ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನತಾ ಕರ್ಫ್ಯೂ ಹಿನ್ನೆಲೆ: ಮೆಜೆಸ್ಟಿಕ್‌ನಲ್ಲಿ ಜನರ ಪರದಾಟ

Last Updated 22 ಮಾರ್ಚ್ 2020, 10:33 IST
ಅಕ್ಷರ ಗಾತ್ರ

ಬೆಂಗಳೂರು: ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಮೆಜೆಸ್ಟಿಕ್‌ನಿಂದ ರೈಲು ಹಾಗೂ ಬಸ್‌ಗಳ ಓಡಾಟ ಸ್ಥಗಿತಗೊಂಡಿದ್ದು, ನಿಲ್ದಾಣದಲ್ಲಿ ಜಮಾಯಿಸಿರುವ 200ಕ್ಕೂ ಹೆಚ್ಚು ಮಂದಿ ತಮ್ಮ ಊರಿಗೆ ಹೋಗಲು ಪರದಾಡುತ್ತಿದ್ದಾರೆ‌.

ಉತ್ತರ ಭಾರತದವರೇ ಇದರಲ್ಲಿ ಹೆಚ್ಚಿದ್ದಾರೆ. ದೆಹಲಿ ಹಾಗೂ ಮುಂಬೈಗೆ ಹೋಗುವವರೂ ಇದ್ದಾರೆ. ಜನತಾ ಕರ್ಫ್ಯೂ ಬಗ್ಗೆ ನಮಗರ ಮಾಹಿತಿ ಇರಲಿಲ್ಲ ಎಂದು ಪ್ರಯಾಣಿಕರು ಹೇಳುತ್ತಿದ್ದಾರೆ. ರಸ್ತೆಯಲ್ಲಿ ಹಾಗೂ ನಿಲ್ದಾಣದಲ್ಲೇ ನಿಂತು ಯಾವುದಾದರೂವಾಹನ ಬರಬಹುದೆಂದು ಕಾಯುತ್ತಿದ್ದಾರೆ.

ರೈಲು ಹಾಗೂ ಬಸ್ ಸಂಚಾರವನ್ನೂ ಮಾರ್ಚ್ 31ರವರೆಗೆ ನಿರ್ಬಂಧಿಸಿರುವುದು ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT