<p><strong>ಬೆಂಗಳೂರು:</strong> ಹವಾಮಾನ ಪ್ರತಿರೋಧಕ ‘ಬ್ಲೂ-ಗ್ರೀನ್’ ವಾರ್ಡ್ಗಳ ನಿರ್ಮಾಣಕ್ಕೆ ಎಲ್ಲ ಇಲಾಖೆಗಳ ಸಹಕಾರ ಅಗತ್ಯ ಎಂದು ಬಿಬಿಎಂಪಿ ವಿಶೇಷ ಆಯುಕ್ತೆ ಪ್ರೀತಿ ಗೆಹಲೋತ್ ತಿಳಿಸಿದರು.</p>.<p>ಬಿಬಿಎಂಪಿ ಹಾಗೂ ವರ್ಲ್ಡ್ ರಿಸೋರ್ಸಸ್ ಇನ್ಸ್ಟಿಟ್ಯೂಟ್ ಇಂಡಿಯಾ ಗುರುವಾರ ಆಯೋಜಿಸಿದ್ದ ‘ಬ್ಲೂ-ಗ್ರೀನ್ ವಾರ್ಡ್ಗಳ ನಿರ್ಮಾಣದತ್ತ ಕ್ಲಸ್ಟರ್ ಆಧಾರಿತ ದೃಷ್ಟಿಕೋನ’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.</p>.<p>‘ಪ್ರಾರಂಭದಲ್ಲಿ ಹತ್ತು ಕ್ಲಸ್ಟರ್ಗಳನ್ನು ಆಯ್ಕೆ ಮಾಡಿ ಅವುಗಳನ್ನು ಮಾದರಿ ಕ್ಲಸ್ಟರ್ಗಳಾಗಿ ರೂಪಿಸಲಾಗುವುದು. ಅವುಗಳ ಮೂಲಕ ಪರಿಸರ ಸ್ನೇಹಿ ವಾರ್ಡ್ಗಳನ್ನು ಪರಿಣಾಮಕಾರಿಯಾಗಿ ನಿರ್ಮಿಸಲಾಗುವುದು’ ಎಂದು ಮಾಹಿತಿ ನೀಡಿದರು.</p>.<p>ಹವಾಮಾನ ಸ್ನೇಹಿ ರಸ್ತೆಯ ವಿನ್ಯಾಸ, ಅನುಕೂಲಕರ ಪಾದಚಾರಿ ಮಾರ್ಗ ಒಳಗೊಂಡ ಸುರಕ್ಷಿತ ಮತ್ತು ವಾಸಯೋಗ್ಯ ನಗರವನ್ನು ನಿರ್ಮಿಸುವ ಬಗ್ಗೆ ಕಾರ್ಯಾಗಾರದಲ್ಲಿ ಚರ್ಚೆ ನಡೆಯಿತು. </p>.<p>ಜಮೀನು ಹಸ್ತಾಂತರದ ವಿಳಂಬ, ಆರ್ಥಿಕ ಸಂಪನ್ಮೂಲಗಳ ಕೊರತೆ, ಯೋಜನೆ ಗುರುತಿಸುವಿಕೆ, ಹಣಕಾಸು ಮಾದರಿಗಳು ಮತ್ತು ದೀರ್ಘಕಾಲಿಕ ನಿರ್ವಹಣೆ ಕುರಿತು ಸಭೆಯಲ್ಲಿದ್ದವರು ಗಮನ ಸೆಳೆದರು. </p>.<p>ವಿವಿಧ ಇಲಾಖೆಗಳ ಕಾರ್ಯಪಾಲಕ ಎಂಜಿನಿಯರ್ಗಳು, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ತಜ್ಞರು ಹಾಗೂ ಬಿಬಿಎಂಪಿ ಅಧಿಕಾರಿಗಳು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಹವಾಮಾನ ಪ್ರತಿರೋಧಕ ‘ಬ್ಲೂ-ಗ್ರೀನ್’ ವಾರ್ಡ್ಗಳ ನಿರ್ಮಾಣಕ್ಕೆ ಎಲ್ಲ ಇಲಾಖೆಗಳ ಸಹಕಾರ ಅಗತ್ಯ ಎಂದು ಬಿಬಿಎಂಪಿ ವಿಶೇಷ ಆಯುಕ್ತೆ ಪ್ರೀತಿ ಗೆಹಲೋತ್ ತಿಳಿಸಿದರು.</p>.<p>ಬಿಬಿಎಂಪಿ ಹಾಗೂ ವರ್ಲ್ಡ್ ರಿಸೋರ್ಸಸ್ ಇನ್ಸ್ಟಿಟ್ಯೂಟ್ ಇಂಡಿಯಾ ಗುರುವಾರ ಆಯೋಜಿಸಿದ್ದ ‘ಬ್ಲೂ-ಗ್ರೀನ್ ವಾರ್ಡ್ಗಳ ನಿರ್ಮಾಣದತ್ತ ಕ್ಲಸ್ಟರ್ ಆಧಾರಿತ ದೃಷ್ಟಿಕೋನ’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.</p>.<p>‘ಪ್ರಾರಂಭದಲ್ಲಿ ಹತ್ತು ಕ್ಲಸ್ಟರ್ಗಳನ್ನು ಆಯ್ಕೆ ಮಾಡಿ ಅವುಗಳನ್ನು ಮಾದರಿ ಕ್ಲಸ್ಟರ್ಗಳಾಗಿ ರೂಪಿಸಲಾಗುವುದು. ಅವುಗಳ ಮೂಲಕ ಪರಿಸರ ಸ್ನೇಹಿ ವಾರ್ಡ್ಗಳನ್ನು ಪರಿಣಾಮಕಾರಿಯಾಗಿ ನಿರ್ಮಿಸಲಾಗುವುದು’ ಎಂದು ಮಾಹಿತಿ ನೀಡಿದರು.</p>.<p>ಹವಾಮಾನ ಸ್ನೇಹಿ ರಸ್ತೆಯ ವಿನ್ಯಾಸ, ಅನುಕೂಲಕರ ಪಾದಚಾರಿ ಮಾರ್ಗ ಒಳಗೊಂಡ ಸುರಕ್ಷಿತ ಮತ್ತು ವಾಸಯೋಗ್ಯ ನಗರವನ್ನು ನಿರ್ಮಿಸುವ ಬಗ್ಗೆ ಕಾರ್ಯಾಗಾರದಲ್ಲಿ ಚರ್ಚೆ ನಡೆಯಿತು. </p>.<p>ಜಮೀನು ಹಸ್ತಾಂತರದ ವಿಳಂಬ, ಆರ್ಥಿಕ ಸಂಪನ್ಮೂಲಗಳ ಕೊರತೆ, ಯೋಜನೆ ಗುರುತಿಸುವಿಕೆ, ಹಣಕಾಸು ಮಾದರಿಗಳು ಮತ್ತು ದೀರ್ಘಕಾಲಿಕ ನಿರ್ವಹಣೆ ಕುರಿತು ಸಭೆಯಲ್ಲಿದ್ದವರು ಗಮನ ಸೆಳೆದರು. </p>.<p>ವಿವಿಧ ಇಲಾಖೆಗಳ ಕಾರ್ಯಪಾಲಕ ಎಂಜಿನಿಯರ್ಗಳು, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ತಜ್ಞರು ಹಾಗೂ ಬಿಬಿಎಂಪಿ ಅಧಿಕಾರಿಗಳು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>