‘ಶಾಸಕ ಜಮೀರ್ ಅಹಮದ್ 2006ರಲ್ಲಿ ಒಂದು ಒಪ್ಪಂದ ಮಾಡಿದ್ದರು. ಇಲ್ಲಿ ಬಿರುಕುಬಿಟ್ಟಿರುವ ಗೋಡೆಯನ್ನು ದುರಸ್ತಿ ಮಾಡಲು ಅವಕಾಶ ಮಾಡಿಕೊಡಿ. ನಂತರ ಸಾರ್ವಜನಿಕರು ಗಣೇಶ, ದಸರಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಳ್ಳಿ. ವರ್ಷಕ್ಕೆ ಎರಡು ಬಾರಿ ನಮಗೆ ಅವಕಾಶ ಮಾಡಿಕೊಡಿ ಎಂದಿದ್ದರು. ದುರಸ್ತಿ ಮುಗಿದ ಮೇಲೆ ಈ ಮಾತನ್ನು ನಡೆಸಿಕೊಂಡಿಲ್ಲ. ಅವರು ಎಲ್ಲರಿಗೂ ಶಾಸಕರು, ಒಂದುಸಮುದಾಯಕ್ಕಲ್ಲ. ಆದ್ದರಿಂದ ಅವರನ್ನೂ ಈ ಬಗ್ಗೆ ಪ್ರಶ್ನಿಸಲು ನಿರ್ಣಯ ಕೈಗೊಂಡಿದ್ದೇವೆ’ ಎಂದರು.