ಬೆಂಗಳೂರು: ಅರಮನೆ ಮೈದಾನದಲ್ಲಿ ಶನಿವಾರ ಬಿಜೆಪಿ ಆಯೋಜಿಸಿದ್ದ ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶ ಆರಂಭಕ್ಕೂ ಮುನ್ನ ಮಳೆ ಸುರಿಯಿತು. ಇದು ಮೋದಿ ಕಾಲ್ಗುಣ ಎಂದು ಬಿಜೆಪಿ ಬಣ್ಣಿಸಿದೆ.
ಕಾಂಗ್ರೆಸ್ನ 'ಐರನ್ ಲೆಗ್ ' ನಿಂದಾಗಿ ಮಳೆ ಕೈಕೊಟ್ಟಿತ್ತು. ಬರಗಾಲ ಬಂದಿತ್ತು. ಮೋದಿ ಬರುತ್ತಿದ್ದಂತೆ ಮಳೆ ಬಂದಿದೆ ಎಂದು ನಿರೂಪಕರು ವಿಶ್ಲೇಷಣೆ ಮಾಡಿದರು.
ಮಳೆ ಐದು ನಿಮಿಷ ಬಂದು ಕಣ್ಮರೆಯಾಯಿತು.