<p><strong>ಬೆಂಗಳೂರು:</strong> ಕೊರೊನಾದಂತಹ ಸಂಕಷ್ಟ ಪರಿಸ್ಥಿತಿಯಲ್ಲೂ ನಗರದ ಬನಶಂಕರಿ ದೇವಸ್ಥಾನದ ಹುಂಡಿಯಲ್ಲಿ ₹28.60 ಲಕ್ಷ ಸಂಗ್ರಹವಾಗಿದೆ.</p>.<p>ಲಾಕ್ಡೌನ್ ಸಡಿಲಗೊಂಡ ನಂತರ, ಅಂದರೆ ಎರಡು ತಿಂಗಳಿಂದ ದೇವಸ್ಥಾನದಲ್ಲಿ ಸಾರ್ವಜನಿಕ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಎರಡು ತಿಂಗಳಲ್ಲಿ ಇಷ್ಟು ಮೊತ್ತ ಸಂಗ್ರಹವಾಗಿದೆ.</p>.<p>ಬನಶಂಕರಮ್ಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಟಿ. ವೆಂಕಟೇಶ್, ‘ಹುಂಡಿಯಲ್ಲಿ ಗರಿಷ್ಠ ₹10 ಲಕ್ಷದಿಂದ ₹15 ಲಕ್ಷ ಸಂಗ್ರಹವಾಗಬಹುದು ಎಂದು ಅಂದಾಜಿಸಿದ್ದೆವು. ಆದರೆ, ನಮ್ಮ ನಿರೀಕ್ಷೆಗಿಂತ ಎರಡು ಪಟ್ಟು ಹಣ ಸಂಗ್ರಹವಾಗಿದೆ’ ಎಂದರು.</p>.<p>‘ಅ.2 ಕ್ಕೆ ನಮ್ಮ ಮೂರು ವರ್ಷದ ಅಧಿಕಾರ ಮುಕ್ತಾಯವಾಗುತ್ತಿದ್ದು, ನಮ್ಮ ಅವಧಿಯಲ್ಲಿ ಹುಂಡಿಯಲ್ಲಿ ₹10.50 ಕೋಟಿ, ಸೀರೆ ಹರಾಜಿನಿಂದ ₹1.67 ಕೋಟಿ, ವಿಶೇಷ ಸೇವಾ ದರ್ಶನದಲ್ಲಿ ₹2.60 ಲಕ್ಷ ಸಂಗ್ರಹವಾಗಿದೆ’ ಎಂದು ಶ್ರೀನಿವಾಸ್ ಮತ್ತು ಸಮಿತಿ ಸದಸ್ಯ ಆರ್. ಅರುಣ್ಕುಮಾರ್ ಹೇಳಿದರು.</p>.<p><strong>ಆರೋಗ್ಯ ಕಿಟ್ ವಿತರಣೆ:</strong>ದೇವಸ್ಥಾನ ಸಿಬ್ಬಂದಿ ಮತ್ತು ದೇಗುಲದ ಹೊರಗೆ ಹೂವು–ಹಣ್ಣು ಮಾರುವ ವ್ಯಾಪಾರಿಗಳಿಗೆ ಉಚಿತವಾಗಿ 150 ಆರೋಗ್ಯ ಕಿಟ್ ವಿತರಿಸಲಾಯಿತು.</p>.<p>70 ಮಂದಿ ದೇವಸ್ಥಾನದ ಸಿಬ್ಬಂದಿ, ಹೊರಗಡೆ ಹೂವು, ಹಣ್ಣು ಮಾರಾಟ ಮಾಡುವ 80 ಜನರಿಗೆ ಗುರುವಾರ ಮಾಸ್ಕ್, ಫೇಸ್ ಶೀಲ್ಡ್, ಸ್ಯಾನಿಟೈಸರ್ಸ್ ಒಳಗೊಂಡ ಸುರಕ್ಷಿತ ಸಾಧನಗಳ ಹೆಲ್ತ್ ಕಿಟ್ ನೀಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕೊರೊನಾದಂತಹ ಸಂಕಷ್ಟ ಪರಿಸ್ಥಿತಿಯಲ್ಲೂ ನಗರದ ಬನಶಂಕರಿ ದೇವಸ್ಥಾನದ ಹುಂಡಿಯಲ್ಲಿ ₹28.60 ಲಕ್ಷ ಸಂಗ್ರಹವಾಗಿದೆ.</p>.<p>ಲಾಕ್ಡೌನ್ ಸಡಿಲಗೊಂಡ ನಂತರ, ಅಂದರೆ ಎರಡು ತಿಂಗಳಿಂದ ದೇವಸ್ಥಾನದಲ್ಲಿ ಸಾರ್ವಜನಿಕ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಎರಡು ತಿಂಗಳಲ್ಲಿ ಇಷ್ಟು ಮೊತ್ತ ಸಂಗ್ರಹವಾಗಿದೆ.</p>.<p>ಬನಶಂಕರಮ್ಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಟಿ. ವೆಂಕಟೇಶ್, ‘ಹುಂಡಿಯಲ್ಲಿ ಗರಿಷ್ಠ ₹10 ಲಕ್ಷದಿಂದ ₹15 ಲಕ್ಷ ಸಂಗ್ರಹವಾಗಬಹುದು ಎಂದು ಅಂದಾಜಿಸಿದ್ದೆವು. ಆದರೆ, ನಮ್ಮ ನಿರೀಕ್ಷೆಗಿಂತ ಎರಡು ಪಟ್ಟು ಹಣ ಸಂಗ್ರಹವಾಗಿದೆ’ ಎಂದರು.</p>.<p>‘ಅ.2 ಕ್ಕೆ ನಮ್ಮ ಮೂರು ವರ್ಷದ ಅಧಿಕಾರ ಮುಕ್ತಾಯವಾಗುತ್ತಿದ್ದು, ನಮ್ಮ ಅವಧಿಯಲ್ಲಿ ಹುಂಡಿಯಲ್ಲಿ ₹10.50 ಕೋಟಿ, ಸೀರೆ ಹರಾಜಿನಿಂದ ₹1.67 ಕೋಟಿ, ವಿಶೇಷ ಸೇವಾ ದರ್ಶನದಲ್ಲಿ ₹2.60 ಲಕ್ಷ ಸಂಗ್ರಹವಾಗಿದೆ’ ಎಂದು ಶ್ರೀನಿವಾಸ್ ಮತ್ತು ಸಮಿತಿ ಸದಸ್ಯ ಆರ್. ಅರುಣ್ಕುಮಾರ್ ಹೇಳಿದರು.</p>.<p><strong>ಆರೋಗ್ಯ ಕಿಟ್ ವಿತರಣೆ:</strong>ದೇವಸ್ಥಾನ ಸಿಬ್ಬಂದಿ ಮತ್ತು ದೇಗುಲದ ಹೊರಗೆ ಹೂವು–ಹಣ್ಣು ಮಾರುವ ವ್ಯಾಪಾರಿಗಳಿಗೆ ಉಚಿತವಾಗಿ 150 ಆರೋಗ್ಯ ಕಿಟ್ ವಿತರಿಸಲಾಯಿತು.</p>.<p>70 ಮಂದಿ ದೇವಸ್ಥಾನದ ಸಿಬ್ಬಂದಿ, ಹೊರಗಡೆ ಹೂವು, ಹಣ್ಣು ಮಾರಾಟ ಮಾಡುವ 80 ಜನರಿಗೆ ಗುರುವಾರ ಮಾಸ್ಕ್, ಫೇಸ್ ಶೀಲ್ಡ್, ಸ್ಯಾನಿಟೈಸರ್ಸ್ ಒಳಗೊಂಡ ಸುರಕ್ಷಿತ ಸಾಧನಗಳ ಹೆಲ್ತ್ ಕಿಟ್ ನೀಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>