‘ತಹಶೀಲ್ದಾರ್ಗಳು ಸ್ಮಶಾನಕ್ಕೆ ಗುರುತಿಸಿದ ಜಾಗಗಳ ಸರ್ವೆ ನಂಬರ್ ಪ್ರಕಾರ ಪ್ರತ್ಯೇಕ ಪ್ರಸ್ತಾವನೆ ಸಿದ್ಧಪಡಿಸಿ ಅನುಮೋದನೆ ಪಡೆಯಬೇಕು. ಈ ಜಾಗಗಳ ಗಡಿ ಗುರುತು ಮಾಡಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಹಸ್ತಾಂತರಿಸಬೇಕು. ಈ ಜಾಗಗಳು ಒತ್ತುವರಿ ಆಗದಂತೆ ತಡೆಯಲು ಕಂದಾಯ ಅಧಿಕಾರಿಗಳು ತಂತಿ ಬೇಲಿ ಹಾಕಿಸಬೇಕು’ ಎಂದು ನಗರ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಆದೇಶ ಮಾಡಿದ್ದಾರೆ.