ಬೆಂಗಳೂರು: ಇಲ್ಲಿನ ಕಾರ್ಡ್ ರಸ್ತೆ (ಶಿವನಗರ) ಮೇಲ್ಸೇತುವೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಉದ್ಘಾಟಿಸಿದರು.
₹ 71.98 ಕೋಟಿ ವೆಚ್ಚದಲ್ಲಿ ಈ ಯೋಜನೆ ಕೈಗೊಳ್ಳಲಾಗಿದೆ. ಒಟ್ಟು 654.68 ಮೀಟರ್ ಉದ್ದದ ಮೇಲ್ಸೇತುವೆ ಇದಾಗಿದೆ. ತುಮಕೂರು ರಸ್ತೆಯಿಂದ ಮೈಸೂರು ರಸ್ತೆಗೆ ಸಂಚರಿಸುವ ವಾಹನಗಳು ಸಿಗ್ನಲ್ ರಹಿತವಾಗಿ ಸಂಚರಿಸುವ ನಿಟ್ಟಿನಲ್ಲಿ ಈ ಯೋಜನೆಯು ಉಪಯುಕ್ತವಾಗಿದೆ ಎಂದು ತಿಳಿಸಿದರು.