‘ಅಸ್ಸಾಂನಲ್ಲಿ 14 ಲಕ್ಷಕ್ಕೂ ಹೆಚ್ಚು ಹಿಂದುಗಳು ಬಂಧನ ಶಿಬಿರಗಳಲ್ಲಿದ್ದಾರೆ. ಪುರಾವೆಗಳನ್ನು ತಯಾರಿಸಲು ವಿಫಲರಾದವರನ್ನು ಈ ಶಿಬಿರಗಳಲ್ಲಿ ಇರಿಸಲಾಗುತ್ತದೆ.ಇದು ಕೇವಲ ಮುಸ್ಲಿಮರನ್ನು ಗುರಿಯಾಗಿಸಿ ಜಾರಿ ಮಾಡಿರುವ ಕಾಯ್ದೆಯಲ್ಲ. ಕೆಲ ಹಿಂದುಗಳನ್ನು ಸಂಕಷ್ಟಕ್ಕೆ ನೂಕುವ ಸಂಚಾಗಿದೆ.ಸಂವಿಧಾನದ ಮೇಲೆ ಒಂದು ರೀತಿಯ ಆಕ್ರಮಣ ನಡೆಯುತ್ತಿದ್ದು, ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವಗಳಿಗೆ ವಿರುದ್ಧವಾಗಿದೆ’ ಎಂದು ಅವರು ಹೇಳಿದರು.