ಈಗಾಗಲೇ ಹೊಸಕೋಟೆ, ನೆಲಮಂಗಲ, ಬಿಡದಿ, ಆನೇಕಲ್ ನಗರದ ಭಾಗವಾಗಿವೆ. ಮುಂದಿನ ದಿನಗಳಲ್ಲಿ ಈ ಪ್ರದೇಶಗಳಲ್ಲಿಯೇ ನಗರದ ಬೆಳವಣಿಗೆ ಆಗುವ ಹಿನ್ನೆಲೆಯಲ್ಲಿ ಯೋಜನೆಗಳಿಗೆ ತ್ವರಿತ ಮಂಜೂರಾತಿಗೆ ಅಡೆತಡೆಗಳು ಇರಬಾರದು. ಯಾವುದೇ ಅನುಮೋದನೆಗೂ ಬಿಡಿಎ, ಬಿಬಿಎಂಪಿ ಮತ್ತು ಬಿಎಂಆರ್ಡಿಎ ಮಧ್ಯೆ ಸಮನ್ವಯದಲ್ಲೇ ಆಗಬೇಕು ಎಂಬುದು ಮುಖ್ಯಮಂತ್ರಿಯವರ ಇಂಗಿತವಾಗಿದೆ ಎಂದು ಮೂಲಗಳು ತಿಳಿಸಿವೆ.