‘ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಪೆಡ್ಲರ್ ತಲೆಮರೆಸಿಕೊಂಡಿದ್ದಾನೆ. ಆತ ಆಂಧ್ರಪ್ರದೇಶದವನು. ಅವನಿಂದಲೇ ಬಂಧಿತ ಆರೋಪಿ ಮಾದಕ ವಸ್ತು ಖರೀದಿಸುತ್ತಿದ್ದ. ಅದನ್ನು 20 ಗ್ರಾಮ್ಗಳಂತೆ ವಿಂಗಡಿಸಿ ಪೊಟ್ಟಣಗಳಲ್ಲಿ ತುಂಬುತ್ತಿದ್ದ. ಪರಿಚಿತರು, ಕಾಲೇಜು ವಿದ್ಯಾರ್ಥಿಗಳು, ನಗರದಲ್ಲಿ ನೆಲೆಸಿರುವ ಉತ್ತರ ಭಾರತದ ಕೂಲಿ ಕಾರ್ಮಿಕರಿಗೆ ಮಾರಾಟ ಮಾಡುತ್ತಿದ್ದ. ಪ್ರತಿ ಪೊಟ್ಟಣಕ್ಕೆ ₹1,500ರಿಂದ ₹2 ಸಾವಿರದವರೆಗೆ ದರ ನಿಗದಿ ಮಾಡುತ್ತಿದ್ದ. ಈತನ ವಿರುದ್ಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದೇವೆ’ ಎಂದು ಹೇಳಿದ್ದಾರೆ.