ಎಸ್.ಎಂ.ಕೃಷ್ಣ ಬರೆದ ಪತ್ರಕ್ಕೆ ಪ್ರತಿಕ್ರಿಯಿಸಿ, ‘ಸೂಟು ಬೂಟು ಹಾಕಿಕೊಂಡರೆ ಬ್ರ್ಯಾಂಡ್ ಬೆಂಗಳೂರು ಆಗಲ್ಲ. ಕೆಲಸ ಮಾಡಿದಾಗ ಆಗುತ್ತದೆ. ಕೆರೆ ಕಟ್ಟೆ ಉಳಿಸಲು ಲಕ್ಷಣ್ ರಾವ್ ನೇತೃತ್ವದ ಸಮಿತಿಯನ್ನು ದೇವೇಗೌಡರು ರಚಿಸಿದರು. ಸಮಿತಿ ವರದಿ ಕಸದ ಬುಟ್ಟಿ ಸೇರಿತು. ಕೆರೆ ಮುಚ್ಚಿ ಮನೆ ಕಟ್ಟಿದರು. ಕೆರೆಗೆ ಹೋಗುವ ನೀರು ಮನೆಗಳಿಗೆ ನುಗ್ಗುತ್ತಿದೆ’ ಎಂದರು.