ಬೆಂಗಳೂರು: ಸನಾತನ ಧರ್ಮದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಕೂಡಲಿ-ಶೃಂಗೇರಿ ಸಂಸ್ಥಾನದ ಅಭಿನವ ಶಂಕರ ಭಾರತಿ ಸ್ವಾಮೀಜಿ ಹೇಳಿದರು.
ಚಾಮರಾಜಪೇಟೆಯ ಚಂದ್ರಶೇಖರ ಭಾರತೀಯ ಕಲ್ಯಾಣಮಂಟಪದಲ್ಲಿ ಮೈಲಾರಲಿಂಗೇಶ್ವರ ಟ್ರಸ್ಟ್ ಆಯೋಜಿಸಿದ್ದ 21ನೇ ವರ್ಷದ ಚಿಕ್ಕಯ್ಯ-ದೊಡ್ಡಯ್ಯ ಪೂಜಾ ಮಹೋತ್ಸವ, ಮೈಲಾರಿ ಹೋಮ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಭಕ್ತಿ ಮಾರ್ಗದಲ್ಲಿ ಸಾಗುವ ಮೂಲಕ ಸಂಸ್ಕೃತಿ, ಆಚಾರ, ವಿಚಾರಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.
ಆನಂದವನ ಅಗಡಿ ಕ್ಷೇತ್ರದ ಗುರುದತ್ತ ಸ್ವಾಮೀಜಿ ಚಕ್ರವರ್ತಿ ಮಾತನಾಡಿ, ‘ಬೆಂಗಳೂರಿನಲ್ಲಿ ಭವ್ಯವಾದ ಮೈಲಾರಲಿಂಗೇಶ್ವರ ದೇವಸ್ಥಾನ ನಿರ್ಮಾಣವಾಗಬೇಕು. ಅದು ಸುಕ್ಷೇತ್ರವಾಗಬೇಕು. ಈ ನಿಟ್ಟಿನಲ್ಲಿ ಭಕ್ತರು ದೃಢ ಹೆಜ್ಜೆ ಇಡಬೇಕು’ ಎಂದು ಹೇಳಿದರು.