ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಪಕ್ಷದ ಬಿಬಿಎಂಪಿ ಚುನಾವಣೆ ಅಭಿಯಾನದ ಉಸ್ತುವಾರಿ ಶಾಂತಲಾ ದಾಮ್ಲೆ ಮಾತನಾಡಿ, ‘ಜ್ಞಾನಭಾರತಿ ವಾರ್ಡ್ಗೆ ಎಸ್.ಸತೀಶ್, ಕಾಡುಗೋಡಿ ವಾರ್ಡ್ಗೆ ಮುನೇಂದ್ರ, ಬಾಪೂಜಿನಗರ ವಾರ್ಡ್ಗೆ ಕೆ.ರಾಜೇಂದ್ರ ಹಾಗೂ ರಾಜಾಜಿನಗರ ವಾರ್ಡ್ಗೆ ಗುರುಮೂರ್ತಿ ಅವರನ್ನು ವಾರ್ಡ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಈ ವಾರ್ಡ್ಗಳಲ್ಲಿ ಸಂಜೆ 6 ಗಂಟೆಗೆ ಜನಸಂವಾದ ಕಾರ್ಯಕ್ರಮಗಳು ಹಾಗೂ ಕಿರುಚಿತ್ರ ಪ್ರದರ್ಶನಗಳು ನಡೆಯಲಿವೆ’ ಎಂದರು.