ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತು ಕೇಳದಿದ್ದರೆ ಚುನಾವಣೆ ಎದುರಿಸಿ: ವರಿಷ್ಠರ ಎಚ್ಚರಿಕೆ

Last Updated 25 ಆಗಸ್ಟ್ 2019, 19:42 IST
ಅಕ್ಷರ ಗಾತ್ರ

ನವದೆಹಲಿ:‘ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಸೂಚನೆಗಳನ್ನು ಪಾಲಿಸದೇ ಇದ್ದರೆ, ವಿಧಾನಸಭೆ ವಿಸರ್ಜಿಸುತ್ತೇವೆ, ಚುನಾವಣೆಗೆ ಸಿದ್ಧರಾಗಿ’ ಎಂದು ಕೆಲವು ಸಚಿವರಿಗೆ ಬಿಜೆಪಿ ವರಿಷ್ಠರು ಎಚ್ಚರಿಕೆ ನೀಡಿದ್ದಾರೆ.

ಗೋವಿಂದ ಕಾರಜೋಳ, ಸಿ.ಎನ್‌.ಅಶ್ವತ್ಥನಾರಾಯಣ ಮತ್ತು ಲಕ್ಷ್ಮಣ ಸವದಿ ಅವರಿಗೆ ಮುಂಬಡ್ತಿ ನೀಡಿದ ಬಗ್ಗೆ ಜಗದೀಶ ಶೆಟ್ಟರ್‌, ಆರ್‌.ಅಶೋಕ ಅವರು ಯಡಿಯೂರಪ್ಪ ಬಳಿ ಅಸಮಾಧಾನ ತೋಡಿಕೊಂಡಿದ್ದರು. ಯಡಿಯೂರಪ್ಪ ಅವರು ಇದನ್ನು ವರಿಷ್ಠರಿಗೆ ತಿಳಿಸಿದರು.

‘ವರಿಷ್ಠರು ಅದನ್ನು ಒಪ್ಪಲಿಲ್ಲ. ಕೊಟ್ಟ ಖಾತೆಯನ್ನು ವಹಿಸಿಕೊಂಡು ಕೆಲಸ ಮಾಡಬೇಕು. ಒತ್ತಡ ತಂತ್ರ ಅನುಸರಿಸಿದರೆ, ಅದನ್ನು ಒಪ್ಪುವುದಿಲ್ಲ. ಚುನಾವಣೆಗೆ ಹೋಗಬೇಕಾಗುತ್ತದೆ ಎಂಬುದನ್ನು ಅವರಿಗೆ ತಿಳಿಸಿ ಎಂಬ ಸಂದೇಶ ನೀಡಿದರು’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT