<p><strong>ಬೆಂಗಳೂರು:</strong> ಸೇವೆ ಮಾಡುವ ಮನಸ್ಸೊಂದಿದ್ದರೆ ನಿಮಗೆ ಯಾವ ಯೋಜನೆ, ಕಾರ್ಯವಿಧಾನಗಳು ಬೇಡ. ಎಲ್ಲ ಹಾದಿಗಳು ತಂತಾನೆ ತೆರೆದುಕೊಳ್ಳುತ್ತವೆ. – ಇದು ಸಫಾಯಿ ಕರ್ಮಚಾರಿ ಆಂದೋಲನದ ನಾಯಕ, ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕೃತ ಬೇಜವಾಡ ವಿಲ್ಸನ್ ಅವರ ಅಂತರಂಗ.</p>.<p>ಕನ್ನಡ ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಗರದಲ್ಲಿ ಶನಿವಾರ ನಡೆದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಅವರು ಮನಸ್ಸು ತೆರೆದಿಟ್ಟರು. ಅವರ ಮಾತಿನ ಕೆಲವು ಝಲಕ್...</p>.<p><strong>ದೆಹಲಿಯಲ್ಲಿ ಡಿಎಲ್ಎಫ್ ಅಪಾರ್ಟ್ಮೆಂಟ್ನಲ್ಲಿ ಶೌಚಗುಂಡಿ ಸ್ವಚ್ಛತೆಗೆ ಇಳಿದಿದ್ದ ಐವರು ಕಾರ್ಮಿಕರು ಮೃತಪಟ್ಟರು. 26 ಮಹಡಿಗಳ ಕಟ್ಟಡ ಕಟ್ಟುವ, ಅದರ ಮೇಲೇರುವ ತಂತ್ರಜ್ಞಾನ ಇರುವ ನಮ್ಮಲ್ಲಿ ಶೌಚಗುಂಡಿ ಸ್ವಚ್ಛಗೊಳಿಸುವ ತಂತ್ರಜ್ಞಾನ ಇಲ್ಲವೇ?</strong></p>.<p>ಅಮಾಯಕರ ಸಾವುಗಳಾದಾಗ ಜವಾಬ್ದಾರಿ ಹೊರುವ ಒಬ್ಬನೇ ಅಧಿಕಾರಿ ಅಥವಾ ಜನನಾಯಕ ಇರುವುದಿಲ್ಲ. ಎಲ್ಲರೂ ತಪ್ಪಿಸಿಕೊಳ್ಳುವರೇ. ಒಬ್ಬ ಜವಾಬ್ದಾರಿಯುತ ನಾಯಕ ಹುಟ್ಟಿ ಬರಬೇಕಿದೆ. ಮಲಹೊರುವ ಪದ್ಧತಿ ಇಲ್ಲ ಎಂದು ಎಲ್ಲ ಜಿಲ್ಲಾಧಿಕಾರಿಗಳು ಸುಪ್ರೀಂ ಕೋರ್ಟ್ಗೆ ಸುಳ್ಳು ಹೇಳಿದ್ದಾರೆ. ಆ ತಾಕತ್ತು ಅವರಿಗಿದೆ. ಈ ಪದ್ಧತಿಯನ್ನು ಕೈಬಿಡಬೇಕು ಎಂದು ನಡೆಸಿದ ಹೋರಾಟ ಸಂಬಂಧಿಸಿದ ಪ್ರಕರಣವನ್ನು ಸುಪ್ರೀಂ ಕೋರ್ಟ್ನಲ್ಲಿ 23 ನ್ಯಾಯಮೂರ್ತಿಗಳು ವಿಚಾರಣೆ ನಡೆಸಿದ್ದಾರೆ. ಯಾರಿಂದಲೂ ನಮಗೆ ನ್ಯಾಯ ಸಿಕ್ಕಿಲ್ಲ.</p>.<p>ಪ್ರಜಾಪ್ರಭುತ್ವ ವ್ಯವಸ್ಥೆಯ ದೇಶದಲ್ಲಿ ಸೇವೆ ಮಾಡುವುದು ಬಹಳ ಕಷ್ಟ. ನೀವು ಒಳ್ಳೆಯದಕ್ಕೆ ಮುಂದಾದಾಗ ಸರ್ಕಾರ, ಅಧಿಕಾರಶಾಹಿ ವ್ಯವಸ್ಥೆ, ಕಾನೂನು ಎಲ್ಲವೂ ನಮ್ಮ ವಿರುದ್ಧ ತಿರುಗಿ ಬೀಳುತ್ತವೆ. ಪ್ರಜಾಪ್ರಭುತ್ವದ ವಿನ್ಯಾಸ ಶ್ರೀಮಂತರಿಗಷ್ಟೇ ಅನುಕೂಲವಾಗುವಂತೆ ಸುಂದರವಾಗಿದೆ.</p>.<p><strong>ಅಮ್ಮನ ನೆನಪು</strong></p>.<p>ನನ್ನ ಅಮ್ಮನಿಗೊಂದು ಹೆಸರೇ ಇರಲಿಲ್ಲ. ಅವರನ್ನು ಚಿನ್ನಮ್ಮ ಎಂದು ಕರೆಯುತ್ತಿದ್ದರು. ಅಂದರೆ ಸಣ್ಣವಳು ಎಂದು ಅರ್ಥ ಅಷ್ಟೆ. ಅವರನ್ನು ಕರೆಯಲು ಹೆಸರು ಇರಬೇಕು ಎಂದು ಯಾರಿಗೂ ಅನಿಸಲಿಲ್ಲ. ಎಲ್ಲರನ್ನೂ ಒಟ್ಟಾಗಿ ತೋಟಿ ಎಂದು ಕರೆಯುತ್ತಿದ್ದರು. ಈ ಕೆಲಸ ಏಕೆ ಮಾಡಬೇಕು ಎಂದು ಅಮ್ಮನನ್ನು ಕೇಳಿದೆ. ಅವರೆಂದರು, ಅದನ್ನು ನೀವು ಕೇಳಬಾರದು. ನೀವು ಈ ಕೆಲಸ ಮುಂದುವರಿಸಬಾರದು. ಚೆನ್ನಾಗಿ ಓದಿ ಈ ಕೆಲಸದಿಂದ ದೂರ ಹೋಗಬೇಕು ಎನ್ನುತ್ತಿದ್ದರು. ಹೌದು ಸಫಾಯಿ ಕರ್ಮಚಾರಿಗಳಿಗೆ ತಮ್ಮ ವ್ಯಥೆ ಹೇಳಿಕೊಳ್ಳಲು ಒಂದು ಭಾಷೆಯೂ ಇಲ್ಲ.</p>.<p><strong>ಜ್ವಾಲಾಮುಖಿಯಂಥ ವ್ಯಥೆ</strong></p>.<p>ವ್ಯಥೆ ಜ್ವಾಲಾಮುಖಿಯಂತೆ ಮಡುಗಟ್ಟಿದೆ. ಹಾಗಾಗಿ ನನ್ನದು ಸಫಾಯಿ ಕರ್ಮಚಾರಿ ಎಂಬುದೇ ಭಾಷೆ. ಹೋರಾಟಗಳ ಮೂಲಕ ಸ್ವಲ್ಪ ಹೆಸರು ಬಂದಾಗ ರಾಜಕೀಯ ಸೇರುವಂತೆ ಒತ್ತಡ ಬಂದಿತು. ಆಗ ನನ್ನನ್ನೇ ಪ್ರಶ್ನಿಸಿಕೊಂಡೆ. ನನ್ನ ಹಿನ್ನೆಲೆ, ಬಂದ ಉದ್ದೇಶ ಇತ್ಯಾದಿ ಬಗ್ಗೆ ಯೋಚಿಸಿದೆ. ಈ ಹೊತ್ತಿನಲ್ಲಿ ಅಂಬೇಡ್ಕರ್ ಬಗ್ಗೆ ಓದಿದೆ. ಅದು ನನ್ನ ಬದುಕನ್ನೇ ಬದಲಾಯಿಸಿತು. ಆದ್ದರಿಂದ ಇಂದಿನ ಶಿಕ್ಷಣದಲ್ಲಿ ಎಲ್ಲ ತರಗತಿಗಳ ಪಠ್ಯದಲ್ಲಿ ಅಂಬೇಡ್ಕರ್ ಅವರ ವಿಚಾರಧಾರೆಯನ್ನು ಅಧ್ಯಯನ ವಸ್ತುವನ್ನಾಗಿ ಸೇರಿಸಬೇಕು.</p>.<p><strong>ಓದಿದ್ದು, ಬೆಳೆದದ್ದು...</strong></p>.<p>ನಾನಿ ಓದಿದ್ದು ಕೇವಲ 10ನೇ ತರಗತಿ. ಆ ಪ್ರಮಾಣ ಪತ್ರ ನನ್ನಲ್ಲಿದೆ. ಆ ಬಳಿಕ ಬೇರೆ ಬೇರೆ ಪದವಿ ಕೋರ್ಸ್ಗಳಿಗೆ ಸೇರಿದೆ. ಯಾವುದನ್ನೂ ಪೂರ್ಣಗೊಳಿಸಲು ಆಗಲಿಲ್ಲ. ಈಗ ಕೆಲವು ವಿಶ್ವವಿದ್ಯಾಲಯಗಳು ಇವ ನಮ್ಮ ವಿದ್ಯಾರ್ಥಿ ಎಂದು ಹೇಳಿಕೊಳ್ಳುತ್ತಿವೆ. ಅದಕ್ಕೆ ನನ್ನ ಆಕ್ಷೇಪ ಇಲ್ಲ.</p>.<p>ಇಂಗ್ಲಿಷ್ ಶಾಲೆಗೆ ಹೋಗಬೇಕಿತ್ತು. ಆದರೆ ತರಗತಿಯೊಳಗೆ ಹೋಗುವಾಗ ಅದೇನೋ ಹೇಳುತ್ತಾರೆ. ‘ಮೇ ಐ ಕಮಿನ್’ ಎಂದು ಹೇಳಬೇಕು. ಅದು ನನಗೆ ತಿಳಿದದ್ದು ಇತ್ತೀಚೆಗೆ.</p>.<p><strong>ಕರ್ನಾಟಕದ ಬಗ್ಗೆ...</strong></p>.<p>ಸಾಮಾನ್ಯನೊಬ್ಬ ಮುಕ್ತವಾಗಿ ವಿಧಾನಸೌಧದೊಳಗೆ ಹೋಗಿ ತನಗೆ ಬೇಕಾದವರನ್ನು ಭೇಟಿಯಾಗುವ ಅವಕಾಶ ಇರುವುದು ಕರ್ನಾಟಕದಲ್ಲಿ ಮಾತ್ರ. ಇಲ್ಲಿ ಎಲ್ಲರನ್ನೂ ಸ್ವೀಕರಿಸುತ್ತಾರೆ. ಹಾಗೆಂದು ಇಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಅರ್ಥವಲ್ಲ. ಗೌರಿ, ಕಲಬುರ್ಗಿ ಹತ್ಯೆ ಆಗಿದ್ದು ಇದೇ ನೆಲದಲ್ಲಿಯೇ ಅಲ್ಲವೇ? ಕೆಲವು ಶಕ್ತಿಗಳು ಈ ನೆಲದ ಸಂಸ್ಕೃತಿಗೆ ವಿರುದ್ಧವಾಗಿಯೇ ವರ್ತಿಸುತ್ತಿವೆ.</p>.<p><strong>ಆಗಬೇಕಾದದ್ದು...</strong></p>.<p>ಕರ್ನಾಟಕದಲ್ಲಿ ಎಲ್ಲ ಪ್ರಗತಿಪರ ಸಂಘಟನೆಗಳು ಒಂದೇ ವೇದಿಕೆಯಡಿ ಬರಬೇಕು. ಕೊನೇ ಪಕ್ಷ ಮಲದ ಗುಂಡಿಗಳಲ್ಲಿ ಚರಂಡಿ ಸ್ವಚ್ಛತೆಯಲ್ಲಿ ಕಾರ್ಮಿಕರು ಸಾಯುವುದು ತಪ್ಪಬೇಕು. ಈ ನಿಟ್ಟಿನಲ್ಲಿ ಹೋರಾಟ ಕಟ್ಟೋಣ. ಸರ್ಕಾರಕ್ಕೆ ಒಂದು ವರ್ಷ ಗಡುವು ಕೊಡೋಣ. ಪರಿಸ್ಥಿತಿ ಬದಲಾಗದಿದ್ದರೆ. ಸರ್ಕಾರದ ವಿರುದ್ಧ ಧಿಕ್ಕಾರ ಕೂಗೋಣ. ಆದರೆ, ರಾಜ್ಯದ ವಿರುದ್ಧ ಅಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಸೇವೆ ಮಾಡುವ ಮನಸ್ಸೊಂದಿದ್ದರೆ ನಿಮಗೆ ಯಾವ ಯೋಜನೆ, ಕಾರ್ಯವಿಧಾನಗಳು ಬೇಡ. ಎಲ್ಲ ಹಾದಿಗಳು ತಂತಾನೆ ತೆರೆದುಕೊಳ್ಳುತ್ತವೆ. – ಇದು ಸಫಾಯಿ ಕರ್ಮಚಾರಿ ಆಂದೋಲನದ ನಾಯಕ, ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕೃತ ಬೇಜವಾಡ ವಿಲ್ಸನ್ ಅವರ ಅಂತರಂಗ.</p>.<p>ಕನ್ನಡ ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಗರದಲ್ಲಿ ಶನಿವಾರ ನಡೆದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಅವರು ಮನಸ್ಸು ತೆರೆದಿಟ್ಟರು. ಅವರ ಮಾತಿನ ಕೆಲವು ಝಲಕ್...</p>.<p><strong>ದೆಹಲಿಯಲ್ಲಿ ಡಿಎಲ್ಎಫ್ ಅಪಾರ್ಟ್ಮೆಂಟ್ನಲ್ಲಿ ಶೌಚಗುಂಡಿ ಸ್ವಚ್ಛತೆಗೆ ಇಳಿದಿದ್ದ ಐವರು ಕಾರ್ಮಿಕರು ಮೃತಪಟ್ಟರು. 26 ಮಹಡಿಗಳ ಕಟ್ಟಡ ಕಟ್ಟುವ, ಅದರ ಮೇಲೇರುವ ತಂತ್ರಜ್ಞಾನ ಇರುವ ನಮ್ಮಲ್ಲಿ ಶೌಚಗುಂಡಿ ಸ್ವಚ್ಛಗೊಳಿಸುವ ತಂತ್ರಜ್ಞಾನ ಇಲ್ಲವೇ?</strong></p>.<p>ಅಮಾಯಕರ ಸಾವುಗಳಾದಾಗ ಜವಾಬ್ದಾರಿ ಹೊರುವ ಒಬ್ಬನೇ ಅಧಿಕಾರಿ ಅಥವಾ ಜನನಾಯಕ ಇರುವುದಿಲ್ಲ. ಎಲ್ಲರೂ ತಪ್ಪಿಸಿಕೊಳ್ಳುವರೇ. ಒಬ್ಬ ಜವಾಬ್ದಾರಿಯುತ ನಾಯಕ ಹುಟ್ಟಿ ಬರಬೇಕಿದೆ. ಮಲಹೊರುವ ಪದ್ಧತಿ ಇಲ್ಲ ಎಂದು ಎಲ್ಲ ಜಿಲ್ಲಾಧಿಕಾರಿಗಳು ಸುಪ್ರೀಂ ಕೋರ್ಟ್ಗೆ ಸುಳ್ಳು ಹೇಳಿದ್ದಾರೆ. ಆ ತಾಕತ್ತು ಅವರಿಗಿದೆ. ಈ ಪದ್ಧತಿಯನ್ನು ಕೈಬಿಡಬೇಕು ಎಂದು ನಡೆಸಿದ ಹೋರಾಟ ಸಂಬಂಧಿಸಿದ ಪ್ರಕರಣವನ್ನು ಸುಪ್ರೀಂ ಕೋರ್ಟ್ನಲ್ಲಿ 23 ನ್ಯಾಯಮೂರ್ತಿಗಳು ವಿಚಾರಣೆ ನಡೆಸಿದ್ದಾರೆ. ಯಾರಿಂದಲೂ ನಮಗೆ ನ್ಯಾಯ ಸಿಕ್ಕಿಲ್ಲ.</p>.<p>ಪ್ರಜಾಪ್ರಭುತ್ವ ವ್ಯವಸ್ಥೆಯ ದೇಶದಲ್ಲಿ ಸೇವೆ ಮಾಡುವುದು ಬಹಳ ಕಷ್ಟ. ನೀವು ಒಳ್ಳೆಯದಕ್ಕೆ ಮುಂದಾದಾಗ ಸರ್ಕಾರ, ಅಧಿಕಾರಶಾಹಿ ವ್ಯವಸ್ಥೆ, ಕಾನೂನು ಎಲ್ಲವೂ ನಮ್ಮ ವಿರುದ್ಧ ತಿರುಗಿ ಬೀಳುತ್ತವೆ. ಪ್ರಜಾಪ್ರಭುತ್ವದ ವಿನ್ಯಾಸ ಶ್ರೀಮಂತರಿಗಷ್ಟೇ ಅನುಕೂಲವಾಗುವಂತೆ ಸುಂದರವಾಗಿದೆ.</p>.<p><strong>ಅಮ್ಮನ ನೆನಪು</strong></p>.<p>ನನ್ನ ಅಮ್ಮನಿಗೊಂದು ಹೆಸರೇ ಇರಲಿಲ್ಲ. ಅವರನ್ನು ಚಿನ್ನಮ್ಮ ಎಂದು ಕರೆಯುತ್ತಿದ್ದರು. ಅಂದರೆ ಸಣ್ಣವಳು ಎಂದು ಅರ್ಥ ಅಷ್ಟೆ. ಅವರನ್ನು ಕರೆಯಲು ಹೆಸರು ಇರಬೇಕು ಎಂದು ಯಾರಿಗೂ ಅನಿಸಲಿಲ್ಲ. ಎಲ್ಲರನ್ನೂ ಒಟ್ಟಾಗಿ ತೋಟಿ ಎಂದು ಕರೆಯುತ್ತಿದ್ದರು. ಈ ಕೆಲಸ ಏಕೆ ಮಾಡಬೇಕು ಎಂದು ಅಮ್ಮನನ್ನು ಕೇಳಿದೆ. ಅವರೆಂದರು, ಅದನ್ನು ನೀವು ಕೇಳಬಾರದು. ನೀವು ಈ ಕೆಲಸ ಮುಂದುವರಿಸಬಾರದು. ಚೆನ್ನಾಗಿ ಓದಿ ಈ ಕೆಲಸದಿಂದ ದೂರ ಹೋಗಬೇಕು ಎನ್ನುತ್ತಿದ್ದರು. ಹೌದು ಸಫಾಯಿ ಕರ್ಮಚಾರಿಗಳಿಗೆ ತಮ್ಮ ವ್ಯಥೆ ಹೇಳಿಕೊಳ್ಳಲು ಒಂದು ಭಾಷೆಯೂ ಇಲ್ಲ.</p>.<p><strong>ಜ್ವಾಲಾಮುಖಿಯಂಥ ವ್ಯಥೆ</strong></p>.<p>ವ್ಯಥೆ ಜ್ವಾಲಾಮುಖಿಯಂತೆ ಮಡುಗಟ್ಟಿದೆ. ಹಾಗಾಗಿ ನನ್ನದು ಸಫಾಯಿ ಕರ್ಮಚಾರಿ ಎಂಬುದೇ ಭಾಷೆ. ಹೋರಾಟಗಳ ಮೂಲಕ ಸ್ವಲ್ಪ ಹೆಸರು ಬಂದಾಗ ರಾಜಕೀಯ ಸೇರುವಂತೆ ಒತ್ತಡ ಬಂದಿತು. ಆಗ ನನ್ನನ್ನೇ ಪ್ರಶ್ನಿಸಿಕೊಂಡೆ. ನನ್ನ ಹಿನ್ನೆಲೆ, ಬಂದ ಉದ್ದೇಶ ಇತ್ಯಾದಿ ಬಗ್ಗೆ ಯೋಚಿಸಿದೆ. ಈ ಹೊತ್ತಿನಲ್ಲಿ ಅಂಬೇಡ್ಕರ್ ಬಗ್ಗೆ ಓದಿದೆ. ಅದು ನನ್ನ ಬದುಕನ್ನೇ ಬದಲಾಯಿಸಿತು. ಆದ್ದರಿಂದ ಇಂದಿನ ಶಿಕ್ಷಣದಲ್ಲಿ ಎಲ್ಲ ತರಗತಿಗಳ ಪಠ್ಯದಲ್ಲಿ ಅಂಬೇಡ್ಕರ್ ಅವರ ವಿಚಾರಧಾರೆಯನ್ನು ಅಧ್ಯಯನ ವಸ್ತುವನ್ನಾಗಿ ಸೇರಿಸಬೇಕು.</p>.<p><strong>ಓದಿದ್ದು, ಬೆಳೆದದ್ದು...</strong></p>.<p>ನಾನಿ ಓದಿದ್ದು ಕೇವಲ 10ನೇ ತರಗತಿ. ಆ ಪ್ರಮಾಣ ಪತ್ರ ನನ್ನಲ್ಲಿದೆ. ಆ ಬಳಿಕ ಬೇರೆ ಬೇರೆ ಪದವಿ ಕೋರ್ಸ್ಗಳಿಗೆ ಸೇರಿದೆ. ಯಾವುದನ್ನೂ ಪೂರ್ಣಗೊಳಿಸಲು ಆಗಲಿಲ್ಲ. ಈಗ ಕೆಲವು ವಿಶ್ವವಿದ್ಯಾಲಯಗಳು ಇವ ನಮ್ಮ ವಿದ್ಯಾರ್ಥಿ ಎಂದು ಹೇಳಿಕೊಳ್ಳುತ್ತಿವೆ. ಅದಕ್ಕೆ ನನ್ನ ಆಕ್ಷೇಪ ಇಲ್ಲ.</p>.<p>ಇಂಗ್ಲಿಷ್ ಶಾಲೆಗೆ ಹೋಗಬೇಕಿತ್ತು. ಆದರೆ ತರಗತಿಯೊಳಗೆ ಹೋಗುವಾಗ ಅದೇನೋ ಹೇಳುತ್ತಾರೆ. ‘ಮೇ ಐ ಕಮಿನ್’ ಎಂದು ಹೇಳಬೇಕು. ಅದು ನನಗೆ ತಿಳಿದದ್ದು ಇತ್ತೀಚೆಗೆ.</p>.<p><strong>ಕರ್ನಾಟಕದ ಬಗ್ಗೆ...</strong></p>.<p>ಸಾಮಾನ್ಯನೊಬ್ಬ ಮುಕ್ತವಾಗಿ ವಿಧಾನಸೌಧದೊಳಗೆ ಹೋಗಿ ತನಗೆ ಬೇಕಾದವರನ್ನು ಭೇಟಿಯಾಗುವ ಅವಕಾಶ ಇರುವುದು ಕರ್ನಾಟಕದಲ್ಲಿ ಮಾತ್ರ. ಇಲ್ಲಿ ಎಲ್ಲರನ್ನೂ ಸ್ವೀಕರಿಸುತ್ತಾರೆ. ಹಾಗೆಂದು ಇಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಅರ್ಥವಲ್ಲ. ಗೌರಿ, ಕಲಬುರ್ಗಿ ಹತ್ಯೆ ಆಗಿದ್ದು ಇದೇ ನೆಲದಲ್ಲಿಯೇ ಅಲ್ಲವೇ? ಕೆಲವು ಶಕ್ತಿಗಳು ಈ ನೆಲದ ಸಂಸ್ಕೃತಿಗೆ ವಿರುದ್ಧವಾಗಿಯೇ ವರ್ತಿಸುತ್ತಿವೆ.</p>.<p><strong>ಆಗಬೇಕಾದದ್ದು...</strong></p>.<p>ಕರ್ನಾಟಕದಲ್ಲಿ ಎಲ್ಲ ಪ್ರಗತಿಪರ ಸಂಘಟನೆಗಳು ಒಂದೇ ವೇದಿಕೆಯಡಿ ಬರಬೇಕು. ಕೊನೇ ಪಕ್ಷ ಮಲದ ಗುಂಡಿಗಳಲ್ಲಿ ಚರಂಡಿ ಸ್ವಚ್ಛತೆಯಲ್ಲಿ ಕಾರ್ಮಿಕರು ಸಾಯುವುದು ತಪ್ಪಬೇಕು. ಈ ನಿಟ್ಟಿನಲ್ಲಿ ಹೋರಾಟ ಕಟ್ಟೋಣ. ಸರ್ಕಾರಕ್ಕೆ ಒಂದು ವರ್ಷ ಗಡುವು ಕೊಡೋಣ. ಪರಿಸ್ಥಿತಿ ಬದಲಾಗದಿದ್ದರೆ. ಸರ್ಕಾರದ ವಿರುದ್ಧ ಧಿಕ್ಕಾರ ಕೂಗೋಣ. ಆದರೆ, ರಾಜ್ಯದ ವಿರುದ್ಧ ಅಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>