<p>ಬೆಂಗಳೂರು: ಕಾರು ಉಡುಗೊರೆ ನೆಪದಲ್ಲಿವ್ಯಕ್ತಿಯೊಬ್ಬರಿಗೆ ₹85 ಸಾವಿರ ವಂಚಿಸಿರುವ ಸಂಬಂಧ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.</p>.<p>‘ಕಮಲಾನಗರದ ನಿವಾಸಿ ಸುರೇಶ್ ವಂಚನೆಗೊಳಗಾದವರು. ಕಾರು ಉಡುಗೊರೆಯಾಗಿ ಬಂದಿದೆ ಎಂದು ವಂಚಕರು ಉಡುಗೊರೆ ಚೀಟಿಯೊಂದನ್ನುಸುರೇಶ್ಗೆ ಕಳಿಸಿದ್ದರು. ಈ ಬಗ್ಗೆ ಸುರೇಶ್ ವಿಚಾರಿಸಿದಾಗ ಹರ್ಬಲ್ ಲೈಫ್ ಸಂಸ್ಥೆಯ ವಾರ್ಷಿಕೋತ್ಸವದ ಅಂಗವಾಗಿ ಉಡುಗೊರೆ ನೀಡುತ್ತಿರುವುದಾಗಿ ಹೇಳಿದ್ದರು. ಸಂಸ್ಥೆಯ ಅಧಿಕಾರಿಗಳ ಹೆಸರುಗಳನ್ನು ಉಲ್ಲೇಖಿಸಿ ಮಾತನಾಡಿದ್ದರು’ ಎಂದು ಪೊಲೀಸರು ತಿಳಿಸಿದರು.</p>.<p>‘ಉಡುಗೊರೆ ಪಡೆಯಲು ತೆರಿಗೆ ಕಟ್ಟಬೇಕು ಎಂದು ವಂಚಕರು ಹೇಳಿದ್ದರು. ಇದಕ್ಕಾಗಿ ತೆರಿಗೆ ಪತ್ರವೊಂದನ್ನು ಕಳುಹಿಸಿದ್ದರು. ಇದನ್ನು ನಂಬಿದ್ದ ಸುರೇಶ್ ಅವರಿಂದ ವಿವಿಧ ಬ್ಯಾಂಕ್ ಖಾತೆಗಳಿಗೆವಂಚಕರು ಹಣ ಹಾಕಿಸಿಕೊಂಡಿದ್ದರು. ಮೊದಲಿಗೆ ₹8 ಸಾವಿರ, ನಂತರ ₹15 ಸಾವಿರ ಸೇರಿದಂತೆ ಹಂತ ಹಂತವಾಗಿ ₹85 ಸಾವಿರ ಹಣವನ್ನು ಸುರೇಶ್ ನೀಡಿದ್ದರು’.</p>.<p>‘ವಂಚನೆಗೆ ಒಳಗಾಗಿರುವುದು ತಿಳಿದ ನಂತರ ಸುರೇಶ್ ದೂರು ನೀಡಿದರು. ವಂಚಕರು ಆದಾಯ ತೆರಿಗೆ ಇಲಾಖೆ ಹೆಸರಿನಲ್ಲಿ ಹಣ ಪಡೆದು, ವಂಚಿಸಿರುವುದಾಗಿ ತಿಳಿದುಬಂದಿದೆ. ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಕಾರು ಉಡುಗೊರೆ ನೆಪದಲ್ಲಿವ್ಯಕ್ತಿಯೊಬ್ಬರಿಗೆ ₹85 ಸಾವಿರ ವಂಚಿಸಿರುವ ಸಂಬಂಧ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.</p>.<p>‘ಕಮಲಾನಗರದ ನಿವಾಸಿ ಸುರೇಶ್ ವಂಚನೆಗೊಳಗಾದವರು. ಕಾರು ಉಡುಗೊರೆಯಾಗಿ ಬಂದಿದೆ ಎಂದು ವಂಚಕರು ಉಡುಗೊರೆ ಚೀಟಿಯೊಂದನ್ನುಸುರೇಶ್ಗೆ ಕಳಿಸಿದ್ದರು. ಈ ಬಗ್ಗೆ ಸುರೇಶ್ ವಿಚಾರಿಸಿದಾಗ ಹರ್ಬಲ್ ಲೈಫ್ ಸಂಸ್ಥೆಯ ವಾರ್ಷಿಕೋತ್ಸವದ ಅಂಗವಾಗಿ ಉಡುಗೊರೆ ನೀಡುತ್ತಿರುವುದಾಗಿ ಹೇಳಿದ್ದರು. ಸಂಸ್ಥೆಯ ಅಧಿಕಾರಿಗಳ ಹೆಸರುಗಳನ್ನು ಉಲ್ಲೇಖಿಸಿ ಮಾತನಾಡಿದ್ದರು’ ಎಂದು ಪೊಲೀಸರು ತಿಳಿಸಿದರು.</p>.<p>‘ಉಡುಗೊರೆ ಪಡೆಯಲು ತೆರಿಗೆ ಕಟ್ಟಬೇಕು ಎಂದು ವಂಚಕರು ಹೇಳಿದ್ದರು. ಇದಕ್ಕಾಗಿ ತೆರಿಗೆ ಪತ್ರವೊಂದನ್ನು ಕಳುಹಿಸಿದ್ದರು. ಇದನ್ನು ನಂಬಿದ್ದ ಸುರೇಶ್ ಅವರಿಂದ ವಿವಿಧ ಬ್ಯಾಂಕ್ ಖಾತೆಗಳಿಗೆವಂಚಕರು ಹಣ ಹಾಕಿಸಿಕೊಂಡಿದ್ದರು. ಮೊದಲಿಗೆ ₹8 ಸಾವಿರ, ನಂತರ ₹15 ಸಾವಿರ ಸೇರಿದಂತೆ ಹಂತ ಹಂತವಾಗಿ ₹85 ಸಾವಿರ ಹಣವನ್ನು ಸುರೇಶ್ ನೀಡಿದ್ದರು’.</p>.<p>‘ವಂಚನೆಗೆ ಒಳಗಾಗಿರುವುದು ತಿಳಿದ ನಂತರ ಸುರೇಶ್ ದೂರು ನೀಡಿದರು. ವಂಚಕರು ಆದಾಯ ತೆರಿಗೆ ಇಲಾಖೆ ಹೆಸರಿನಲ್ಲಿ ಹಣ ಪಡೆದು, ವಂಚಿಸಿರುವುದಾಗಿ ತಿಳಿದುಬಂದಿದೆ. ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>