ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು 20 ವರ್ಷಗಳ ಕಾಲ ಶ್ರಮಿಸಿ ಈ ಜೀವವೈವಿಧ್ಯ ತಾಣವನ್ನು ನಿರ್ಮಿಸಿದ್ದಾರೆ. ಹಿಂದೆ ಕುಲಪತಿಗಳಾಗಿದ್ದ ಡಾ.ಕೆ. ಸಿದ್ದಪ್ಪ ಅವರು, ‘ಇದು ಒಂದು ಬಯಲು ಪ್ರಯೋಗಾಲಯವಾಗಲಿದೆ’ ಎಂದು ನಿರೀಕ್ಷಿಸಿ ಉದ್ಯಾನಕ್ಕೆ ಚಾಲನೆ ನೀಡಿದ್ದರು. ಅದರಂತೆ, ಜೀವವಿಜ್ಞಾನ, ಪ್ರಾಣಿವಿಜ್ಞಾನ, ಪರಿಸರ ವಿಜ್ಞಾನ ಸೇರಿದಂತೆ ಹಲವು ವಿಭಾಗಗಳಿಗೆ ಅದು ಬಯಲು ಪ್ರಯೋಗಾಲಯವಾಗಿದೆ. ಈ ಜಮೀನನ್ನು ಬೇರೆ ಸಂಸ್ಥೆಗಳಿಗೆ ನೀಡುತ್ತಿರುವುದು ಖಂಡನೀಯ. ಸರ್ಕಾರದ ನಿರ್ಧಾರ, ‘ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ’ ಎಂಬಂತಾಗಿದೆ ಎಂದು ಟೀಕಿಸಿದ್ದಾರೆ.