<p><strong>ಬೆಂಗಳೂರು:</strong> ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕ್ಯಾಬ್ ಚಾಲಕ ಚಂದ್ರಶೇಖರ್ (40) ಅಪಹರಣ ಮತ್ತು ಕೊಲೆಗೆ ಪತ್ನಿಯೇ ಸುಪಾರಿ ನೀಡಿರುವುದು ತನಿಖೆ ವೇಳೆ ಪತ್ತೆಯಾಗಿದ್ದು, ಪ್ರಕರಣ ಸಂಬಂಧ ಪತ್ನಿ ಸೇರಿ ಮೂವರನ್ನು ಬಂಧಿಸಲಾಗಿದೆ.</p>.<p>ಪ್ರಕರಣ ಸಂಬಂಧ ಚಂದ್ರು ಪತ್ನಿ ವನಜಾಕ್ಷಿ, ಪ್ರಿಯಕರ ನಾಗರಾಜ್, ಮೈಸೂರಿನ ಪುರುಷೋತ್ತಮ್, ಮಂಡ್ಯದ ನಂದನ್ ಹಾಗೂ ಮೂವರು ಅಪ್ರಾಪ್ತರನ್ನು ಪೊಲೀಸರು ಬಂಧಿಸಿದ್ದಾರೆ.</p>.<p>‘ಪ್ರಿಯಕರ ನಾಗರಾಜ್ ಜತೆ ವನಜಾಕ್ಷಿ ಸಲುಗೆಯಿಂದ ಇದ್ದರು. ಈ ವಿಷಯ ಗೊತ್ತಾಗಿ ಚಂದ್ರಶೇಖರ್ ಬುದ್ದಿ ಹೇಳಿದ್ದರು. ಹಾಗಾಗಿ ಪತಿಯ ಹತ್ಯೆ ಮಾಡಲು ವನಜಾಕ್ಷಿ ತನ್ನ ಪ್ರಿಯಕರನಿಗೆ ₹ 1 ಲಕ್ಷ ಸುಪಾರಿ ನೀಡಿದ್ದಳು. ಏಪ್ರಿಲ್ 26ರಂದು ಚಂದ್ರಶೇಖರ್ನನ್ನು ಅಪಹರಿಸಿ ಕೊಲೆ ಮಾಡಲಾಗಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಕ್ಯಾಬ್ ಚಾಲಕನಾಗಿದ್ದ ಚಿಕ್ಕಬ್ಯಾಲಕೆರೆಯ ಚಂದ್ರು, 15 ವರ್ಷಗಳ ಹಿಂದೆ ವನಜಾಕ್ಷಿಯನ್ನು ಪ್ರೀತಿಸಿ ಮದುವೆಯಾಗಿದ್ದ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ನಾಗರಾಜ್ನಿಂದ ದೂರವಿರುವಂತೆ ಪತ್ನಿಗೆ ಬುದ್ದಿ ಹೇಳುತ್ತಿದ್ದ. ಈ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಇತ್ತೀಚೆಗೆ ಪತಿ ಜತೆ ಜಗಳವಾಡಿಕೊಂಡು, ದೊಡ್ಡಬ್ಯಾಲಕೆರೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ತನ್ನ ತಾಯಿ ಜತೆ ವನಜಾಕ್ಷಿ ವಾಸವಿದ್ದಳು ಎಂದು ಹೇಳಿದ್ದಾರೆ.</p>.<p>ಆರೋಪಿ ನಾಗರಾಜ್, ಪರಿಚಿತ ನಂದನ್ ಎಂಬಾತನಿಗೆ ₹ 1 ಲಕ್ಷಕ್ಕೆ ಸುಪಾರಿ ನೀಡಿ, ₹ 30 ಸಾವಿರ ಮುಂಗಡ ಪಾವತಿಸಿದ್ದ. ನಂದನ್ ಹಾಗೂ ಆತನ ಸಹಚರರು ಚಂದ್ರಶೇಖರ್ನನ್ನು ನಗರದಲ್ಲಿ ಅಪಹರಿಸಿ ಕನಕಪುರ ಸಮೀಪದ ಸಾತನೂರು ಬಳಿ ಕೊಲೆ ಮಾಡಿ ಮೃತದೇಹ ಎಸೆದು ಪರಾರಿಯಾಗಿದ್ದರು. ಪೊಲೀಸರ ವಿಚಾರಣೆಯಲ್ಲಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕ್ಯಾಬ್ ಚಾಲಕ ಚಂದ್ರಶೇಖರ್ (40) ಅಪಹರಣ ಮತ್ತು ಕೊಲೆಗೆ ಪತ್ನಿಯೇ ಸುಪಾರಿ ನೀಡಿರುವುದು ತನಿಖೆ ವೇಳೆ ಪತ್ತೆಯಾಗಿದ್ದು, ಪ್ರಕರಣ ಸಂಬಂಧ ಪತ್ನಿ ಸೇರಿ ಮೂವರನ್ನು ಬಂಧಿಸಲಾಗಿದೆ.</p>.<p>ಪ್ರಕರಣ ಸಂಬಂಧ ಚಂದ್ರು ಪತ್ನಿ ವನಜಾಕ್ಷಿ, ಪ್ರಿಯಕರ ನಾಗರಾಜ್, ಮೈಸೂರಿನ ಪುರುಷೋತ್ತಮ್, ಮಂಡ್ಯದ ನಂದನ್ ಹಾಗೂ ಮೂವರು ಅಪ್ರಾಪ್ತರನ್ನು ಪೊಲೀಸರು ಬಂಧಿಸಿದ್ದಾರೆ.</p>.<p>‘ಪ್ರಿಯಕರ ನಾಗರಾಜ್ ಜತೆ ವನಜಾಕ್ಷಿ ಸಲುಗೆಯಿಂದ ಇದ್ದರು. ಈ ವಿಷಯ ಗೊತ್ತಾಗಿ ಚಂದ್ರಶೇಖರ್ ಬುದ್ದಿ ಹೇಳಿದ್ದರು. ಹಾಗಾಗಿ ಪತಿಯ ಹತ್ಯೆ ಮಾಡಲು ವನಜಾಕ್ಷಿ ತನ್ನ ಪ್ರಿಯಕರನಿಗೆ ₹ 1 ಲಕ್ಷ ಸುಪಾರಿ ನೀಡಿದ್ದಳು. ಏಪ್ರಿಲ್ 26ರಂದು ಚಂದ್ರಶೇಖರ್ನನ್ನು ಅಪಹರಿಸಿ ಕೊಲೆ ಮಾಡಲಾಗಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಕ್ಯಾಬ್ ಚಾಲಕನಾಗಿದ್ದ ಚಿಕ್ಕಬ್ಯಾಲಕೆರೆಯ ಚಂದ್ರು, 15 ವರ್ಷಗಳ ಹಿಂದೆ ವನಜಾಕ್ಷಿಯನ್ನು ಪ್ರೀತಿಸಿ ಮದುವೆಯಾಗಿದ್ದ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ನಾಗರಾಜ್ನಿಂದ ದೂರವಿರುವಂತೆ ಪತ್ನಿಗೆ ಬುದ್ದಿ ಹೇಳುತ್ತಿದ್ದ. ಈ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಇತ್ತೀಚೆಗೆ ಪತಿ ಜತೆ ಜಗಳವಾಡಿಕೊಂಡು, ದೊಡ್ಡಬ್ಯಾಲಕೆರೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ತನ್ನ ತಾಯಿ ಜತೆ ವನಜಾಕ್ಷಿ ವಾಸವಿದ್ದಳು ಎಂದು ಹೇಳಿದ್ದಾರೆ.</p>.<p>ಆರೋಪಿ ನಾಗರಾಜ್, ಪರಿಚಿತ ನಂದನ್ ಎಂಬಾತನಿಗೆ ₹ 1 ಲಕ್ಷಕ್ಕೆ ಸುಪಾರಿ ನೀಡಿ, ₹ 30 ಸಾವಿರ ಮುಂಗಡ ಪಾವತಿಸಿದ್ದ. ನಂದನ್ ಹಾಗೂ ಆತನ ಸಹಚರರು ಚಂದ್ರಶೇಖರ್ನನ್ನು ನಗರದಲ್ಲಿ ಅಪಹರಿಸಿ ಕನಕಪುರ ಸಮೀಪದ ಸಾತನೂರು ಬಳಿ ಕೊಲೆ ಮಾಡಿ ಮೃತದೇಹ ಎಸೆದು ಪರಾರಿಯಾಗಿದ್ದರು. ಪೊಲೀಸರ ವಿಚಾರಣೆಯಲ್ಲಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>