<p><strong>ಬೆಂಗಳೂರು:</strong> ವಿಶ್ವ ವೇಗನ್ ದಿನದ ಅಂಗವಾಗಿ ಪ್ರಾಣಿಗಳ ಮೇಲೆ ನಡೆಯುವ ಹಿಂಸೆಯನ್ನು ತಡೆಯುವ ಬಗ್ಗೆ ಜಾಗೃತಿ ಮೂಡಿಸಲು ಪ್ರಾಣಿ ಹಕ್ಕು ಹೋರಾಟಗಾರರು ಎಇಸಿಎಸ್ ಲೇಔಟ್ನಲ್ಲಿ ಅಭಿಯಾನ ನಡೆಸಿದರು.</p>.<p>ಬೆಂಗಳೂರು ಬ್ರಿಗೇಡ್ ಫಾರ್ ಅನಿಮಲ್ ಲಿಬರೇಷನ್ (ಬಿಬಿಎಎಲ್) ಜಾಗೃತಿ ಜಾಥಾವನ್ನು ನಗರದಲ್ಲಿ ಹಮ್ಮಿಕೊಂಡಿತ್ತು. </p>.<p>ಮಾಂಸ, ಹಾಲು, ಮೊಟ್ಟೆ, ಚರ್ಮ, ಜೇನುತುಪ್ಪ ಬಳಸುವುದು, ಪ್ರಾಣಿಗಳಿಂದ ಸೌಂದರ್ಯ ಉತ್ಪನ್ನಗಳನ್ನು ತಯಾರಿಸುವುದರ ಹಿಂದೆ ಕ್ರೌರ್ಯ ಅಡಗಿದೆ ಎಂದು ಪ್ರಾಣಿಹಕ್ಕು ಹೋರಾಟಗಾರರು ಪ್ರತಿಪಾದಿಸಿದರು.</p>.<p>ಕೋಳಿ, ಆಡು, ಮೀನು, ಹಂದಿಯನ್ನು ಆಹಾರಕ್ಕಾಗಿಯೇ ಸಾಕಲಾಗುತ್ತಿದೆ. ಅವುಗಳಿಗೆ ಆಗುವ ನೋವನ್ನು ನಾವು ನೋಡುತ್ತಿಲ್ಲ. ಆ ನೋವು ನಮ್ಮ ಮನಸ್ಸು, ಹೃದಯವನ್ನು ತಟ್ಟಬೇಕು ಎಂದು ಅಭಿಯಾನ ಆಯೋಜಕರಾದ ಮಹೇಶ್, ದಿಲೀಪ್ ತಿಳಿಸಿದರು.</p>.<p>‘ಪ್ರಾಣಿಗಳು ಮನುಷ್ಯರ ಬಳಕೆಗೆ ಸೃಷ್ಟಿಯಾದುದಲ್ಲ. ಆಹಾರ, ಉಡುಪು, ಮನರಂಜನೆಗೆ ಬಳಸಬಾರದು. ಅವುಗಳ ಚರ್ಮ ಅವುಗಳ ರಕ್ಷಣೆಗೇ ಇರುವುಂಥದ್ದು’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ವಿಶ್ವ ವೇಗನ್ ದಿನದ ಅಂಗವಾಗಿ ಪ್ರಾಣಿಗಳ ಮೇಲೆ ನಡೆಯುವ ಹಿಂಸೆಯನ್ನು ತಡೆಯುವ ಬಗ್ಗೆ ಜಾಗೃತಿ ಮೂಡಿಸಲು ಪ್ರಾಣಿ ಹಕ್ಕು ಹೋರಾಟಗಾರರು ಎಇಸಿಎಸ್ ಲೇಔಟ್ನಲ್ಲಿ ಅಭಿಯಾನ ನಡೆಸಿದರು.</p>.<p>ಬೆಂಗಳೂರು ಬ್ರಿಗೇಡ್ ಫಾರ್ ಅನಿಮಲ್ ಲಿಬರೇಷನ್ (ಬಿಬಿಎಎಲ್) ಜಾಗೃತಿ ಜಾಥಾವನ್ನು ನಗರದಲ್ಲಿ ಹಮ್ಮಿಕೊಂಡಿತ್ತು. </p>.<p>ಮಾಂಸ, ಹಾಲು, ಮೊಟ್ಟೆ, ಚರ್ಮ, ಜೇನುತುಪ್ಪ ಬಳಸುವುದು, ಪ್ರಾಣಿಗಳಿಂದ ಸೌಂದರ್ಯ ಉತ್ಪನ್ನಗಳನ್ನು ತಯಾರಿಸುವುದರ ಹಿಂದೆ ಕ್ರೌರ್ಯ ಅಡಗಿದೆ ಎಂದು ಪ್ರಾಣಿಹಕ್ಕು ಹೋರಾಟಗಾರರು ಪ್ರತಿಪಾದಿಸಿದರು.</p>.<p>ಕೋಳಿ, ಆಡು, ಮೀನು, ಹಂದಿಯನ್ನು ಆಹಾರಕ್ಕಾಗಿಯೇ ಸಾಕಲಾಗುತ್ತಿದೆ. ಅವುಗಳಿಗೆ ಆಗುವ ನೋವನ್ನು ನಾವು ನೋಡುತ್ತಿಲ್ಲ. ಆ ನೋವು ನಮ್ಮ ಮನಸ್ಸು, ಹೃದಯವನ್ನು ತಟ್ಟಬೇಕು ಎಂದು ಅಭಿಯಾನ ಆಯೋಜಕರಾದ ಮಹೇಶ್, ದಿಲೀಪ್ ತಿಳಿಸಿದರು.</p>.<p>‘ಪ್ರಾಣಿಗಳು ಮನುಷ್ಯರ ಬಳಕೆಗೆ ಸೃಷ್ಟಿಯಾದುದಲ್ಲ. ಆಹಾರ, ಉಡುಪು, ಮನರಂಜನೆಗೆ ಬಳಸಬಾರದು. ಅವುಗಳ ಚರ್ಮ ಅವುಗಳ ರಕ್ಷಣೆಗೇ ಇರುವುಂಥದ್ದು’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>