<p><strong>ಬೆಂಗಳೂರು</strong>: ‘ಉದ್ಯೋಗವನ್ನರಸಿ ಇಲ್ಲಿಗೆ ಬಂದವರು ತಮ್ಮ ಕಲೆ ಮತ್ತು ಸಂಸ್ಕೃತಿಯನ್ನೂ ವಿಸ್ತರಿಸಿದರು. ಇದರಿಂದಾಗಿ ಯಕ್ಷಗಾನ ಕಲೆಯು ಈಗ ಬೆಂಗಳೂರಿನ ಬಡಾವಣೆಗಳಿಗೆ ಹರಡಿಕೊಳ್ಳುತ್ತಿದೆ’ ಎಂದು ಹರಿದಾಸ ವಿದ್ವಾಂಸ ಅರಳುಮಲ್ಲಿಗೆ ಪಾರ್ಥಸಾರಥಿ ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ಸಾಹಿತ್ಯ ವಿಚಾರ ವೇದಿಕೆ ಆನ್ಲೈನ್ ವೇದಿಕೆಯಲ್ಲಿ ಭಾನುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಲೇಖಕ ಆನಂದರಾಮ ಉಪಾಧ್ಯ ಅವರ ‘ಯಕ್ಷಪಥ’ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.</p>.<p>‘ದಕ್ಷಿಣ ಕನ್ನಡ, ಉತ್ತರ ಕನ್ನಡದಿಂದ ದುಡಿಮೆಗಾಗಿಇಲ್ಲಿಗೆ ವಲಸೆ ಬಂದವರು ಕಲೆಯನ್ನು ಕೂಡ ಬೆಳೆಸುತ್ತಿದ್ದಾರೆ. ಯಕ್ಷಗಾನ ಮತ್ತು ದಾಸ ಸಾಹಿತ್ಯದ ನಡುವೆ ಅವಿನಾಭಾವವಾದ ಸಂಬಂಧವಿದೆ. ಎಂಟು ಸಾಲಿನ ದಾಸರ ಹಾಡುಗಳಿಗೆ ರಾಗ-ತಾಳ, ವೇಷ ಭೂಷಣ ಹಾಕಿದರೆ ವೇದಿಕೆಯ ಮೇಲೆ ಯಕ್ಷಗಾನ ಅರಳಿಕೊಳ್ಳಲಿದೆ. ಆಧುನಿಕತೆಯ ಹೆಸರಿನಲ್ಲಿ ಎಲ್ಲವನ್ನೂ ಕಳೆದುಕೊಳ್ಳುತ್ತಿರುವಾಗ ಯಕ್ಷಗಾನವು ಇಲ್ಲಿನ ಜನತೆಯನ್ನು ಹೇಗೆ ಕುಣಿಸಿತು ಎನ್ನುವ ಸಂಗತಿಯನ್ನು ಪುಸ್ತಕ ರೂಪದಲ್ಲಿ ದಾಖಲಿಸಿರುವುದು ಶ್ಲಾಘನೀಯ’ ಎಂದರು.</p>.<p>ಬರಹಗಾರ ರವಿ ಮಡೋಡಿ, ‘ಸಾಮಾನ್ಯವಾಗಿ ಯಕ್ಷಗಾನ ಅಂದೊಡೆನೆ ಕರಾವಳಿ ಮತ್ತು ಮಲೆನಾಡಿನ ಸಾಂಸ್ಕೃತಿಕ ವೈಭವ ಕಣ್ಣಮುಂದೆ ಬರುತ್ತದೆ. ಯಕ್ಷಗಾನದ ಪ್ರಭೇದಗುಳು ರಾಜ್ಯದ ವಿವಿಧೆಡೆ ಬೇರು ಮೂಡಿಸಿವೆ. ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದವರು ಕೂಡ ಈ ಕಲೆಯನ್ನು ಕಲಿತು, ಪ್ರದರ್ಶನ ನೀಡುತ್ತಿದ್ದಾರೆ. ಪ್ರತಿವರ್ಷ ರಾಜ್ಯದಲ್ಲಿ ನಡೆಯುವ ಯಕ್ಷಗಾನ ಪ್ರದರ್ಶನಗಳಲ್ಲಿ ಶೇ 10ರಷ್ಟು ಪ್ರದರ್ಶನಗಳು ರಾಜಧಾನಿಯಲ್ಲಿಯೇ ನಡೆಯುತ್ತಿವೆ. ಅದರಲ್ಲೂ ಮಳೆಗಾಲದಲ್ಲಿ ರವೀಂದ್ರಕಲಾಕ್ಷೇತ್ರವು ಈ ಕಲೆಗೆ ವೇದಿಕೆ ಕಲ್ಪಿಸುತ್ತಿದೆ’ ಎಂದು ತಿಳಿಸಿದರು.</p>.<p>ಲೇಖಕ ಆನಂದರಾಮ ಉಪಾಧ್ಯ ಮಾತನಾಡಿ, ‘ಯಕ್ಷಗಾನದ ಪ್ರಸಂಗಗಳು ಎಲ್ಲೆಡೆ ಎಲ್ಲರಿಗೂ ಸಿಗಬೇಕಾದರೆ ಡಿಜಿಟಲೀಕರಣ ಪ್ರಕ್ರಿಯೆ ನಡೆಯಬೇಕು. ಈ ಕಾರ್ಯವನ್ನು ಯಕ್ಷವಾಹಿನಿ ಪ್ರತಿಷ್ಠಾನ ಮಾಡುತ್ತಿದೆ. ಈಗಾಗಲೇ 1,600ಕ್ಕೂ ಅಧಿಕ ಯಕ್ಷಗಾನ ಪ್ರಸಂಗಗಳು ಡಿಜಿಟಲೀಕರಣಗೊಂಡಿವೆ. ಇವನ್ನು ವಿದೇಶದಲ್ಲಿ ಇರುವವರು ಕೂಡ ಓದಲು ಸಾಧ್ಯವಾಗುತ್ತಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಉದ್ಯೋಗವನ್ನರಸಿ ಇಲ್ಲಿಗೆ ಬಂದವರು ತಮ್ಮ ಕಲೆ ಮತ್ತು ಸಂಸ್ಕೃತಿಯನ್ನೂ ವಿಸ್ತರಿಸಿದರು. ಇದರಿಂದಾಗಿ ಯಕ್ಷಗಾನ ಕಲೆಯು ಈಗ ಬೆಂಗಳೂರಿನ ಬಡಾವಣೆಗಳಿಗೆ ಹರಡಿಕೊಳ್ಳುತ್ತಿದೆ’ ಎಂದು ಹರಿದಾಸ ವಿದ್ವಾಂಸ ಅರಳುಮಲ್ಲಿಗೆ ಪಾರ್ಥಸಾರಥಿ ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ಸಾಹಿತ್ಯ ವಿಚಾರ ವೇದಿಕೆ ಆನ್ಲೈನ್ ವೇದಿಕೆಯಲ್ಲಿ ಭಾನುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಲೇಖಕ ಆನಂದರಾಮ ಉಪಾಧ್ಯ ಅವರ ‘ಯಕ್ಷಪಥ’ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.</p>.<p>‘ದಕ್ಷಿಣ ಕನ್ನಡ, ಉತ್ತರ ಕನ್ನಡದಿಂದ ದುಡಿಮೆಗಾಗಿಇಲ್ಲಿಗೆ ವಲಸೆ ಬಂದವರು ಕಲೆಯನ್ನು ಕೂಡ ಬೆಳೆಸುತ್ತಿದ್ದಾರೆ. ಯಕ್ಷಗಾನ ಮತ್ತು ದಾಸ ಸಾಹಿತ್ಯದ ನಡುವೆ ಅವಿನಾಭಾವವಾದ ಸಂಬಂಧವಿದೆ. ಎಂಟು ಸಾಲಿನ ದಾಸರ ಹಾಡುಗಳಿಗೆ ರಾಗ-ತಾಳ, ವೇಷ ಭೂಷಣ ಹಾಕಿದರೆ ವೇದಿಕೆಯ ಮೇಲೆ ಯಕ್ಷಗಾನ ಅರಳಿಕೊಳ್ಳಲಿದೆ. ಆಧುನಿಕತೆಯ ಹೆಸರಿನಲ್ಲಿ ಎಲ್ಲವನ್ನೂ ಕಳೆದುಕೊಳ್ಳುತ್ತಿರುವಾಗ ಯಕ್ಷಗಾನವು ಇಲ್ಲಿನ ಜನತೆಯನ್ನು ಹೇಗೆ ಕುಣಿಸಿತು ಎನ್ನುವ ಸಂಗತಿಯನ್ನು ಪುಸ್ತಕ ರೂಪದಲ್ಲಿ ದಾಖಲಿಸಿರುವುದು ಶ್ಲಾಘನೀಯ’ ಎಂದರು.</p>.<p>ಬರಹಗಾರ ರವಿ ಮಡೋಡಿ, ‘ಸಾಮಾನ್ಯವಾಗಿ ಯಕ್ಷಗಾನ ಅಂದೊಡೆನೆ ಕರಾವಳಿ ಮತ್ತು ಮಲೆನಾಡಿನ ಸಾಂಸ್ಕೃತಿಕ ವೈಭವ ಕಣ್ಣಮುಂದೆ ಬರುತ್ತದೆ. ಯಕ್ಷಗಾನದ ಪ್ರಭೇದಗುಳು ರಾಜ್ಯದ ವಿವಿಧೆಡೆ ಬೇರು ಮೂಡಿಸಿವೆ. ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದವರು ಕೂಡ ಈ ಕಲೆಯನ್ನು ಕಲಿತು, ಪ್ರದರ್ಶನ ನೀಡುತ್ತಿದ್ದಾರೆ. ಪ್ರತಿವರ್ಷ ರಾಜ್ಯದಲ್ಲಿ ನಡೆಯುವ ಯಕ್ಷಗಾನ ಪ್ರದರ್ಶನಗಳಲ್ಲಿ ಶೇ 10ರಷ್ಟು ಪ್ರದರ್ಶನಗಳು ರಾಜಧಾನಿಯಲ್ಲಿಯೇ ನಡೆಯುತ್ತಿವೆ. ಅದರಲ್ಲೂ ಮಳೆಗಾಲದಲ್ಲಿ ರವೀಂದ್ರಕಲಾಕ್ಷೇತ್ರವು ಈ ಕಲೆಗೆ ವೇದಿಕೆ ಕಲ್ಪಿಸುತ್ತಿದೆ’ ಎಂದು ತಿಳಿಸಿದರು.</p>.<p>ಲೇಖಕ ಆನಂದರಾಮ ಉಪಾಧ್ಯ ಮಾತನಾಡಿ, ‘ಯಕ್ಷಗಾನದ ಪ್ರಸಂಗಗಳು ಎಲ್ಲೆಡೆ ಎಲ್ಲರಿಗೂ ಸಿಗಬೇಕಾದರೆ ಡಿಜಿಟಲೀಕರಣ ಪ್ರಕ್ರಿಯೆ ನಡೆಯಬೇಕು. ಈ ಕಾರ್ಯವನ್ನು ಯಕ್ಷವಾಹಿನಿ ಪ್ರತಿಷ್ಠಾನ ಮಾಡುತ್ತಿದೆ. ಈಗಾಗಲೇ 1,600ಕ್ಕೂ ಅಧಿಕ ಯಕ್ಷಗಾನ ಪ್ರಸಂಗಗಳು ಡಿಜಿಟಲೀಕರಣಗೊಂಡಿವೆ. ಇವನ್ನು ವಿದೇಶದಲ್ಲಿ ಇರುವವರು ಕೂಡ ಓದಲು ಸಾಧ್ಯವಾಗುತ್ತಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>