<p><strong>ಬೆಂಗಳೂರು: ‘</strong>105 ಶಾಸಕರನ್ನು ಇರಿಸಿಕೊಂಡು ವಿರೋಧ ಪಕ್ಷದಲ್ಲಿ ಇದ್ದಿದ್ದರೆ ಸರಿ ಇತ್ತು. ಈ ಕಡೆಯಿಂದ 17 ಜನರನ್ನು ಕರ್ಕೊಂಡು ಹೋಗಿ ಸರ್ಕಾರ ಮಾಡದಿದ್ದರೆ ಈಗಿರುವ ತಲೆಬಿಸಿಗಳೆಲ್ಲಾ ಇರುತ್ತಿದ್ದವಾ’ ಎಂದು ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಅವರು ಗುರುವಾರ ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯರನ್ನು ಪ್ರಶ್ನಿಸಿದರು.</p>.<p>ಪೂರಕ ಅಂದಾಜುಗಳ ಮೇಲಿನ ಚರ್ಚೆಯ ವೇಳೆ ಬಿಜೆಪಿ ಸರ್ಕಾರ ರಚನೆಯಾದ ಬೆಳವಣಿಗೆಯನ್ನು ಪ್ರಸ್ತಾಪಿಸಿದ ಅವರು, ‘ಕಸರತ್ತು ಮಾಡಿ ಸರ್ಕಾರ ರಚಿಸಿ ಇಲ್ಲದ ಉಸಾಬರಿ ಮೈಮೇಲೆ ಎಳ್ಕೊಂಡಿರಿ. ಈ ಕಡೆಯಿಂದ ಹೋದವರಿಗೆಲ್ಲಾ ಸಚಿವ ಸ್ಥಾನ ಬಿಟ್ಟು ಕೊಟ್ಟಿರಿ. ಮೂಲ ಬಿಜೆಪಿಯವರನ್ನು ಸಮಾಧಾನ ಮಾಡೋಕೆ ದಿನಕ್ಕೊಂದು ನಿಗಮ, ಮಂಡಳಿ ರಚಿಸುತ್ತಿದ್ದೀರಿ. ಇದೆಲ್ಲಾ ಬೇಕಿತ್ತಾ‘ ಎಂದು ಕೇಳಿದರು.</p>.<p>ಈಗಲೇ ವಾಂತಿ ಬರುವಷ್ಟು ನಿಗಮ, ಮಂಡಳಿಗಳಿವೆ. ಇನ್ನೆಷ್ಟು ನಿಗಮ, ಮಂಡಳಿ ಮಾಡುತ್ತೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p>ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಅವರೂ ಹಲವು ಬಾರಿ, ‘ಆಪರೇಷನ್ ಕಮಲ ಮಾಡಿ ಸರ್ಕಾರ ಮಾಡಿದ್ದೀರಿ‘ ಎಂದು ಬಿಜೆಪಿಯವರನ್ನು ಹಂಗಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: ‘</strong>105 ಶಾಸಕರನ್ನು ಇರಿಸಿಕೊಂಡು ವಿರೋಧ ಪಕ್ಷದಲ್ಲಿ ಇದ್ದಿದ್ದರೆ ಸರಿ ಇತ್ತು. ಈ ಕಡೆಯಿಂದ 17 ಜನರನ್ನು ಕರ್ಕೊಂಡು ಹೋಗಿ ಸರ್ಕಾರ ಮಾಡದಿದ್ದರೆ ಈಗಿರುವ ತಲೆಬಿಸಿಗಳೆಲ್ಲಾ ಇರುತ್ತಿದ್ದವಾ’ ಎಂದು ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಅವರು ಗುರುವಾರ ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯರನ್ನು ಪ್ರಶ್ನಿಸಿದರು.</p>.<p>ಪೂರಕ ಅಂದಾಜುಗಳ ಮೇಲಿನ ಚರ್ಚೆಯ ವೇಳೆ ಬಿಜೆಪಿ ಸರ್ಕಾರ ರಚನೆಯಾದ ಬೆಳವಣಿಗೆಯನ್ನು ಪ್ರಸ್ತಾಪಿಸಿದ ಅವರು, ‘ಕಸರತ್ತು ಮಾಡಿ ಸರ್ಕಾರ ರಚಿಸಿ ಇಲ್ಲದ ಉಸಾಬರಿ ಮೈಮೇಲೆ ಎಳ್ಕೊಂಡಿರಿ. ಈ ಕಡೆಯಿಂದ ಹೋದವರಿಗೆಲ್ಲಾ ಸಚಿವ ಸ್ಥಾನ ಬಿಟ್ಟು ಕೊಟ್ಟಿರಿ. ಮೂಲ ಬಿಜೆಪಿಯವರನ್ನು ಸಮಾಧಾನ ಮಾಡೋಕೆ ದಿನಕ್ಕೊಂದು ನಿಗಮ, ಮಂಡಳಿ ರಚಿಸುತ್ತಿದ್ದೀರಿ. ಇದೆಲ್ಲಾ ಬೇಕಿತ್ತಾ‘ ಎಂದು ಕೇಳಿದರು.</p>.<p>ಈಗಲೇ ವಾಂತಿ ಬರುವಷ್ಟು ನಿಗಮ, ಮಂಡಳಿಗಳಿವೆ. ಇನ್ನೆಷ್ಟು ನಿಗಮ, ಮಂಡಳಿ ಮಾಡುತ್ತೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p>ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಅವರೂ ಹಲವು ಬಾರಿ, ‘ಆಪರೇಷನ್ ಕಮಲ ಮಾಡಿ ಸರ್ಕಾರ ಮಾಡಿದ್ದೀರಿ‘ ಎಂದು ಬಿಜೆಪಿಯವರನ್ನು ಹಂಗಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>