ ಈ ವಿಶ್ವಾಸವೇ ದೇಶಕ್ಕೆ ಹೊಸ ಅವಕಾಶಗಳನ್ನು ತೆರೆದಿದೆ’ ಎಂದರು.</p>.<p>ಜಗತ್ತು ಕೋವಿಡ್ನಿಂದ ಸಂಕಷ್ಟಕ್ಕೆ ಸಿಲುಕಿದ್ದಾಗಲೇ ₹ 4 ಲಕ್ಷ ಕೋಟಿ ಹೂಡಿಕೆ ಕರ್ನಾಟಕಕ್ಕೆ ಹರಿದುಬಂದಿದೆ. ಕಳೆದ ವರ್ಷ ವಿದೇಶ ನೇರ ಬಂಡವಾಳ ಆಕರ್ಷಣೆಯಲ್ಲಿ ಈ ರಾಜ್ಯವು ಇಡೀ ದೇಶಕ್ಕೆ ಮಾದರಿಯಾಗಿತ್ತು. ಎಲ್ಲ ಕ್ಷೇತ್ರಗಳಲ್ಲೂ ಕರ್ನಾಟಕಕ್ಕೆ ಹೂಡಿಕೆ ಹರಿದುಬರುತ್ತಿದೆ. ದೇಶದ ರಕ್ಷಣಾ ಇಲಾಖೆಯು ಬಳಸುತ್ತಿರುವ ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್ಗಳ ಪೈಕಿ ಶೇಕಡ 70ರಷ್ಟು ಇಲ್ಲಿಯೇ ಉತ್ಪಾದನೆಯಾಗುತ್ತಿವೆ ಎಂಬುದು ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು.</p>.<p>ಭೀಮ್ ಯುಪಿಐ, ದೇಶೀಯ 5–ಜಿ ತಂತ್ರಜ್ಞಾನ ಸೇರಿ ಹಲವು ಕನಸುಗಳನ್ನು ಬೆಂಗಳೂರು ಸಾಕಾರಗೊಳಿಸಿದೆ. ಕೆಂಪೇಗೌಡರ ಕಲ್ಪನೆಯಂತೆ ಈ ನಗರದಲ್ಲಿ ವಾಣಿಜ್ಯ, ಸಂಸ್ಕೃತಿ ಮತ್ತು ಸೌಲಭ್ಯ ಎಲ್ಲವೂ ಇದೆ. ನಗರ ನಿರ್ಮಾತೃವಿನ ದೂರದೃಷ್ಟಿ ಈಗಲೂ ಫಲ ನೀಡುತ್ತಿದೆ ಎಂದರು.</p>.<p>ಪ್ರಾಸ್ತಾವಿಕ ಭಾಷಣ ಮಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ‘ಎ.ಬಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ವಿಮಾನ ನಿಲ್ದಾಣದ ಮೊದಲ ಟರ್ಮಿನಲ್ ಅನ್ನು ಬೆಂಗಳೂರಿಗೆ ಕೊಡುಗೆಯಾಗಿ ನೀಡಿದ್ದರು. ಈಗ ಮೋದಿ ಅವರು ಎರಡನೇ ಟರ್ಮಿನಲ್ ನೀಡಿದ್ದಾರೆ’ ಎಂದರು.</p>.<p><strong>ಶಿಷ್ಟಾಚಾರ ಉಲ್ಲಂಘನೆ– ಶಾಸಕ ಟೀಕೆ<br />ದೇವನಹಳ್ಳಿ:</strong> ‘ನಾಡಪ್ರಭು ಕೆಂಪೇಗೌಡರ ಪ್ರಗತಿ ಪ್ರತಿಮೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನನ್ನಿಂದ ಕಸಿದುಕೊಂಡು ಹಕ್ಕುಚ್ಯುತಿ ಮಾಡಿದ್ದಾರೆ’ ಎಂದು ದೇವನಹಳ್ಳಿ ಜೆಡಿಎಸ್ ಶಾಸಕ ನಿಸರ್ಗ ನಾರಾಯಣಸ್ವಾಮಿ ಆರೋಪಿಸಿದ್ದಾರೆ.</p>.<p>ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಾಸಕ ಸ್ಥಾನಕ್ಕೆ ಉಂಟಾಗಿರುವ ಹಕ್ಕುಚ್ಯುತಿಗೆ ಸಂಬಂಧಿಸಿದಂತೆ ಕಾನೂನಾತ್ಮಕವಾಗಿ ಶಾಸಕಾಂಗದಿಂದ ನ್ಯಾಯ ಪಡೆದುಕೊಳ್ಳುತ್ತೇನೆ’ ಎಂದರು.</p>.<p>ಕಾರ್ಯಕ್ರಮ ಮುಗಿಯುವ ವೇಳೆಗೆ ಆಹ್ವಾನ ಪತ್ರಿಕೆಯನ್ನು ಗ್ರಾಮ ಪಂಚಾಯಿತಿಯ ಪೌರ ಕಾರ್ಮಿಕರೊಬ್ಬರ ಕೈಯಲ್ಲಿ ಕಳುಹಿಸಲಾಗಿತ್ತು. ಆತ ರಸ್ತೆಯಲ್ಲಿಯೇ ಆಹ್ವಾನ ಪತ್ರಿಕೆ ನೀಡಲು ಮುಂದಾಗಿದ್ದ. ಇಷ್ಟರ ಮಟ್ಟಿಗೆ ಬಿಜೆಪಿ ಸರ್ಕಾರ ಜನಪ್ರತಿನಿಧಿಯನ್ನು ಗೌರವಿಸುತ್ತಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>