ಪೂರಕ ಅಂದಾಜುಗಳ ಮೇಲಿನ ಚರ್ಚೆಯ ವೇಳೆ ಬಿಜೆಪಿ ಸರ್ಕಾರ ರಚನೆಯಾದ ಬೆಳವಣಿಗೆಯನ್ನು ಪ್ರಸ್ತಾಪಿಸಿದ ಅವರು, ‘ಕಸರತ್ತು ಮಾಡಿ ಸರ್ಕಾರ ರಚಿಸಿ ಇಲ್ಲದ ಉಸಾಬರಿ ಮೈಮೇಲೆ ಎಳ್ಕೊಂಡಿರಿ. ಈ ಕಡೆಯಿಂದ ಹೋದವರಿಗೆಲ್ಲಾ ಸಚಿವ ಸ್ಥಾನ ಬಿಟ್ಟು ಕೊಟ್ಟಿರಿ. ಮೂಲ ಬಿಜೆಪಿಯವರನ್ನು ಸಮಾಧಾನ ಮಾಡೋಕೆ ದಿನಕ್ಕೊಂದು ನಿಗಮ, ಮಂಡಳಿ ರಚಿಸುತ್ತಿದ್ದೀರಿ. ಇದೆಲ್ಲಾ ಬೇಕಿತ್ತಾ‘ ಎಂದು ಕೇಳಿದರು.