ಬೆಂಗಳೂರು: ‘ಈವರೆಗೂ ಯುದ್ಧ ಅಥವಾ ಹೋರಾಟಗಳ ಮೂಲಕ ದೇಶ ರಕ್ಷಣೆ ಕಾರ್ಯ ನಡೆಯಿತು. ಈಗ ವೈರಸ್ಗಳ ವಿರುದ್ಧ ಹೋರಾಟ ಮಾಡಬೇಕಾಗಿದೆ. ಕೋವಿಡ್–19 ವೈರಸ್ನಿಂದ ರಕ್ಷಿಸಿಕೊಳ್ಳಲು ಹೋರಾಟ ಮಾಡಬೇಕು’ ಎಂದು ನಿವೃತ್ತ ಮೇಜರ್ ಜನರಲ್ ಜಿ.ಡಿ. ಬಕ್ಷಿ ಹೇಳಿದರು.
ನಗರದಲ್ಲಿ ಶುಕ್ರವಾರ ರಾಜ್ಯ ಲೆಕ್ಕಪರಿಶೋಧಕರ ಸಂಸ್ಥೆಯ 32ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ‘ಸೇನೆಗೆ ಸೇರುವುದು ಪೂರ್ವಜನ್ಮದ ಪುಣ್ಯ. ಭಾರತ ಮಾತೆಯನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗುವುದು ಒಂದು ಸುವರ್ಣಾವಕಾಶ’ ಎಂದರು.
ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ‘1957ರಲ್ಲಿ ಕರ್ನಾಟಕದಲ್ಲಿ ಆರಂಭಗೊಂಡ ಈ ಸಂಸ್ಥೆ 64 ವರ್ಷಗಳನ್ನು ಪೂರ್ಣಗೊಳಿಸಿದೆ. ಸಂಸ್ಥೆಯು ನಿರಂತರವಾಗಿ ವಿಚಾರ ಸಂಕಿರಣಗಳು, ಲೆಕ್ಕಪರಿಶೋಧಕರಿಗೆ ಉಪನ್ಯಾಸ ಹಾಗೂ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ’ ಎಂದರು.