<p>ಬೆಂಗಳೂರು: ‘ಮಹಾತ್ಮ ಗಾಂಧೀಜಿ ಅವರ ಊರುಗೋಲನ್ನು ದೊಣ್ಣೆಯಂತೆ ಚಿತ್ರಿಸಿ, ಅವರಿಗೆ ಅಪಮಾನ ಮಾಡುವ ರೀತಿ ಜಾಹೀರಾತು ಪ್ರಸಾರ ಮಾಡಿದ ಭಾರತೀಯ ಜನತಾ ಪಕ್ಷದ ಧೋರಣೆ ಗಾಸಿಯುಂಟುಮಾಡಿದೆ’ ಎಂದು ಸ್ವಾಮೀಜಿಗಳು ಹಾಗೂ ಚಿಂತಕರು ಹೇಳಿದ್ದಾರೆ.</p>.<p>ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಗುರುಬಸವ ಸ್ವಾಮೀಜಿ, ವೂಡೇ ಪಿ. ಕೃಷ್ಣ, ಜಿ.ಎಸ್. ಜಯದೇವ, ನಾಗೇಶ್ ಹೆಗಡೆ, ಎನ್.ಆರ್. ವಿಶುಕುಮಾರ್, ಶಿವನಕರೆ ಬಸವಲಿಂಗಪ್ಪ, ಜೆ.ಬಿ. ಶಿವರಾಜ್, ವಿ. ಗಾಯತ್ರಿ ಹಾಗೂ ಶಾರದಾ ಗೋಪಾಲ್ ಜಂಟಿ ಹೇಳಿಕೆ ನೀಡಿದ್ದಾರೆ.</p>.<p>‘ಮಹಾತ್ಮನ ಜೀವನಪಾಠಗಳನ್ನು, ತತ್ವಾದರ್ಶಗಳನ್ನು ಮೂಲೆಗೆ ತಳ್ಳುತ್ತ ಹೋದ ಬಿಜೆಪಿಗರ ನಡೆ ಈಗ ‘ಜಿ ರಾಮ್ ಜಿ’ವರೆಗೆ ಬಂದಿದೆ. ‘ನುಂಗಪ್ಪ’ರನ್ನು ಲೇವಡಿ ಮಾಡುವ ಭರದಲ್ಲಿ ಗಾಂಧೀಜಿ ಅವರ ಕೈಗೆ ದೊಣ್ಣೆ ಹಿಡಿಸಿ, ಅವರನ್ನೇ ಲೇವಡಿ ಮಾಡಿದ್ದು ಅಕ್ಷಮ್ಯ. ಬೌದ್ಧಿಕ ದಿವಾಳಿತನ ಬಿಂಬಿಸುವ ಈ ಜಾಹೀರಾತಿನಲ್ಲಿ ಲಾಠಿಯೇ ಬಂಡವಾಳ ಎಂಬ ಸಂದೇಶವಷ್ಟೇ ಎಲ್ಲರಿಗೂ ಕಾಣುವಂತಿದೆ. ಅಹಿಂಸಾಮೂರ್ತಿಯ ಬಿಂಬವನ್ನು ಹೀಗೆ ತಿರುಚಿದ್ದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ‘ಮಹಾತ್ಮ ಗಾಂಧೀಜಿ ಅವರ ಊರುಗೋಲನ್ನು ದೊಣ್ಣೆಯಂತೆ ಚಿತ್ರಿಸಿ, ಅವರಿಗೆ ಅಪಮಾನ ಮಾಡುವ ರೀತಿ ಜಾಹೀರಾತು ಪ್ರಸಾರ ಮಾಡಿದ ಭಾರತೀಯ ಜನತಾ ಪಕ್ಷದ ಧೋರಣೆ ಗಾಸಿಯುಂಟುಮಾಡಿದೆ’ ಎಂದು ಸ್ವಾಮೀಜಿಗಳು ಹಾಗೂ ಚಿಂತಕರು ಹೇಳಿದ್ದಾರೆ.</p>.<p>ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಗುರುಬಸವ ಸ್ವಾಮೀಜಿ, ವೂಡೇ ಪಿ. ಕೃಷ್ಣ, ಜಿ.ಎಸ್. ಜಯದೇವ, ನಾಗೇಶ್ ಹೆಗಡೆ, ಎನ್.ಆರ್. ವಿಶುಕುಮಾರ್, ಶಿವನಕರೆ ಬಸವಲಿಂಗಪ್ಪ, ಜೆ.ಬಿ. ಶಿವರಾಜ್, ವಿ. ಗಾಯತ್ರಿ ಹಾಗೂ ಶಾರದಾ ಗೋಪಾಲ್ ಜಂಟಿ ಹೇಳಿಕೆ ನೀಡಿದ್ದಾರೆ.</p>.<p>‘ಮಹಾತ್ಮನ ಜೀವನಪಾಠಗಳನ್ನು, ತತ್ವಾದರ್ಶಗಳನ್ನು ಮೂಲೆಗೆ ತಳ್ಳುತ್ತ ಹೋದ ಬಿಜೆಪಿಗರ ನಡೆ ಈಗ ‘ಜಿ ರಾಮ್ ಜಿ’ವರೆಗೆ ಬಂದಿದೆ. ‘ನುಂಗಪ್ಪ’ರನ್ನು ಲೇವಡಿ ಮಾಡುವ ಭರದಲ್ಲಿ ಗಾಂಧೀಜಿ ಅವರ ಕೈಗೆ ದೊಣ್ಣೆ ಹಿಡಿಸಿ, ಅವರನ್ನೇ ಲೇವಡಿ ಮಾಡಿದ್ದು ಅಕ್ಷಮ್ಯ. ಬೌದ್ಧಿಕ ದಿವಾಳಿತನ ಬಿಂಬಿಸುವ ಈ ಜಾಹೀರಾತಿನಲ್ಲಿ ಲಾಠಿಯೇ ಬಂಡವಾಳ ಎಂಬ ಸಂದೇಶವಷ್ಟೇ ಎಲ್ಲರಿಗೂ ಕಾಣುವಂತಿದೆ. ಅಹಿಂಸಾಮೂರ್ತಿಯ ಬಿಂಬವನ್ನು ಹೀಗೆ ತಿರುಚಿದ್ದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>