ಕಾಂಗ್ರೆಸ್ನ ಆರ್.ಬಿ. ತಿಮ್ಮಾಪೂರ, ‘ಈ ಪ್ರಾಧಿಕಾರದಲ್ಲಿ ಮುಖ್ಯ ಆರೋಗ್ಯಾಧಿಕಾರಿಯೂ ಇರುತ್ತಾರೆ. ಅದರ ಬದಲು ಆರೋಗ್ಯ ಇಲಾಖೆ ಅಧಿಕಾರಿ ಬಿಟ್ಟು ಬೇರೆ ಅಧಿಕಾರಿ ನೇಮಿಸಬೇಕು’ ಎಂದರು.‘ಬಿಬಿಎಂಪಿ ವ್ಯಾಪ್ತಿ ಜಿಲ್ಲಾಧಿಕಾರಿಯ ವ್ಯಾಪ್ತಿ ಮೀರಿದೆ. ಬೇರೆ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯೇ ಪ್ರಾಧಿಕಾರದ ಮುಖ್ಯಸ್ಥರಾಗಿರುತ್ತಾರೆ. ಹೀಗಾಗಿ, ಆಯುಕ್ತರಿಗೆ ಹೊಣೆ ನೀಡಲು ತಿದ್ದುಪಡಿ ಮಾಡಲಾಗುತ್ತಿದೆ’ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಸಮರ್ಥಿಸಿದರು ಆರೋಗ್ಯ ಸಚಿವ ಶ್ರೀರಾಮುಲು, ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಪ್ರದೇಶ ಇರುವ ಕಾರಣ ಮತ್ತು ಕಂಟೈನ್ಮೆಂಟ್ ವಲಯ ಗಳನ್ನು ಬಿಬಿಎಂಪಿ ಆಯುಕ್ತರೇ ನಿರ್ವಹಿಸುತ್ತಿರುವುದರಿಂದ ಈ ಬದಲಾವಣೆ ಮಾಡಲಾಗಿದೆ’ ಎಂದರು. ಧ್ವನಿಮತದ ಮೂಲಕ ಅಂಗೀಕಾರ ನೀಡಲಾಯಿತು.