<p><strong>ಬೆಂಗಳೂರು</strong>: ನಗರದಲ್ಲಿರುವ ಮುಖ್ಯ, ಉಪ ಮುಖ್ಯ ರಸ್ತೆಗಳನ್ನು ಮುಂದಿನ ಮಳೆಗಾಲದ ವೇಳೆಗೆ ಪೂರ್ಣ ಸಿದ್ಧಗೊಳಿಸುವ ಉದ್ದೇಶದಿಂದ, ಎಲ್ಲ ರೀತಿಯ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ. ಇದಕ್ಕಾಗಿ, ‘ಬ್ರ್ಯಾಂಡ್ ಬೆಂಗಳೂರು’ ಅನುದಾನವನ್ನು ಕಡಿತಗೊಳಿಸಲಾಗಿದೆ.</p><p>ಮುಖ್ಯ, ಉಪ ಮುಖ್ಯ ರಸ್ತೆಗಳಲ್ಲಿ ಅತಿಹೆಚ್ಚು ಗುಂಡಿಗಳಾಗಿದ್ದು, ಐದಾರು ವರ್ಷದಿಂದ ಸುಧಾರಣಾ ಕಾಮಗಾರಿ ಕೈಗೊಂಡಿರಲಿಲ್ಲ. ಗುಂಡಿಗಳನ್ನು ದುರಸ್ತಿ ಮಾಡಿದರೂ ಮತ್ತೆ ಗುಂಡಿಗಳಾಗುತ್ತಿದ್ದವು. ಹೀಗಾಗಿ, ಮೇಲ್ಮೈ ಪದರವನ್ನು ತೆರವುಗೊಳಿಸಿ ಡಾಂಬರೀಕರಣಗೊಳಿಸಲು ಬಿಬಿಎಂಪಿ ನಿರ್ಧರಿಸಿತ್ತು.</p><p>ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡ ವಿಭಾಗವಾರು ಟೆಂಡರ್ ಪ್ಯಾಕೇಜ್ಗಳನ್ನು ಆಹ್ವಾನಿಸಲಾಗಿದ್ದು, ಆರು ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಗಡುವು ವಿಧಿಸಲಾಗಿದೆ. ಡಿಸೆಂಬರ್ 25ಕ್ಕೆ ಟೆಂಡರ್ ಅವಧಿ ಮುಕ್ತಾಯವಾಗಲಿದ್ದು, ನಂತರದ 15 ದಿನಗಳಲ್ಲಿ ಅರ್ಹ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲು ಬಿಬಿಎಂಪಿ ಉದ್ದೇಶಿಸಿದೆ.</p><p>ಬಿಬಿಎಂಪಿಯ ಮೂಲಸೌಕರ್ಯ ವಿಭಾಗದ ವತಿಯಿಂದ ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಆಯಾ ವಲಯಗಳ ವತಿಯಿಂದಲೇ ಟೆಂಡರ್ ಆಹ್ವಾನಿಸಲಾಗಿದ್ದು, ಅದರ ನಿರ್ವಹಣೆಯನ್ನು ವಲಯಗಳಿಗೇ ವಹಿಸಲಾಗಿದೆ.</p><p>‘2025ರ ಮೇ ಅಂತ್ಯಕ್ಕೆ ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳ ಅಭಿವೃದ್ಧಿ ಕಾರ್ಯ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಅಲ್ಪಸ್ವಲ್ಪ ಸಮಸ್ಯೆಯಾದರೂ ಜೂನ್ ಅಂತ್ಯಕ್ಕೆ ಎಲ್ಲ ಕಾಮಗಾರಿ ಮುಗಿಸಲೇಬೇಕೆಂಬ ಉದ್ದೇಶವಿದೆ’ ಎಂದು ಬಿಬಿಎಂಪಿ ಪ್ರಧಾನ ಎಂಜಿನಿಯರ್ ಬಿ.ಎಸ್. ಪ್ರಹ್ಲಾದ್ ತಿಳಿಸಿದರು.</p><p><strong>ನಿಧಿ ಕಡಿತ:</strong> ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳ ಅಭಿವೃದ್ಧಿ ಯೋಜನೆಗಾಗಿ ‘ಬ್ರ್ಯಾಂಡ್ ಬೆಂಗಳೂರು’ ಪರಿಕಲ್ಪನೆಗೆ ನಿಗದಿಪಡಿಸಲಾಗಿರುವ ನಿಧಿಯನ್ನು ಕಡಿತಗೊಳಿಸಲಾಗಿದೆ. ರಸ್ತೆ ಅಭಿವೃದ್ಧಿಗೆ ಒಟ್ಟು ₹47.85 ಕೋಟಿ ಅನುದಾನ ಒದಗಿಸಲಾಗಿತ್ತು. ಹೆಚ್ಚುವರಿಯಾಗಿ ₹600 ಕೋಟಿ ಅನುದಾನದ ಅಗತ್ಯವಿತ್ತು. ಅದರಲ್ಲಿ ₹300 ಕೋಟಿಯನ್ನು ಬ್ರ್ಯಾಂಡ್ ಬೆಂಗಳೂರು– ಸುಗಮ ಸಂಚಾರ ಬೆಂಗಳೂರು, ವೈಬ್ರಂಟ್ ಬೆಂಗಳೂರು, ಆರೋಗ್ಯ ಬೆಂಗಳೂರು ವಿಭಾಗದ ಅನುದಾನದಲ್ಲಿ ಒದಗಿಸಲಾಗಿದೆ. ಉಳಿದ ₹360 ಕೋಟಿಯನ್ನು 2024–25ನೇ ಸಾಲಿನ ‘ಪರಿಷ್ಕೃತ ಆಯವ್ಯಯ’ದ ಇತರೆ ಶೀರ್ಷಿಕೆಗಳಿಂದ ಉಳಿತಾಯವಾಗುವ ಅನುದಾನದಲ್ಲಿ ಭರಿಸಿಕೊಳ್ಳಲು ನಗರಾಭಿವೃದ್ಧಿ ಇಲಾಖೆ ಒಪ್ಪಿಗೆ ನೀಡಿದೆ.</p><p>‘ಸುಗಮ ಸಂಚಾರ’ಕ್ಕೆ ₹880 ಕೋಟಿ ಮೀಸಲಿರಿಸಲಾಗಿತ್ತು. ಇದರಲ್ಲಿ ಈ ಸಾಲಿನಲ್ಲಿ ₹730 ಕೋಟಿ ವೆಚ್ಚವಾಗಲಿದ್ದು, ಸುರಂಗ ರಸ್ತೆ ಯೋಜನೆಗೆ ಒದಗಿಸಿರುವ ₹200 ಕೋಟಿಯಲ್ಲಿ ₹100 ಕೋಟಿ ಹಾಗೂ ಕೆ–ರೈಡ್ ಯೋಜನೆ ಅನುದಾನದಲ್ಲಿ ₹50 ಕೋಟಿ ಸೇರಿದಂತೆ ಒಟ್ಟು ₹150 ಕೋಟಿ ಉಳಿತಾಯವಾಗಲಿದೆ. ಅದೇ ರೀತಿ, ‘ವೈಬ್ರಂಟ್ ಬೆಂಗಳೂರು’ನಲ್ಲಿ ₹265 ಕೋಟಿಯಲ್ಲಿ ₹90 ಕೋಟಿ ಉಳಿಯಲಿದೆ, ‘ಆರೋಗ್ಯ ಬೆಂಗಳೂರು’ನಲ್ಲಿ ₹215 ಕೋಟಿ ಉಳಿತಾಯ ನಿರೀಕ್ಷಿಸಿ, ಅದನ್ನು ರಸ್ತೆ ಅಭಿವೃದ್ಧಿಗೆ ವರ್ಗಾಯಿಸಲಾಗಿದೆ.</p><p>ಸುರಂಗ ರಸ್ತೆ ಅನುದಾನದಲ್ಲಿ ₹100 ಕೋಟಿ ಉಳಿತಾಯದ ನಿರೀಕ್ಷೆ ‘ಬ್ರ್ಯಾಂಡ್ ಬೆಂಗಳೂರು’ ಅನುದಾನದಿಂದ ₹300 ಕೋಟಿ ‘ಪರಿಷ್ಕೃತ ಆಯವ್ಯಯ’ದಂತೆ ಇತರೆ ಶೀರ್ಷಿಕೆಗಳಿಂದ ₹360 ಕೋಟಿ</p>.<p><strong>ಅಭಿವೃದ್ಧಿ ಮಾದರಿ ವಿನ್ಯಾಸ</strong></p><p>ಮುಖ್ಯ ಹಾಗೂ ಉಪ ಮುಖ್ಯರಸ್ತೆಗಳನ್ನು ಅಭಿವೃದ್ಧಿಪಡಿಸಲು ಒಂದು ನಿಗದಿತ ಮಾದರಿ–ವಿನ್ಯಾಸ ಹಾಗೂ ಸುಧಾರಿತ ನಿರ್ವಹಣಾ ಪದ್ಧತಿಯನ್ನು ಸಿದ್ಧಪಡಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ತಿಳಿಸಿದ್ದಾರೆ. ಅದರಂತೆ ಈ ಕಾಮಗಾರಿಗಳನ್ನು ನಡೆಸಬೇಕು ಎಂದು ನಗರಾಭಿವೃದ್ಧಿ ಇಲಾಖೆ ಸೂಚಿಸಿದೆ.</p><p>* ಹಾಳಾದ ರಸ್ತೆ ಮೇಲ್ಮೈಯನ್ನು ಮಿಲ್ಲಿಂಗ್ ಮಾಡುವುದು</p><p>* ರಸ್ತೆ ಬದಿ ಚರಂಡಿ ಇಲ್ಲದ ಪ್ರದೇಶಗಳಲ್ಲಿ ಎನ್.ಪಿ–3 ಪೈಪ್ ಅಳವಡಿಸಿ ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು. ಚರಂಡಿಯಿಂದ ಹೂಳನ್ನು ಸಂಪೂರ್ಣ ತೆರವುಗೊಳಿಸಿ ಚರಂಡಿ ಚಾವಣಿಯನ್ನು ಮರು ನಿರ್ಮಿಸುವುದು</p><p>* ರಸ್ತೆಯಿಂದ ಚರಂಡಿಗೆ ನೀರು ಸರಾಗವಾಗಿ ಹರಿಯುವಂತೆ ಮಾಡಲು ಗ್ರೇಟಿಂಗ್ ನಿರ್ಮಿಸುವುದು</p><p>* ಪಾದಚಾರಿ ಮಾರ್ಗವನ್ನು ಕಾಂಕ್ರೀಟ್ ತಳಪಾಯದೊಂದಿಗೆ ನಿರ್ಮಿಸುವುದು</p><p>* ರಸ್ತೆಬದಿ ರಸ್ತೆ ಲೈನ್ ಮತ್ತು ಪಾದಚಾರಿ ಮಾರ್ಗವನ್ನು ಗುರುತಿಸಲು ಕರ್ಬ್ ಸ್ಟೋನ್ಗಳನ್ನು ಅಳವಡಿಸಿ ಸಮತಟ್ಟು ಮಾಡುವುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ನಗರದಲ್ಲಿರುವ ಮುಖ್ಯ, ಉಪ ಮುಖ್ಯ ರಸ್ತೆಗಳನ್ನು ಮುಂದಿನ ಮಳೆಗಾಲದ ವೇಳೆಗೆ ಪೂರ್ಣ ಸಿದ್ಧಗೊಳಿಸುವ ಉದ್ದೇಶದಿಂದ, ಎಲ್ಲ ರೀತಿಯ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ. ಇದಕ್ಕಾಗಿ, ‘ಬ್ರ್ಯಾಂಡ್ ಬೆಂಗಳೂರು’ ಅನುದಾನವನ್ನು ಕಡಿತಗೊಳಿಸಲಾಗಿದೆ.</p><p>ಮುಖ್ಯ, ಉಪ ಮುಖ್ಯ ರಸ್ತೆಗಳಲ್ಲಿ ಅತಿಹೆಚ್ಚು ಗುಂಡಿಗಳಾಗಿದ್ದು, ಐದಾರು ವರ್ಷದಿಂದ ಸುಧಾರಣಾ ಕಾಮಗಾರಿ ಕೈಗೊಂಡಿರಲಿಲ್ಲ. ಗುಂಡಿಗಳನ್ನು ದುರಸ್ತಿ ಮಾಡಿದರೂ ಮತ್ತೆ ಗುಂಡಿಗಳಾಗುತ್ತಿದ್ದವು. ಹೀಗಾಗಿ, ಮೇಲ್ಮೈ ಪದರವನ್ನು ತೆರವುಗೊಳಿಸಿ ಡಾಂಬರೀಕರಣಗೊಳಿಸಲು ಬಿಬಿಎಂಪಿ ನಿರ್ಧರಿಸಿತ್ತು.</p><p>ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡ ವಿಭಾಗವಾರು ಟೆಂಡರ್ ಪ್ಯಾಕೇಜ್ಗಳನ್ನು ಆಹ್ವಾನಿಸಲಾಗಿದ್ದು, ಆರು ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಗಡುವು ವಿಧಿಸಲಾಗಿದೆ. ಡಿಸೆಂಬರ್ 25ಕ್ಕೆ ಟೆಂಡರ್ ಅವಧಿ ಮುಕ್ತಾಯವಾಗಲಿದ್ದು, ನಂತರದ 15 ದಿನಗಳಲ್ಲಿ ಅರ್ಹ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲು ಬಿಬಿಎಂಪಿ ಉದ್ದೇಶಿಸಿದೆ.</p><p>ಬಿಬಿಎಂಪಿಯ ಮೂಲಸೌಕರ್ಯ ವಿಭಾಗದ ವತಿಯಿಂದ ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಆಯಾ ವಲಯಗಳ ವತಿಯಿಂದಲೇ ಟೆಂಡರ್ ಆಹ್ವಾನಿಸಲಾಗಿದ್ದು, ಅದರ ನಿರ್ವಹಣೆಯನ್ನು ವಲಯಗಳಿಗೇ ವಹಿಸಲಾಗಿದೆ.</p><p>‘2025ರ ಮೇ ಅಂತ್ಯಕ್ಕೆ ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳ ಅಭಿವೃದ್ಧಿ ಕಾರ್ಯ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಅಲ್ಪಸ್ವಲ್ಪ ಸಮಸ್ಯೆಯಾದರೂ ಜೂನ್ ಅಂತ್ಯಕ್ಕೆ ಎಲ್ಲ ಕಾಮಗಾರಿ ಮುಗಿಸಲೇಬೇಕೆಂಬ ಉದ್ದೇಶವಿದೆ’ ಎಂದು ಬಿಬಿಎಂಪಿ ಪ್ರಧಾನ ಎಂಜಿನಿಯರ್ ಬಿ.ಎಸ್. ಪ್ರಹ್ಲಾದ್ ತಿಳಿಸಿದರು.</p><p><strong>ನಿಧಿ ಕಡಿತ:</strong> ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳ ಅಭಿವೃದ್ಧಿ ಯೋಜನೆಗಾಗಿ ‘ಬ್ರ್ಯಾಂಡ್ ಬೆಂಗಳೂರು’ ಪರಿಕಲ್ಪನೆಗೆ ನಿಗದಿಪಡಿಸಲಾಗಿರುವ ನಿಧಿಯನ್ನು ಕಡಿತಗೊಳಿಸಲಾಗಿದೆ. ರಸ್ತೆ ಅಭಿವೃದ್ಧಿಗೆ ಒಟ್ಟು ₹47.85 ಕೋಟಿ ಅನುದಾನ ಒದಗಿಸಲಾಗಿತ್ತು. ಹೆಚ್ಚುವರಿಯಾಗಿ ₹600 ಕೋಟಿ ಅನುದಾನದ ಅಗತ್ಯವಿತ್ತು. ಅದರಲ್ಲಿ ₹300 ಕೋಟಿಯನ್ನು ಬ್ರ್ಯಾಂಡ್ ಬೆಂಗಳೂರು– ಸುಗಮ ಸಂಚಾರ ಬೆಂಗಳೂರು, ವೈಬ್ರಂಟ್ ಬೆಂಗಳೂರು, ಆರೋಗ್ಯ ಬೆಂಗಳೂರು ವಿಭಾಗದ ಅನುದಾನದಲ್ಲಿ ಒದಗಿಸಲಾಗಿದೆ. ಉಳಿದ ₹360 ಕೋಟಿಯನ್ನು 2024–25ನೇ ಸಾಲಿನ ‘ಪರಿಷ್ಕೃತ ಆಯವ್ಯಯ’ದ ಇತರೆ ಶೀರ್ಷಿಕೆಗಳಿಂದ ಉಳಿತಾಯವಾಗುವ ಅನುದಾನದಲ್ಲಿ ಭರಿಸಿಕೊಳ್ಳಲು ನಗರಾಭಿವೃದ್ಧಿ ಇಲಾಖೆ ಒಪ್ಪಿಗೆ ನೀಡಿದೆ.</p><p>‘ಸುಗಮ ಸಂಚಾರ’ಕ್ಕೆ ₹880 ಕೋಟಿ ಮೀಸಲಿರಿಸಲಾಗಿತ್ತು. ಇದರಲ್ಲಿ ಈ ಸಾಲಿನಲ್ಲಿ ₹730 ಕೋಟಿ ವೆಚ್ಚವಾಗಲಿದ್ದು, ಸುರಂಗ ರಸ್ತೆ ಯೋಜನೆಗೆ ಒದಗಿಸಿರುವ ₹200 ಕೋಟಿಯಲ್ಲಿ ₹100 ಕೋಟಿ ಹಾಗೂ ಕೆ–ರೈಡ್ ಯೋಜನೆ ಅನುದಾನದಲ್ಲಿ ₹50 ಕೋಟಿ ಸೇರಿದಂತೆ ಒಟ್ಟು ₹150 ಕೋಟಿ ಉಳಿತಾಯವಾಗಲಿದೆ. ಅದೇ ರೀತಿ, ‘ವೈಬ್ರಂಟ್ ಬೆಂಗಳೂರು’ನಲ್ಲಿ ₹265 ಕೋಟಿಯಲ್ಲಿ ₹90 ಕೋಟಿ ಉಳಿಯಲಿದೆ, ‘ಆರೋಗ್ಯ ಬೆಂಗಳೂರು’ನಲ್ಲಿ ₹215 ಕೋಟಿ ಉಳಿತಾಯ ನಿರೀಕ್ಷಿಸಿ, ಅದನ್ನು ರಸ್ತೆ ಅಭಿವೃದ್ಧಿಗೆ ವರ್ಗಾಯಿಸಲಾಗಿದೆ.</p><p>ಸುರಂಗ ರಸ್ತೆ ಅನುದಾನದಲ್ಲಿ ₹100 ಕೋಟಿ ಉಳಿತಾಯದ ನಿರೀಕ್ಷೆ ‘ಬ್ರ್ಯಾಂಡ್ ಬೆಂಗಳೂರು’ ಅನುದಾನದಿಂದ ₹300 ಕೋಟಿ ‘ಪರಿಷ್ಕೃತ ಆಯವ್ಯಯ’ದಂತೆ ಇತರೆ ಶೀರ್ಷಿಕೆಗಳಿಂದ ₹360 ಕೋಟಿ</p>.<p><strong>ಅಭಿವೃದ್ಧಿ ಮಾದರಿ ವಿನ್ಯಾಸ</strong></p><p>ಮುಖ್ಯ ಹಾಗೂ ಉಪ ಮುಖ್ಯರಸ್ತೆಗಳನ್ನು ಅಭಿವೃದ್ಧಿಪಡಿಸಲು ಒಂದು ನಿಗದಿತ ಮಾದರಿ–ವಿನ್ಯಾಸ ಹಾಗೂ ಸುಧಾರಿತ ನಿರ್ವಹಣಾ ಪದ್ಧತಿಯನ್ನು ಸಿದ್ಧಪಡಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ತಿಳಿಸಿದ್ದಾರೆ. ಅದರಂತೆ ಈ ಕಾಮಗಾರಿಗಳನ್ನು ನಡೆಸಬೇಕು ಎಂದು ನಗರಾಭಿವೃದ್ಧಿ ಇಲಾಖೆ ಸೂಚಿಸಿದೆ.</p><p>* ಹಾಳಾದ ರಸ್ತೆ ಮೇಲ್ಮೈಯನ್ನು ಮಿಲ್ಲಿಂಗ್ ಮಾಡುವುದು</p><p>* ರಸ್ತೆ ಬದಿ ಚರಂಡಿ ಇಲ್ಲದ ಪ್ರದೇಶಗಳಲ್ಲಿ ಎನ್.ಪಿ–3 ಪೈಪ್ ಅಳವಡಿಸಿ ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು. ಚರಂಡಿಯಿಂದ ಹೂಳನ್ನು ಸಂಪೂರ್ಣ ತೆರವುಗೊಳಿಸಿ ಚರಂಡಿ ಚಾವಣಿಯನ್ನು ಮರು ನಿರ್ಮಿಸುವುದು</p><p>* ರಸ್ತೆಯಿಂದ ಚರಂಡಿಗೆ ನೀರು ಸರಾಗವಾಗಿ ಹರಿಯುವಂತೆ ಮಾಡಲು ಗ್ರೇಟಿಂಗ್ ನಿರ್ಮಿಸುವುದು</p><p>* ಪಾದಚಾರಿ ಮಾರ್ಗವನ್ನು ಕಾಂಕ್ರೀಟ್ ತಳಪಾಯದೊಂದಿಗೆ ನಿರ್ಮಿಸುವುದು</p><p>* ರಸ್ತೆಬದಿ ರಸ್ತೆ ಲೈನ್ ಮತ್ತು ಪಾದಚಾರಿ ಮಾರ್ಗವನ್ನು ಗುರುತಿಸಲು ಕರ್ಬ್ ಸ್ಟೋನ್ಗಳನ್ನು ಅಳವಡಿಸಿ ಸಮತಟ್ಟು ಮಾಡುವುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>