‘ದಕ್ಷಿಣ ಕನ್ನಡ, ಉತ್ತರ ಕನ್ನಡದಿಂದ ದುಡಿಮೆಗಾಗಿಇಲ್ಲಿಗೆ ವಲಸೆ ಬಂದವರು ಕಲೆಯನ್ನು ಕೂಡ ಬೆಳೆಸುತ್ತಿದ್ದಾರೆ. ಯಕ್ಷಗಾನ ಮತ್ತು ದಾಸ ಸಾಹಿತ್ಯದ ನಡುವೆ ಅವಿನಾಭಾವವಾದ ಸಂಬಂಧವಿದೆ. ಎಂಟು ಸಾಲಿನ ದಾಸರ ಹಾಡುಗಳಿಗೆ ರಾಗ-ತಾಳ, ವೇಷ ಭೂಷಣ ಹಾಕಿದರೆ ವೇದಿಕೆಯ ಮೇಲೆ ಯಕ್ಷಗಾನ ಅರಳಿಕೊಳ್ಳಲಿದೆ. ಆಧುನಿಕತೆಯ ಹೆಸರಿನಲ್ಲಿ ಎಲ್ಲವನ್ನೂ ಕಳೆದುಕೊಳ್ಳುತ್ತಿರುವಾಗ ಯಕ್ಷಗಾನವು ಇಲ್ಲಿನ ಜನತೆಯನ್ನು ಹೇಗೆ ಕುಣಿಸಿತು ಎನ್ನುವ ಸಂಗತಿಯನ್ನು ಪುಸ್ತಕ ರೂಪದಲ್ಲಿ ದಾಖಲಿಸಿರುವುದು ಶ್ಲಾಘನೀಯ’ ಎಂದರು.