‘ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ 2ಎ ಮೀಸಲಾತಿಯನ್ನು ಶಿಕ್ಷಣಕ್ಕೆ
ಮಾತ್ರ ನೀಡಿದ್ದರು. ಸಾಮಾಜಿಕ, ಆರ್ಥಿಕ, ಔದ್ಯೋಗಿಕವಾಗಿಯೂ ಮೀಸಲಾತಿ ನೀಡಬೇಕು ಎಂದು ಸಮುದಾಯ ಹೋರಾಟ ನಡೆಸಿದೆ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜನಾಂಗದ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ, ಸರ್ಕಾರ ನಡೆಸುವ ಕೈವಾರ ತಾತಯ್ಯ ಜಯಂತಿಯನ್ನು ರಾಜ್ಯದಾದ್ಯಂತ ಬಹಿಷ್ಕಾರ ಹಾಕುವ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.