‘ಗ್ಯಾರಂಟಿ’ಗಳ ಜಾರಿ ಕುರಿತು ಪ್ರತಿಕ್ರಿಯಿಸಿದ ಅವರು, ‘ಸಚಿವ ಸಂಪುಟದಲ್ಲಿ ಈ ಬಗ್ಗೆ ತೀರ್ಮಾನ ಆಗಬೇಕು. ಸಂಪನ್ಮೂಲಗಳ ಕ್ರೋಡೀಕರಣ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕು. ಅಲ್ಲಿಯವರೆಗೆ ಸಚಿವರುಗಳು ಈ ಬಗ್ಗೆ ವಿಶ್ಲೇಷಿಸುವುದು ಸರಿಯಲ್ಲ. ಹಾರಿಕೆ ಉತ್ತರ ಕೊಟ್ಟರೆ ಜನರ ಮನಸ್ಸಿನಲ್ಲಿ ಗೊಂದಲಗಳು ಮೂಡುತ್ತದೆ. ಹೀಗಾಗಿ, ಯಾವ ಸಚಿವರೂ ಮಾತನಾಡಬಾರದು’ ಎಂದು ಸಲಹೆ ನೀಡಿದರು.