<p><strong>ಬೆಂಗಳೂರು:</strong> ಬಿಬಿಎಂಪಿ ಶಾಲೆಗಳ ಅತಿಥಿ ಶಿಕ್ಷಕರಿಗೆ ಕಳೆದ ವರ್ಷದ ಜೂನ್–ಜುಲೈ ತಿಂಗಳ ವೇತನವನ್ನೂ ಈವರೆಗೆ ಪಾವತಿಸಿಲ್ಲ ಎಂದು ಶಿಕ್ಷಕರು ದೂರಿದ್ದಾರೆ.</p>.<p>’ಕಳೆದ ವರ್ಷ ಕೋವಿಡ್ ಕರ್ತವ್ಯ ಮಾಡಿದವರಿಗೆ ಮಾತ್ರ ಜೂನ್–ಜುಲೈ ತಿಂಗಳ ವೇತನ ಪಾವತಿಸಲಾಗುವುದು ಎಂದಿದ್ದರು. ನಾವು ಶಾಲೆಗಳಿಗೆ ಹೋಗಿ ಕೆಲಸ ಮಾಡಿದ್ದೆವು. ಎಸ್ಸೆಸ್ಸೆಲ್ಸಿ ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯ ನಿರ್ವಹಿಸಿದ್ದೆವು. ನಮ್ಮನ್ನು ಹೊರಗುತ್ತಿಗೆ ಪಡೆದಿರುವ ಕ್ರಿಸ್ಟಲ್ ಸಂಸ್ಥೆ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ಈ ಬಗ್ಗೆ ಹಲವು ಬಾರಿ ಮನವಿ ಮಾಡಿಕೊಂಡಿದ್ದೆವು. ವೇತನ ನೀಡಲು ಒಪ್ಪಿದ್ದರು. ಆದರೆ, ಈವರೆಗೂ ಜೂನ್–ಜುಲೈ ತಿಂಗಳ ವೇತನ ನೀಡಿಲ್ಲ‘ ಎಂದು ಹೆಸರು ಬಹಿರಂಗಪಡಿಸಲು ಬಯಸದ ಶಿಕ್ಷಕರೊಬ್ಬರು ಹೇಳಿದರು.</p>.<p>’ವಾರದಲ್ಲಿ, 15 ದಿನಗಳಲ್ಲಿ ಈ ವೇತನ ಹಾಕಲಾಗುವುದು ಎಂದು ಹೇಳುತ್ತಾರೆ. ಅದು ಕಾರ್ಯರೂಪಕ್ಕೆ ಮಾತ್ರ ಬರುವುದಿಲ್ಲ. ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರಿಗೂ ಈ ಬಗ್ಗೆ ಮನವಿ ಮಾಡಿದ್ದೆವು. ಆದರೂ ಪ್ರಯೋಜನವಾಗಿಲ್ಲ‘ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p>’ಈ ವರ್ಷದ ಮಾರ್ಚ್, ಏಪ್ರಿಲ್ ತಿಂಗಳ ವೇತನವನ್ನು ಈವರೆಗೂ ನೀಡಿಲ್ಲ. ನಾವು ಜೀವನ ನಡೆಸುವುದು ಹೇಗೆ‘ ಎಂದು ಮತ್ತೊಬ್ಬ ಶಿಕ್ಷಕರು ಅಳಲು ತೋಡಿಕೊಂಡರು.</p>.<p>’ಕೋವಿಡ್ ಕರ್ತವ್ಯಕ್ಕೆ ನಮ್ಮನ್ನು ನಿಯೋಜಿಸುತ್ತಿದ್ದಾರೆ. ಈಗಾಗಲೇ ಇಬ್ಬರು ಶಿಕ್ಷಕರು ಕೋವಿಡ್ನಿಂದ ಮೃತಪಟ್ಟಿದ್ದಾರೆ. ನಮಗೆ ಈ ಕರ್ತವ್ಯ ನಿರ್ವಹಿಸಲು ಅಭ್ಯಂತರವಿಲ್ಲ. ಆದರೆ, ಬಿಬಿಎಂಪಿಯು ನಮಗೆ ಆರ್ಥಿಕ ಮತ್ತು ಆರೋಗ್ಯ ಭದ್ರತೆ ಒದಗಿಸಬೇಕು‘ ಎಂದು ಅವರು ಒತ್ತಾಯಿಸಿದರು.</p>.<p class="Subhead"><strong>ಪಾವತಿಗೆ ಕ್ರಮ:</strong></p>.<p>’ಕೋವಿಡ್ ಕರ್ತವ್ಯ ನಿರ್ವಹಿಸಿದ ಮತ್ತು ಶಾಲೆಗೆ ಹಾಜರಾಗಿ ಕರ್ತವ್ಯ ನಿರ್ವಹಿಸಿದ್ದರ ಬಗ್ಗೆ ಹಾಜರಾತಿ ವಿವರ ನೀಡಿದ ಶಿಕ್ಷಕರ ಪೈಕಿ ಕಳೆದ ಜೂನ್ನಲ್ಲಿ 104 ಮತ್ತು ಜುಲೈನಲ್ಲಿ 130 ಜನರಿಗೆ ವೇತನ ಪಾವತಿಸಲಾಗಿದೆ. ತಡವಾಗಿ ಹಾಜರಾತಿ ವಿವರ ನೀಡಿದವರಿಗೆ ವೇತನ ನೀಡಲು ಆಗಿಲ್ಲ. ಈ ಪ್ರಕ್ರಿಯೆ ಚಾಲ್ತಿಯಲ್ಲಿತ್ತು. ಆದರೆ, ಮತ್ತೆ ಲಾಕ್ಡೌನ್ ಆಗಿದ್ದರಿಂದ ವಿಳಂಬವಾಗಿದೆ. ಬಿಬಿಎಂಪಿಯಿಂದ ಮತ್ತೆ ಸೂಚನೆ ಬಂದ ಕೂಡಲೇ ಈ ಎರಡು ತಿಂಗಳ ವೇತನ ನೀಡಲಾಗುವುದು‘ ಎಂದು ‘ಕ್ರಿಸ್ಟಲ್’ ಏಜೆನ್ಸಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>’ಮಾರ್ಚ್ ತಿಂಗಳ ವೇತನ ಒಂದು ವಾರದಲ್ಲಿ ಪಾವತಿಸಲಾಗುತ್ತದೆ. ಏಪ್ರಿಲ್ ತಿಂಗಳ ಹಾಜರಾತಿ ವಿವರವನ್ನು ಸಂಗ್ರಹಿಸಲು ಇನ್ನೂ ಸಾಧ್ಯವಾಗಿಲ್ಲ. ಇನ್ನು, ಯಾವಾಗಲೂ ಮೇ ತಿಂಗಳಲ್ಲಿ ರಜೆ ಇರುತ್ತಿದ್ದುದರಿಂದ ಈ ತಿಂಗಳ ವೇತನವನ್ನು ಈವರೆಗೆ ಶಿಕ್ಷಕರಿಗೆ ನೀಡುತ್ತಿರಲಿಲ್ಲ. ಆದರೆ, ಈ ಬಾರಿ ಶಿಕ್ಷಕರು ಮೇ ತಿಂಗಳಲ್ಲಿಯೂ ಕೋವಿಡ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ತಿಂಗಳ ವೇತನವನ್ನೂ ಪಾವತಿಸಲು ಅನುಮತಿ ಕೋರಿ ಬಿಬಿಎಂಪಿಗೆ ಪತ್ರ ಬರೆಯಲಾಗಿದೆ‘ ಎಂದೂ ಅವರು ಮಾಹಿತಿ ನೀಡಿದರು.</p>.<p>ಈ ಬಗ್ಗೆ ಪ್ರತಿಕ್ರಿಯೆಗೆ ಬಿಬಿಎಂಪಿ ಶಿಕ್ಷಣ ವಿಭಾಗದ ಸಹಾಯಕ ಆಯುಕ್ತ ನಾಗೇಂದ್ರ ನಾಯ್ಕ್ ಅವರಿಗೆ ಕರೆ ಮಾಡಲಾಯಿತು. ಆದರೆ ಅವರು ಸಂಪರ್ಕಕ್ಕೆ ಸಿಗಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬಿಬಿಎಂಪಿ ಶಾಲೆಗಳ ಅತಿಥಿ ಶಿಕ್ಷಕರಿಗೆ ಕಳೆದ ವರ್ಷದ ಜೂನ್–ಜುಲೈ ತಿಂಗಳ ವೇತನವನ್ನೂ ಈವರೆಗೆ ಪಾವತಿಸಿಲ್ಲ ಎಂದು ಶಿಕ್ಷಕರು ದೂರಿದ್ದಾರೆ.</p>.<p>’ಕಳೆದ ವರ್ಷ ಕೋವಿಡ್ ಕರ್ತವ್ಯ ಮಾಡಿದವರಿಗೆ ಮಾತ್ರ ಜೂನ್–ಜುಲೈ ತಿಂಗಳ ವೇತನ ಪಾವತಿಸಲಾಗುವುದು ಎಂದಿದ್ದರು. ನಾವು ಶಾಲೆಗಳಿಗೆ ಹೋಗಿ ಕೆಲಸ ಮಾಡಿದ್ದೆವು. ಎಸ್ಸೆಸ್ಸೆಲ್ಸಿ ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯ ನಿರ್ವಹಿಸಿದ್ದೆವು. ನಮ್ಮನ್ನು ಹೊರಗುತ್ತಿಗೆ ಪಡೆದಿರುವ ಕ್ರಿಸ್ಟಲ್ ಸಂಸ್ಥೆ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ಈ ಬಗ್ಗೆ ಹಲವು ಬಾರಿ ಮನವಿ ಮಾಡಿಕೊಂಡಿದ್ದೆವು. ವೇತನ ನೀಡಲು ಒಪ್ಪಿದ್ದರು. ಆದರೆ, ಈವರೆಗೂ ಜೂನ್–ಜುಲೈ ತಿಂಗಳ ವೇತನ ನೀಡಿಲ್ಲ‘ ಎಂದು ಹೆಸರು ಬಹಿರಂಗಪಡಿಸಲು ಬಯಸದ ಶಿಕ್ಷಕರೊಬ್ಬರು ಹೇಳಿದರು.</p>.<p>’ವಾರದಲ್ಲಿ, 15 ದಿನಗಳಲ್ಲಿ ಈ ವೇತನ ಹಾಕಲಾಗುವುದು ಎಂದು ಹೇಳುತ್ತಾರೆ. ಅದು ಕಾರ್ಯರೂಪಕ್ಕೆ ಮಾತ್ರ ಬರುವುದಿಲ್ಲ. ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರಿಗೂ ಈ ಬಗ್ಗೆ ಮನವಿ ಮಾಡಿದ್ದೆವು. ಆದರೂ ಪ್ರಯೋಜನವಾಗಿಲ್ಲ‘ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p>’ಈ ವರ್ಷದ ಮಾರ್ಚ್, ಏಪ್ರಿಲ್ ತಿಂಗಳ ವೇತನವನ್ನು ಈವರೆಗೂ ನೀಡಿಲ್ಲ. ನಾವು ಜೀವನ ನಡೆಸುವುದು ಹೇಗೆ‘ ಎಂದು ಮತ್ತೊಬ್ಬ ಶಿಕ್ಷಕರು ಅಳಲು ತೋಡಿಕೊಂಡರು.</p>.<p>’ಕೋವಿಡ್ ಕರ್ತವ್ಯಕ್ಕೆ ನಮ್ಮನ್ನು ನಿಯೋಜಿಸುತ್ತಿದ್ದಾರೆ. ಈಗಾಗಲೇ ಇಬ್ಬರು ಶಿಕ್ಷಕರು ಕೋವಿಡ್ನಿಂದ ಮೃತಪಟ್ಟಿದ್ದಾರೆ. ನಮಗೆ ಈ ಕರ್ತವ್ಯ ನಿರ್ವಹಿಸಲು ಅಭ್ಯಂತರವಿಲ್ಲ. ಆದರೆ, ಬಿಬಿಎಂಪಿಯು ನಮಗೆ ಆರ್ಥಿಕ ಮತ್ತು ಆರೋಗ್ಯ ಭದ್ರತೆ ಒದಗಿಸಬೇಕು‘ ಎಂದು ಅವರು ಒತ್ತಾಯಿಸಿದರು.</p>.<p class="Subhead"><strong>ಪಾವತಿಗೆ ಕ್ರಮ:</strong></p>.<p>’ಕೋವಿಡ್ ಕರ್ತವ್ಯ ನಿರ್ವಹಿಸಿದ ಮತ್ತು ಶಾಲೆಗೆ ಹಾಜರಾಗಿ ಕರ್ತವ್ಯ ನಿರ್ವಹಿಸಿದ್ದರ ಬಗ್ಗೆ ಹಾಜರಾತಿ ವಿವರ ನೀಡಿದ ಶಿಕ್ಷಕರ ಪೈಕಿ ಕಳೆದ ಜೂನ್ನಲ್ಲಿ 104 ಮತ್ತು ಜುಲೈನಲ್ಲಿ 130 ಜನರಿಗೆ ವೇತನ ಪಾವತಿಸಲಾಗಿದೆ. ತಡವಾಗಿ ಹಾಜರಾತಿ ವಿವರ ನೀಡಿದವರಿಗೆ ವೇತನ ನೀಡಲು ಆಗಿಲ್ಲ. ಈ ಪ್ರಕ್ರಿಯೆ ಚಾಲ್ತಿಯಲ್ಲಿತ್ತು. ಆದರೆ, ಮತ್ತೆ ಲಾಕ್ಡೌನ್ ಆಗಿದ್ದರಿಂದ ವಿಳಂಬವಾಗಿದೆ. ಬಿಬಿಎಂಪಿಯಿಂದ ಮತ್ತೆ ಸೂಚನೆ ಬಂದ ಕೂಡಲೇ ಈ ಎರಡು ತಿಂಗಳ ವೇತನ ನೀಡಲಾಗುವುದು‘ ಎಂದು ‘ಕ್ರಿಸ್ಟಲ್’ ಏಜೆನ್ಸಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>’ಮಾರ್ಚ್ ತಿಂಗಳ ವೇತನ ಒಂದು ವಾರದಲ್ಲಿ ಪಾವತಿಸಲಾಗುತ್ತದೆ. ಏಪ್ರಿಲ್ ತಿಂಗಳ ಹಾಜರಾತಿ ವಿವರವನ್ನು ಸಂಗ್ರಹಿಸಲು ಇನ್ನೂ ಸಾಧ್ಯವಾಗಿಲ್ಲ. ಇನ್ನು, ಯಾವಾಗಲೂ ಮೇ ತಿಂಗಳಲ್ಲಿ ರಜೆ ಇರುತ್ತಿದ್ದುದರಿಂದ ಈ ತಿಂಗಳ ವೇತನವನ್ನು ಈವರೆಗೆ ಶಿಕ್ಷಕರಿಗೆ ನೀಡುತ್ತಿರಲಿಲ್ಲ. ಆದರೆ, ಈ ಬಾರಿ ಶಿಕ್ಷಕರು ಮೇ ತಿಂಗಳಲ್ಲಿಯೂ ಕೋವಿಡ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ತಿಂಗಳ ವೇತನವನ್ನೂ ಪಾವತಿಸಲು ಅನುಮತಿ ಕೋರಿ ಬಿಬಿಎಂಪಿಗೆ ಪತ್ರ ಬರೆಯಲಾಗಿದೆ‘ ಎಂದೂ ಅವರು ಮಾಹಿತಿ ನೀಡಿದರು.</p>.<p>ಈ ಬಗ್ಗೆ ಪ್ರತಿಕ್ರಿಯೆಗೆ ಬಿಬಿಎಂಪಿ ಶಿಕ್ಷಣ ವಿಭಾಗದ ಸಹಾಯಕ ಆಯುಕ್ತ ನಾಗೇಂದ್ರ ನಾಯ್ಕ್ ಅವರಿಗೆ ಕರೆ ಮಾಡಲಾಯಿತು. ಆದರೆ ಅವರು ಸಂಪರ್ಕಕ್ಕೆ ಸಿಗಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>