<p><strong>ಬೆಂಗಳೂರು</strong>: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಇನ್ನು ಮುಂದೆ ಬರವಣಿಗೆ ರೂಪದಲ್ಲಿ ನಿವೇಶನದ ವಿಸ್ತೀರ್ಣ ದಾಖಲೆಯನ್ನು ನೀಡುವುದಿಲ್ಲ. ‘ನಿಖರ ಅಳತೆ’ (ಸಿಡಿ) ಎಲೆಕ್ಟ್ರಾನಿಕ್ ರೂಪದಲ್ಲಿ ಇರಲಿದೆ. ಎರಡು ವರ್ಷದ ಹಿಂದಿನ ಯೋಜನೆ ಇದೀಗ ಜಾರಿಯಾಗಲಿದೆ.</p>.<p>ನಾಡಪ್ರಭು ಕೆಂಪೇಗೌಡ ಬಡಾವಣೆ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬಿಡಿಎ ಆಯುಕ್ತ ಜಿ. ಕುಮಾರ ನಾಯ್ಕ್ ಅಧಿಕಾರಿಗಳಿಗೆ ಈ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸೂಚಿಸಿದ್ದಾರೆ. ಅಲ್ಲದೆ, ‘ನಿಖರ ಅಳತೆ’ ನೀಡುವ ಅಧಿಕಾರವನ್ನು ಕಾರ್ಯಪಾಲಕ ಎಂಜಿನಿಯರ್ಗಳಿಂದ ಹಿಂಪಡೆದು, ಮೂರು ಸದಸ್ಯರ ಸಮಿತಿಗೆ ಈ ಜವಾಬ್ದಾರಿಯನ್ನು ವಹಿಸಲಾಗಿದೆ.</p>.<p>ಹೊಸ ಮತ್ತು ಹಳೆಯ ಎಲ್ಲ ಬಡಾವಣೆಗಳಿಗೂ ಈ ಹೊಸ ವ್ಯವಸ್ಥೆ ಅನ್ವಯವಾಗಲಿದೆ. ನಿವೇಶನ ವಿಸ್ತೀರ್ಣದೊಂದಿಗೆ ಸುತ್ತಮತ್ತಲ ಗಡಿ ವಿವರ ಹೊಂದಿರುವ ‘ಸಿಡಿ’ ನಿವೇಶನಕ್ಕೆ ಅತಿ ಜರೂರಾದ ದಾಖಲೆಯಾಗಿದೆ.</p>.<p>‘2020ರಲ್ಲೇ ಎಲೆಕ್ಟ್ರಾನಿಕ್ ಸಿಡಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ಕಡ್ಡಾಯವಾಗಿದ್ದರೂ ಅದನ್ನು ಯಾರೂ ಬಳಸುತ್ತಿರಲಿಲ್ಲ. ಇದನ್ನೇ ನಾವು ಮರುಜಾರಿಗೊಳಿಸುತ್ತಿದ್ದೇವೆ’ ಎಂದು ಕುಮಾರ ನಾಯ್ಕ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಇನ್ನು ಮುಂದೆ ಬರವಣಿಗೆ ರೂಪದಲ್ಲಿ ನಿವೇಶನದ ವಿಸ್ತೀರ್ಣ ದಾಖಲೆಯನ್ನು ನೀಡುವುದಿಲ್ಲ. ‘ನಿಖರ ಅಳತೆ’ (ಸಿಡಿ) ಎಲೆಕ್ಟ್ರಾನಿಕ್ ರೂಪದಲ್ಲಿ ಇರಲಿದೆ. ಎರಡು ವರ್ಷದ ಹಿಂದಿನ ಯೋಜನೆ ಇದೀಗ ಜಾರಿಯಾಗಲಿದೆ.</p>.<p>ನಾಡಪ್ರಭು ಕೆಂಪೇಗೌಡ ಬಡಾವಣೆ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬಿಡಿಎ ಆಯುಕ್ತ ಜಿ. ಕುಮಾರ ನಾಯ್ಕ್ ಅಧಿಕಾರಿಗಳಿಗೆ ಈ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸೂಚಿಸಿದ್ದಾರೆ. ಅಲ್ಲದೆ, ‘ನಿಖರ ಅಳತೆ’ ನೀಡುವ ಅಧಿಕಾರವನ್ನು ಕಾರ್ಯಪಾಲಕ ಎಂಜಿನಿಯರ್ಗಳಿಂದ ಹಿಂಪಡೆದು, ಮೂರು ಸದಸ್ಯರ ಸಮಿತಿಗೆ ಈ ಜವಾಬ್ದಾರಿಯನ್ನು ವಹಿಸಲಾಗಿದೆ.</p>.<p>ಹೊಸ ಮತ್ತು ಹಳೆಯ ಎಲ್ಲ ಬಡಾವಣೆಗಳಿಗೂ ಈ ಹೊಸ ವ್ಯವಸ್ಥೆ ಅನ್ವಯವಾಗಲಿದೆ. ನಿವೇಶನ ವಿಸ್ತೀರ್ಣದೊಂದಿಗೆ ಸುತ್ತಮತ್ತಲ ಗಡಿ ವಿವರ ಹೊಂದಿರುವ ‘ಸಿಡಿ’ ನಿವೇಶನಕ್ಕೆ ಅತಿ ಜರೂರಾದ ದಾಖಲೆಯಾಗಿದೆ.</p>.<p>‘2020ರಲ್ಲೇ ಎಲೆಕ್ಟ್ರಾನಿಕ್ ಸಿಡಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ಕಡ್ಡಾಯವಾಗಿದ್ದರೂ ಅದನ್ನು ಯಾರೂ ಬಳಸುತ್ತಿರಲಿಲ್ಲ. ಇದನ್ನೇ ನಾವು ಮರುಜಾರಿಗೊಳಿಸುತ್ತಿದ್ದೇವೆ’ ಎಂದು ಕುಮಾರ ನಾಯ್ಕ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>