‘ನನಗೆ ಮಧುಮೇಹ ಇದ್ದಿದ್ದರಿಂದ ಸೋಂಕಿನ ವಿಚಾರವಾಗಿ ಎಲ್ಲರೂ ಭೀತಿಯಲ್ಲಿದ್ದರು. ಕುಟುಂಬದ ನಾಲ್ಕೂ ಮಂದಿಗೆ ಸೋಂಕು ತಗುಲಿ, ಎಲ್ಲರಿಗೂ ಹೀಗಾಯಿತಲ್ಲಾ ಎಂಬ ಯೋಚನೆ ನನ್ನನ್ನು ಆವರಿಸಿತ್ತು. ನಾನೂ ಒಂದು ಕ್ಷಣ ಅಧೀರಳಾದೆ. ಈಗ ಕೈಕಟ್ಟಿ ಕೂರುವ ಪರಿಸ್ಥಿತಿಯಲ್ಲ, ‘ಸೋಂಕು ಬಂದಾಗಿದೆ, ಅದನ್ನು ಎದುರಿಸಲೇಬೇಕು’ ಎಂಬ ನಿರ್ಧಾರ ತೆಗೆದುಕೊಂಡೆ’.