<p><strong>ಬೆಂಗಳೂರು: ’</strong>ದೊಡ್ಡ ಪದವಿ, ಪ್ರಶಸ್ತಿಗಳಿಂದ ನಾವು ವಿದ್ವಾಂಸರಾಗುವುದಿಲ್ಲ. ಅಧ್ಯಯನಶೀಲತೆ, ಬರವಣಿಗೆಯಲ್ಲಿನ ಶಕ್ತಿ, ಸತ್ವದಿಂದ ವಿದ್ವತ್ತು ಪಡೆಯುತ್ತೇವೆ’ ಎಂದು ಸಾಹಿತಿ ಹಂ.ಪ. ನಾಗರಾಜಯ್ಯ ಅಭಿಪ್ರಾಯಪಟ್ಟರು.</p>.<p>ಬಿಎಂಶ್ರೀ ಪ್ರತಿಷ್ಠಾನ ಆಯೋಜಿಸಿದ್ದ ಸಮಾರಂಭದಲ್ಲಿ ಕವಿ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಅವರಿಗೆ ‘ಶ್ರೀ ಸಾಹಿತ್ಯ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದ ಅವರು, ‘ಸತ್ವಯುತ, ವಿದ್ವತ್ಪೂರ್ಣ ಬರವಣಿಗೆ ಸಿದ್ದಲಿಂಗಯ್ಯ ಅವರಲ್ಲಿದೆ. ಬೌದ್ಧಿಕವಾಗಿ ಶ್ರೀಮಂತರಾಗಿರುವ ಅವರು ಮತ್ತೆ ಬರವಣಿಗೆ ಆರಂಭಿಸಬೇಕು’ ಎಂದು ಸಲಹೆ ನೀಡಿದರು.</p>.<p>‘ಇತ್ತೀಚಿನ ದಿನಗಳಲ್ಲಿ ಹಳಗನ್ನಡ ಸಾಹಿತ್ಯ ಕಡಿಮೆಯಾಗುತ್ತಿದೆ. ನಮ್ಮ ಸಾಹಿತ್ಯದ ಗುರುಪರಂಪರೆಯನ್ನು ಅಧ್ಯಯನ ಮಾಡಿ, ಹೊಸ ಬಗೆಯ ಸಾಹಿತ್ಯ ರಚನೆ ಮಾಡಬೇಕು’ ಎಂದರು.</p>.<p>ಕವಿ ಜಿ.ಎಸ್.ಸಿದ್ದಲಿಂಗಯ್ಯ, ‘ಸಾಹಿತಿಗಳು ಬೆಳೆಸುವ ಕಾಲ, ಬೆಳೆಯುವ ಕಾಲವೊಂದಿತ್ತು. ಅದು ಈಗ ಮರೆಯಾಗಿದೆ. ಪ್ರತಿಯೊಬ್ಬರೂ ತಮ್ಮನ್ನು ತಾವೇ ದೊಡ್ಡವರೆಂದುಕೊಂಡು ಬೀಗುತ್ತಿದ್ದಾರೆ. ಬಿಎಂಶ್ರೀ ಅವರ ವ್ಯಕ್ತಿತ್ವ ಅಗಾಧವಾಗಿತ್ತು. ಅವರು ಕುವೆಂಪುರಂತಹ ಶ್ರೇಷ್ಠ ಸಾಹಿತಿ ಕನ್ನಡಕ್ಕೆ ದೊರೆಯುವಂತೆ ಮಾಡಿದರು’ ಎಂದರು.</p>.<p>ಸಿದ್ದಲಿಂಗಯ್ಯನವರ ಪತ್ನಿ ಎಸ್.ಕೆ.ಪ್ರೇಮಾ, ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ. ಆರ್.ಲಕ್ಷ್ಮಿನಾರಾಯಣ, ಗೌರವ ಅಧ್ಯಕ್ಷ ಎಂ.ಎಚ್.ಕೃಷ್ಣಯ್ಯ, ನಿಕಟಪೂರ್ವ ಅಧ್ಯಕ್ಷ ಪಿ.ವಿ.ಲಕ್ಷ್ಮಿನಾರಾಯಣ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: ’</strong>ದೊಡ್ಡ ಪದವಿ, ಪ್ರಶಸ್ತಿಗಳಿಂದ ನಾವು ವಿದ್ವಾಂಸರಾಗುವುದಿಲ್ಲ. ಅಧ್ಯಯನಶೀಲತೆ, ಬರವಣಿಗೆಯಲ್ಲಿನ ಶಕ್ತಿ, ಸತ್ವದಿಂದ ವಿದ್ವತ್ತು ಪಡೆಯುತ್ತೇವೆ’ ಎಂದು ಸಾಹಿತಿ ಹಂ.ಪ. ನಾಗರಾಜಯ್ಯ ಅಭಿಪ್ರಾಯಪಟ್ಟರು.</p>.<p>ಬಿಎಂಶ್ರೀ ಪ್ರತಿಷ್ಠಾನ ಆಯೋಜಿಸಿದ್ದ ಸಮಾರಂಭದಲ್ಲಿ ಕವಿ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಅವರಿಗೆ ‘ಶ್ರೀ ಸಾಹಿತ್ಯ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದ ಅವರು, ‘ಸತ್ವಯುತ, ವಿದ್ವತ್ಪೂರ್ಣ ಬರವಣಿಗೆ ಸಿದ್ದಲಿಂಗಯ್ಯ ಅವರಲ್ಲಿದೆ. ಬೌದ್ಧಿಕವಾಗಿ ಶ್ರೀಮಂತರಾಗಿರುವ ಅವರು ಮತ್ತೆ ಬರವಣಿಗೆ ಆರಂಭಿಸಬೇಕು’ ಎಂದು ಸಲಹೆ ನೀಡಿದರು.</p>.<p>‘ಇತ್ತೀಚಿನ ದಿನಗಳಲ್ಲಿ ಹಳಗನ್ನಡ ಸಾಹಿತ್ಯ ಕಡಿಮೆಯಾಗುತ್ತಿದೆ. ನಮ್ಮ ಸಾಹಿತ್ಯದ ಗುರುಪರಂಪರೆಯನ್ನು ಅಧ್ಯಯನ ಮಾಡಿ, ಹೊಸ ಬಗೆಯ ಸಾಹಿತ್ಯ ರಚನೆ ಮಾಡಬೇಕು’ ಎಂದರು.</p>.<p>ಕವಿ ಜಿ.ಎಸ್.ಸಿದ್ದಲಿಂಗಯ್ಯ, ‘ಸಾಹಿತಿಗಳು ಬೆಳೆಸುವ ಕಾಲ, ಬೆಳೆಯುವ ಕಾಲವೊಂದಿತ್ತು. ಅದು ಈಗ ಮರೆಯಾಗಿದೆ. ಪ್ರತಿಯೊಬ್ಬರೂ ತಮ್ಮನ್ನು ತಾವೇ ದೊಡ್ಡವರೆಂದುಕೊಂಡು ಬೀಗುತ್ತಿದ್ದಾರೆ. ಬಿಎಂಶ್ರೀ ಅವರ ವ್ಯಕ್ತಿತ್ವ ಅಗಾಧವಾಗಿತ್ತು. ಅವರು ಕುವೆಂಪುರಂತಹ ಶ್ರೇಷ್ಠ ಸಾಹಿತಿ ಕನ್ನಡಕ್ಕೆ ದೊರೆಯುವಂತೆ ಮಾಡಿದರು’ ಎಂದರು.</p>.<p>ಸಿದ್ದಲಿಂಗಯ್ಯನವರ ಪತ್ನಿ ಎಸ್.ಕೆ.ಪ್ರೇಮಾ, ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ. ಆರ್.ಲಕ್ಷ್ಮಿನಾರಾಯಣ, ಗೌರವ ಅಧ್ಯಕ್ಷ ಎಂ.ಎಚ್.ಕೃಷ್ಣಯ್ಯ, ನಿಕಟಪೂರ್ವ ಅಧ್ಯಕ್ಷ ಪಿ.ವಿ.ಲಕ್ಷ್ಮಿನಾರಾಯಣ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>