ಸಿದ್ಧಾರ್ಥ ಅವರ ಜತೆ ಹಲವು ವರ್ಷ ಕಾರ್ಯನಿರ್ವಹಿಸಿರುವ ಹಾಗೂ ಆಪ್ತರಾಗಿದ್ದ ಟ್ಯಾಂಗ್ಲಿನ್ ಡೆವಲಪ್ಮೆಂಟ್ನ ವ್ಯವಸ್ಥಾಪಕ ನಿರ್ದೇಶಕ ಶಂಕರ್ ವೆಂಕಟರಮನ್ ಅವರು, ‘ಸಿದ್ಧಾರ್ಥ ಅವರ ನಿಜ ವ್ಯಕ್ತಿತ್ವವನ್ನು ಯೋಗ್ಯ ರೀತಿಯಲ್ಲಿ ಕೃತಿಯಲ್ಲಿ ಬಿಂಬಿಸಲಾಗಿದೆ. ಪ್ರತಿಭೆ ಇರುವ ವ್ಯಕ್ತಿಗಳನ್ನು ಸಿದ್ಧಾರ್ಥ ಗುರುತಿಸುತ್ತಿದ್ದರು. ಸಾಮಾನ್ಯರನ್ನು ಅಸಾಮಾನ್ಯರನ್ನಾಗಿ ಪರಿವರ್ತಿಸಿದರು. ಕಾಫಿ ಕುರಿತು ಅವರ ಕಂಡ ಕನಸುಗಳನ್ನು ನನಾಗಿಸಿಕೊಂಡರು‘ ಎಂದು ವಿವರಿಸಿದರು.