ಗ್ರಾಹಕರು ನಗದಾಗಿ ಪಾವತಿಸಿದ ನೀರಿನ ಬಿಲ್ ಅನ್ನು ಸಜಲ ತಂತ್ರಾಂಶದಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಕಂದಾಯ ವ್ಯವಸ್ಥಾಪಕ, ಹಿರಿಯ ಜಲಪರಿವೀಕ್ಷಕರ ಲಾಗಿನ್, ಪಾಸ್ವರ್ಡ್ ಬಳಸಿ ನಕಲಿ ಪಾವತಿಯನ್ನು ದಾಖಲಿಸಲಾಗಿದೆ. ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬುದು ಮಂಡಳಿಯ ಪ್ರಥಮ ಪರಿಶೋಧನೆ ಹಾಗೂ ತನಿಖೆಯಿಂದಲೇ ತಿಳಿದುಬಂದಿತ್ತು. ಸಹಾಯಕ ಲೆಕ್ಕ ನಿಯಂತ್ರಕ ಜಿ. ಶಂಕರಾಚಾರ್ಯ ಅವರ ಮೂರು ತಂಡವನ್ನು ರಚಿಸಿ ಪರಿಶೋಧನೆ ಕಾರ್ಯ ನಡೆಸಿ ವರದಿ ಸಲ್ಲಿಸಲು ಅಧ್ಯಕ್ಷರು ಸೂಚಿಸಿದ್ದರು. ಈ ತಂಡ ಸಲ್ಲಿಸಿರುವ ವರದಿಯಲ್ಲಿ ಗುತ್ತಿಗೆ ನೌಕರರ ಜೊತೆಗೆ ಜಲಮಂಡಳಿ ಸಿಬ್ಬಂದಿಯೂ ಭಾಗಿಯಾಗಿರುವುದು ಬಹಿರಂಗವಾಗಿದೆ,