ಬೆಂಗಳೂರು: ಕಿಮ್ಸ್ನ ವೈದ್ಯಕೀಯ ವಿದ್ಯಾರ್ಥಿ ಅತೀವೇಗವಾಗಿ ಕಾರು ಚಾಲನೆ ಮಾಡಿ ರಾಜಭವನ ಸಮೀಪ ಪ್ರಸಾರ ಭಾರತಿ (ಆಕಾಶವಾಣಿ) ಕೇಂದ್ರದ ಆವರಣ ಗೋಡೆಗೆ ಡಿಕ್ಕಿ ಹೊಡೆದಿರುವ ಘಟನೆ ಕಬ್ಬನ್ ಪಾರ್ಕ್ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆ ಸಂಬಂಧ ಮಲ್ಲೇಶ್ವರ ನಿವಾಸಿ ಶ್ರೀವತ್ಸ (22) ಎಂಬಾತನನ್ನು ವಿಚಾರಣೆ ನಡೆಸಿ, ನೋಟಿಸ್ ಕೊಟ್ಟು ಕಳುಹಿಸಲಾಗಿದೆ. ಕಾರಿನ ಏರ್ ಬ್ಯಾಗ್ ತೆರೆದುಕೊಂಡ ಕಾರಣ ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾನೆ.
ಮಂಗಳವಾರ ರಾತ್ರಿ ಸ್ನೇಹಿತರ ಜತೆ ಮದ್ಯದ ಪಾರ್ಟಿ ಮಾಡಿದ್ದ ಶ್ರೀವತ್ಸ, ಒಬ್ಬನೇ ಕಾರು ಚಾಲನೆ ಮಾಡಿಕೊಂಡು ಬಂದಿದ್ದಾನೆ. ಅರಮನೆ ರಸ್ತೆಯಿಂದ ಬರುವಾಗ ಡಿಕ್ಕಿ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದರು.