ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ವೇಳೆ ಸಂಚಾರ: ಸವಾರರಿಗೆ ಬೈರತಿ ತರಾಟೆ

Last Updated 15 ಜುಲೈ 2020, 21:28 IST
ಅಕ್ಷರ ಗಾತ್ರ

ಕೆ.ಆರ್.ಪುರ: ಲಾಕ್‌ಡೌನ್ ಆದೇಶ ಉಲ್ಲಂಘಿಸಿ ರಸ್ತೆಯಲ್ಲಿ ಅನಗತ್ಯವಾಗಿ ಓಡಾಡಿದ ವಾಹನ ಸವಾರರಿಗೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಎಚ್ಚರಿಕೆ ನೀಡಿದರು.

ಟಿನ್ ಫ್ಯಾಕ್ಟರಿ ಬಳಿಯ ಲೌರಿ ಮೆಮೋರಿಯಲ್ ಶಾಲಾ ಆವರಣದಲ್ಲಿ ಮಹದೇವಪುರ ವಲಯದ ಕೋವಿಡ್ ಚಲನವಲನಗಳ ಕಮಾಂಡ್ ಸೆಂಟರ್ ಉದ್ಘಾಟಿಸಿ ಬರುವ ವೇಳೆ ಸವಾರರನ್ನು ಗಮನಿಸಿದ ಅವರು ರಸ್ತೆಗಿಳಿದು ವಾಹನಗಳ ತಪಾಸಣೆ ನಡೆಸಿದರು.

‘ನಿಮಗೆ ಜೀವದ ಭಯ ಇಲ್ಲವೇ? ಅನಗತ್ಯವಾಗಿ ರಸ್ತೆಗೆ ಏಕೆ ಬರುತ್ತಿರಾ?’ ಎಂದು ಸವಾರರನ್ನು ತರಾಟೆಗೆ ತೆಗೆದು
ಕೊಂಡರು. ಅನಗತ್ಯವಾಗಿ ಓಡಾಡುವ ವಾಹನ ಸವಾರರಿಗೆ ದಂಡ ವಿಧಿಸಬೇಕು ಹಾಗೂ ವಾಹನಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಬೇಕು’ ಎಂದು ಪೊಲೀಸರಿಗೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT