ಭದ್ರತೆಗೆ ಹೆಚ್ಚು ಸಿಬ್ಬಂದಿ: ‘ರಾಜಧಾನಿಯಲ್ಲಿ ನಿತ್ಯವೂ ಪ್ರತಿಭಟನೆ, ಗಣ್ಯರ ಆಗಮನ, ಸಭೆ– ಸಮಾರಂಭ ಇದ್ದೇ ಇರುತ್ತವೆ. ಅಲ್ಲೆಲ್ಲ ಭದ್ರತೆ ಒದಗಿಸಲು ಹೆಚ್ಚಿನ ಸಿಬ್ಬಂದಿ ಬೇಕಾಗುತ್ತದೆ. ಅಪರಾಧ ಕೃತ್ಯಗಳ ಆರೋಪಿಗಳನ್ನು ಬಂಧಿಸಲು ಹಾಗೂ ಪ್ರಕರಣಗಳ ತನಿಖೆ ನಡೆಸಲು ಸಿಬ್ಬಂದಿ ಕೊರತೆ ಇದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.‘ನಗರದ 145 ಠಾಣೆಗಳ ಪೈಕಿ ಬಹುಪಾಲು ಠಾಣೆಯ ಸಿಬ್ಬಂದಿಗೆ ವಾರದ ರಜೆಯೂ ಸಿಗುತ್ತಿಲ್ಲ. ಲೋಕಸಭಾ ಚುನಾವಣೆ ವೇಳೆ ಯಾರೊಬ್ಬರಿಗೂ ರಜೆ ಸಿಕ್ಕಿಲ್ಲ’ ಎಂದರು.