<p><strong>ಬೆಂಗಳೂರು: </strong>ಸಿ.ಡಿ. ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, ಅತ್ಯಾಚಾರ ಪ್ರಕರಣದ ಸಂತ್ರಸ್ತೆ ವಿಶೇಷ ತನಿಖಾ ತಂಡದ (ಎಸ್ಐಟಿ) ಅಧಿಕಾರಿಗಳ ಎದುರು ಸೋಮವಾರ ಹಾಜರಾದರು.</p>.<p>‘ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ’ ಎಂದು ಆರೋಪಿಸಿ ಸಂತ್ರಸ್ತೆ ನೀಡಿರುವ ದೂರಿನಡಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿ ಎಂ.ಸಿ.ಕವಿತಾ, ಪ್ರಕರಣಕ್ಕೆ ಸಂಬಂಧಪಟ್ಟ ಪುರಾವೆಗಳನ್ನು ಸಂಗ್ರಹಿಸುತ್ತಿದ್ದಾರೆ.</p>.<p>ಅದೇ ಕಾರಣಕ್ಕೆ ಭಾನುವಾರ ಸಂತ್ರಸ್ತೆಗೆ ನೋಟಿಸ್ ನೀಡಿದ್ದ ತನಿಖಾಧಿಕಾರಿ, ‘ಪ್ರಕರಣ ಸಂಬಂಧ ತಾವು ನೀಡಿರುವ ಹೇಳಿಕೆಗೆ ಪೂರಕವಾದ ವಿಡಿಯೊ, ಆಡಿಯೊ, ವಾಟ್ಸ್ಆ್ಯಪ್ ಚಾಟಿಂಗ್, ಭಾವಚಿತ್ರ ಹಾಗೂ ಇತರೆ ದಾಖಲಾತಿಗಳ ಸಮೇತ ಕಚೇರಿಗೆ ಹಾಜರಾಗಿ’ ಎಂದಿದ್ದರು.</p>.<p>ಸೋಮವಾರ ಬೆಳಿಗ್ಗೆ 11.30 ಗಂಟೆ ಸುಮಾರಿಗೆ ವಕೀಲರ ಸಮೇತ ಆಡುಗೋಡಿಯಲ್ಲಿರುವ ಎಸ್ಐಟಿ ಕಚೇರಿಗೆ ಬಂದಿದ್ದ ಸಂತ್ರಸ್ತೆ, ಅರ್ಧ ಗಂಟೆ ತನಿಖಾಧಿಕಾರಿ ಜೊತೆ ಮಾತನಾಡಿದರು.</p>.<p>‘ನೀವು ಕೇಳಿರುವ ದಾಖಲೆಗಳೆಲ್ಲವೂ ನನ್ನ ಬಳಿ ಇದೆ. ಆದರೆ, ಅವುಗಳನ್ನು ನಿಮಗೆ ತಂದುಕೊಡಲು ಕಾಲಾವಕಾಶ ಬೇಕು’ ಎಂದು ಸಂತ್ರಸ್ತೆ, ಲಿಖಿತವಾಗಿಯೇ ತನಿಖಾಧಿಕಾರಿಗೆ ಬರೆದುಕೊಟ್ಟರು. ಅದಕ್ಕೆ ಒಪ್ಪಿದ ತನಿಖಾಧಿಕಾರಿ, ಪುರಾವೆಗಳನ್ನು ಹಾಜರುಪಡಿಸಲು ಕಾಲಾವಕಾಶ ನೀಡಿದ್ದಾರೆ.</p>.<p><strong>ಹೇಳಿಕೆಗೆ ಸಂತ್ರಸ್ತೆ ಬದ್ಧ</strong></p>.<p>ಸಂತ್ರಸ್ತೆ ವಿಚಾರಣೆಗೆ ಹಾಜರಾದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಕೀಲ ಸೂರ್ಯ ಮುಕುಂದರಾಜ್, ‘ಪ್ರಕರಣ ಸಂಬಂಧ ನೀಡಿರುವ ಹೇಳಿಕೆಗೆ ಸಂತ್ರಸ್ತೆ ಬದ್ಧರಾಗಿದ್ದಾರೆ. ಪುರಾವೆ ಕೇಳಿ ತನಿಖಾಧಿಕಾರಿ ನೋಟಿಸ್ ನೀಡಿದ್ದರು. ಲಿಖಿತ ರೂಪದಲ್ಲೇ ಸಂತ್ರಸ್ತೆ ಕಾಲಾವಕಾಶ ಕೋರಿದ್ದಾರೆ’ ಎಂದರು.</p>.<p>‘ಸಂತ್ರಸ್ತೆ ತಮ್ಮ ಹೇಳಿಕೆ ಹಿಂಪಡೆಯುತ್ತಿದ್ದಾರೆಂದು ಕೆಲವೆಡೆ ಸುದ್ದಿ ಹರಿದಾಡಿದೆ. ಆದರೆ, ಅದು ಸುಳ್ಳು’ ಎಂದೂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಸಿ.ಡಿ. ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, ಅತ್ಯಾಚಾರ ಪ್ರಕರಣದ ಸಂತ್ರಸ್ತೆ ವಿಶೇಷ ತನಿಖಾ ತಂಡದ (ಎಸ್ಐಟಿ) ಅಧಿಕಾರಿಗಳ ಎದುರು ಸೋಮವಾರ ಹಾಜರಾದರು.</p>.<p>‘ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ’ ಎಂದು ಆರೋಪಿಸಿ ಸಂತ್ರಸ್ತೆ ನೀಡಿರುವ ದೂರಿನಡಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿ ಎಂ.ಸಿ.ಕವಿತಾ, ಪ್ರಕರಣಕ್ಕೆ ಸಂಬಂಧಪಟ್ಟ ಪುರಾವೆಗಳನ್ನು ಸಂಗ್ರಹಿಸುತ್ತಿದ್ದಾರೆ.</p>.<p>ಅದೇ ಕಾರಣಕ್ಕೆ ಭಾನುವಾರ ಸಂತ್ರಸ್ತೆಗೆ ನೋಟಿಸ್ ನೀಡಿದ್ದ ತನಿಖಾಧಿಕಾರಿ, ‘ಪ್ರಕರಣ ಸಂಬಂಧ ತಾವು ನೀಡಿರುವ ಹೇಳಿಕೆಗೆ ಪೂರಕವಾದ ವಿಡಿಯೊ, ಆಡಿಯೊ, ವಾಟ್ಸ್ಆ್ಯಪ್ ಚಾಟಿಂಗ್, ಭಾವಚಿತ್ರ ಹಾಗೂ ಇತರೆ ದಾಖಲಾತಿಗಳ ಸಮೇತ ಕಚೇರಿಗೆ ಹಾಜರಾಗಿ’ ಎಂದಿದ್ದರು.</p>.<p>ಸೋಮವಾರ ಬೆಳಿಗ್ಗೆ 11.30 ಗಂಟೆ ಸುಮಾರಿಗೆ ವಕೀಲರ ಸಮೇತ ಆಡುಗೋಡಿಯಲ್ಲಿರುವ ಎಸ್ಐಟಿ ಕಚೇರಿಗೆ ಬಂದಿದ್ದ ಸಂತ್ರಸ್ತೆ, ಅರ್ಧ ಗಂಟೆ ತನಿಖಾಧಿಕಾರಿ ಜೊತೆ ಮಾತನಾಡಿದರು.</p>.<p>‘ನೀವು ಕೇಳಿರುವ ದಾಖಲೆಗಳೆಲ್ಲವೂ ನನ್ನ ಬಳಿ ಇದೆ. ಆದರೆ, ಅವುಗಳನ್ನು ನಿಮಗೆ ತಂದುಕೊಡಲು ಕಾಲಾವಕಾಶ ಬೇಕು’ ಎಂದು ಸಂತ್ರಸ್ತೆ, ಲಿಖಿತವಾಗಿಯೇ ತನಿಖಾಧಿಕಾರಿಗೆ ಬರೆದುಕೊಟ್ಟರು. ಅದಕ್ಕೆ ಒಪ್ಪಿದ ತನಿಖಾಧಿಕಾರಿ, ಪುರಾವೆಗಳನ್ನು ಹಾಜರುಪಡಿಸಲು ಕಾಲಾವಕಾಶ ನೀಡಿದ್ದಾರೆ.</p>.<p><strong>ಹೇಳಿಕೆಗೆ ಸಂತ್ರಸ್ತೆ ಬದ್ಧ</strong></p>.<p>ಸಂತ್ರಸ್ತೆ ವಿಚಾರಣೆಗೆ ಹಾಜರಾದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಕೀಲ ಸೂರ್ಯ ಮುಕುಂದರಾಜ್, ‘ಪ್ರಕರಣ ಸಂಬಂಧ ನೀಡಿರುವ ಹೇಳಿಕೆಗೆ ಸಂತ್ರಸ್ತೆ ಬದ್ಧರಾಗಿದ್ದಾರೆ. ಪುರಾವೆ ಕೇಳಿ ತನಿಖಾಧಿಕಾರಿ ನೋಟಿಸ್ ನೀಡಿದ್ದರು. ಲಿಖಿತ ರೂಪದಲ್ಲೇ ಸಂತ್ರಸ್ತೆ ಕಾಲಾವಕಾಶ ಕೋರಿದ್ದಾರೆ’ ಎಂದರು.</p>.<p>‘ಸಂತ್ರಸ್ತೆ ತಮ್ಮ ಹೇಳಿಕೆ ಹಿಂಪಡೆಯುತ್ತಿದ್ದಾರೆಂದು ಕೆಲವೆಡೆ ಸುದ್ದಿ ಹರಿದಾಡಿದೆ. ಆದರೆ, ಅದು ಸುಳ್ಳು’ ಎಂದೂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>